ಎಲ್ಲೋ ನಮ್ಮ ಭಾಷೆ ಕಳೆದು ಹೋಗುತ್ತಿದೆ ಎನ್ನುವ ಸಂಕ್ರಮಣ ಕಾಲದಲ್ಲಿ ಈ ಮಹನೀಯರಿಂದ ಕನ್ನಡ ಭಾಷೆ ಮತ್ತು ಅದರ ಅಸ್ಮಿತೆಯ ಬಗ್ಗೆ ಅವರು ವಿವರಣೆ ನೀಡುವದನ್ನು ಕೇಳುತ್ತಿದ್ದಾಗ ಖಂಡಿತವಾಗಿ ಯೂ ಈ ಭಾಷೆ ಯಾವುದೇ ಕಾರಣಕ್ಕು ಕಳೆದು ಹೋಗದೆ ಈ ಜಗತ್ತು ಇರುವವರೆಗೂ ಈ ಭಾಷೆ ಉಳಿಯುತ್ತೇ ಅನ್ನುವ ಆಶಾಭಾವನೆ ಮತ್ತು ನಂಬಿಕೆ. ಈ ಮಹನೀಯರ ಸಂದರ್ಶನ ಮಾಡಿದ ಬುಕ್ ಬೃಹ್ಮಕ್ಕೆ ನನ್ನ ವಂದನೆಗಳು, ಮೇಲಾಗಿ ಈ ಮಹನೀಯರಿಗೆ ತಾಯಿ ಭುವನೇಶ್ವರಿ ಆರ್ಶಿವಾದ ಸದಾ ಇರಲಿ ಎಂದು ತುಂಬು ಹೃದಯರಿಂದ ಪ್ರಾರ್ಥಿಸುವೆ. ಅವರಿಂದ ಕನ್ನಡ ಭಾಷೆಯ ಬಗೆಗಿನ ಪ್ರಾಚೀನತೆಯ ಬಗ್ಗೆ ಮಾಹಿತಿ ಸಂಗ್ರಹಿಸಿ. ಜೈ ಕನ್ನಡ.
ಇಲ್ಲಿ ಅವರ ಮುಕ್ತ ಮಾತು, ವ್ಯಕ್ತಿತ್ವ ಇಷ್ಟ ಆಯಿತು ಸಾಧನೆಯೂ ಹೆಚ್ಚು ಬಹುಶಃ ಇವರ ಮಾತು ಮತ್ತು ಸಾಧನೆಗೆ ಆಳ ಸಮಗ್ರತೆ ಇಲ್ಲ ಅನಿಸಿತು . ದುಡುಕಿ ಬಿಡುತ್ತಾರೆ . ಮನ ಸಂತೆ . ಆಳಕ್ಕೆ ಇಳಿಯುವ, ಶೋಧಿಸುವ ಘನತೆ ಆತ್ಮ ತೃಪ್ತಿ ಇಲ್ಲ ಅನಿಸಿತು, ಅಂದರೆ ಈ ಸಂದರ್ಶನದಿಂದ ಕಟ್ಟಿ ಕೊಂಡುದು . ತುಂತುರು ಮಳೆ - ನದಿ ಆಗದ ಸೃಜನಶೀಲತೆ, ಧನ್ಯವಾದಗಳು
ಖ್ಯಾತ ಕವಿಯೊಬ್ಬರು "ಕನ್ನಡ ಕತ್ತುರಿಯಲ್ತೆ" ಎಂಬುದರ ಕುರಿತು ಮಾತನಾಡುತ್ತಾ ಎರಡೂವರೆ ಗಂಟೆಗಳಕಾಲ ಎಲ್ಲರನ್ನೂ ಮಂತ್ರಮಗ್ಧರನ್ನಾಗಿಸಿದರು! ಆಕ್ಷಣಕ್ಕೆ ಹೌದು ಹೌದೆಂಬಂತೆ ರಂಜನೀವಾಗಿ ತೋರಿಬಂದ ಅವರ ಮಾತುಗಳನ್ನು ವಿಮರ್ಶಿಸಲಾಗಿ ನನಗೆ ತಿಳಿದುಬಂದದ್ದೇನೆಂದರೆ, "ವಿಷಯವೊಂದರ ಕುರಿತು ಹೇಗೆಬೇಕಾದರೂ ಬುರುಡೆಬಿಡಬಹುದು". ನಾವು ಕನ್ನಡಿಗರು ಕನ್ನಡ ಭಾಷಿಗರ ಪ್ರದೇಶದಲ್ಲಿ ಹುಟ್ಟಿಬೆಳೆದವರು ಆಗಿರುವ ಏಕೈಕ ಕಾರಣಕ್ಕೆ ಕನ್ನಡಿಗರು ಆಗಿದ್ದೇವಷ್ಟೆ. ನಾವು ಕನ್ನಡ ಭಾಷೆಯ ಹಿರಿಮೆಯನ್ನು ಹೆಮ್ಮೆಯಿಂದ ಒಪ್ಪಿ ಸ್ವೀಕರಿಸಿದವರಲ್ಲ. ದೇಶದಲ್ಲಿ ಇರುವ ಎಲ್ಲಾ ಭಾಷೆಗಳೂ ನಮ್ಮದೇ ಆಗಿರುತ್ತದೆ. ಭಾಷೆಗಳಲ್ಲಿ ಬೇಧಭಾವ ತೋರುವುದು ಬಾಲಿಶತನ.
ಇಂದಿನ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕನ್ನಡ ಭಾಷೆ ಅನಾವುರಣಗೊಳ್ಳಲು ತಮ್ಮದೇ ಆದ ವಿಶಿಷ್ಟ ರೀತಿಯಲ್ಲಿ ಶ್ರದ್ಧಾಪೂರ್ವಕವಾಗಿ ಸೇವೆ ಸಲ್ಲಿಸಿದ ಶ್ರೀಯುತ ರ ಸೇವೆ ಅನನ್ಯವಾದದ್ದು ಹಾಗೂ ಶ್ರೀಯತರ ಕುಟುಂಬ ವರ್ಗ ಕನ್ನಡ ಸಾಹಿತ್ಯ ಮತ್ತು ಧಾರ್ಮಿಕ ಕ್ಷೇತ್ರದಲ್ಲಿ ಆಮೂಲಾಗ್ರ ಸೇವೆಯನ್ನು ಮನಗಂಡು ಹಂಪಿ ವಿಶ್ವವಿದ್ಯಾಲಯ ಗೌರವ ನಾಡೋಜ ಪ್ರಶಸ್ತಿಯನ್ನು ಶ್ರೀಯುತ ರಿಗೆ ನೀಡಬೇಕಾಗಿ ವಿನಂತಿ
ಕಾರ್ಯಕ್ರಮ ಚೆನ್ನಾಗಿ ಮೂಡಿ ಬಂದಿದೆ. ಪ್ರೊ॥ ಗೋವಿಂದರಾಜು ಅವರ ದೀರ್ಘ ಶ್ರಮದಿಂದ ಅವರ ತಂದೆ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ಮೇರು ಕೃತಿ ಬೆಳಕಿಗೆ ಬರುವಂತಾಯಿತು. ಪ್ರಕಟಿಸಿದ IBH ಪ್ರಕಾಶನದವರಿಗೆ ಕೃತಜ್ಞತೆಗಳು. ದುಂಡಿರಾಜ್ ಅವರ ಪುಸ್ತಕ ಪರಿಚಯ ಮತ್ತು ಹಂಪನಾ ಅವರ ಗೊರೂರರನ್ನು ಕುರಿತ ಬಹು ಸ್ವಾರಸ್ಯಕರವಾದ ನೆನಪುಗಳು ಎಲ್ಲವೂ ಸೊಗಸಾಗಿವೆ. - ಚಕ್ರವರ್ತಿ ಮಧುಸೂದನ
ನಮ್ಮ ಪಕ್ಕದ ಗ್ರಾಮದವರಾದ ಪುರಾಣಿಕ ಕುಟುಂಬ ಕನ್ನಡ ಧಾರ್ಮಿಕ ಸಾಹಿತ್ಯ ಇತರ ಸಾಹಿತ್ಯ ಮತ್ತು ಇತರ ಕ್ರಿಯಾತ್ಮಕ ಚಟುವಟಿಕೆ ತನ್ನದೇ ಆದ ಕೊಡುಗೆಯನ್ನು ನೀಡಿದೆ ಹಾಗೇನೆ ಶ್ರೀಯತರು ಮಾಹಿತಿ ತಂತ್ರಜ್ಞಾನದ ಕ್ಷೇತ್ರದಲ್ಲಿ ಕನ್ನಡವನ್ನು ಅನಾವರಣಗೊಳಿಸುವಲ್ಲಿ ಶ್ರದ್ಧಾಪೂರ್ವಕ ಪ್ರಯತ್ನ ಮಾಡಿರುವುದಕ್ಕೆ ನಮ್ಮ ಹೆಮ್ಮೆ ಇದೆ
Iam teacher, after school time spoke on kannada with kids but parents completed as kids are talking in kannada at home.. I left the job.....cnt change the language here do comment in english.
ಹರಿಹರ ಪ್ರಿಯ ಅವರ ವ್ಯಕ್ತಿತ್ವ ಜೀವನ ಸಾಧನೆಯಿಂದ ಇಂದಿನ ಅದೆಷ್ಟು ಸ್ಚಾರ್ಥ ಅಹಂಕಾರ ತುಂಬಿದ ಅಯೋಗ್ಯರು ಇವರ ಮೌಲ್ಯಾಧಾರಿತ ವ್ಯಕ್ತಿತ್ವ ಜೀವನ ಸಾರ್ಥಕ್ಯ ಏನೆಂಬುದನ್ನು ಕಲಿಯುವ ಅಗತ್ಯವಿದೆ.