ಏ ದಾರುಕಾ ಪಾಂಡವರಿಗೆ ಗಡ್ಡೆ ಗೆಣಸು ತಿನ್ನುವಷ್ಟು ದೌರ್ಭಾಗ್ಯ ಇಲ್ಲವಾಗಿತ್ತು.ಅವರಿಗೆ ಸೂರ್ಯದೇವನಿತ್ತ ಅಕ್ಷಯ ಪಾತ್ರೆ ಇತ್ತೆಂಬುದು ನಿನ್ನ ಗಮನಕ್ಕಿರಲಿ.ಹಾಸ್ಯಕ್ಕೆ ಹೇಳಿದರೂ ಅದು ನೈಜತೆಯ ವ್ಯಾಪ್ತಿಯಲ್ಲಿ ಇರಬೇಕು.ಕೆಲವೊಮ್ಮೆ ಈ ದಾರುಕನ ಹಾಸ್ಯ ತೀರಾ ಅಧಿಕ ಪ್ರಸಂಗವಾಗ್ತಿದೆ ಅನಿಸುತ್ತೆ.
ಸ್ತ್ರೀ ಪಾತ್ರ ಅಭಿನಯದಲ್ಲಿ ತಮ್ಮದೇ ಆದ ಛಾಪನ್ನು ಪ್ರೇಕ್ಷಕ ವರ್ಗಕ್ಕೆ ಮೂಡಿಸುವುದರಲ್ಲಿ ಅಗ್ರಗಣ್ಯರು ನಮ್ಮ ಕಲಾವಿದ ಮಿತ್ರ nilkodu. ಸಂಭಾಷಣೆ. ನೃತ್ಯ, ಉಡುಪು ತೊಡುಪು ಇವರಿಂದ ಕಲಿಯಬೇಕು. ಅತಿ ಕೌಶಲ್ಯ ಭರಿತ ಶೃಂಗಾರ ಯುಕ್ತ ವೇಷ ಭೂಷಣ ವನ್ನು ಧರಿಸಿ ರಂಗಸ್ಥಳ ವನ್ನು ಪ್ರವೇಶ ಮಾಡುವದು nilkodu ಇವರ ಪ್ರತೀತಿ. costumes ಗೆ ತಕ್ಕಂತೆ ನೃತ್ಯದಲ್ಲಿ ಮೈಮರೆವುದು ಇವರ ಶೈಲಿ. ಪಾತ್ರಕ್ಕೆ ಅನುಗುಣವಾಗಿ ಮಾತುgaarike ಇವರ ಲಕ್ಷಣ. ಒಟ್ಟಾರೆ ಯುವ ಹಗೂ ಅನುಭವಸ್ತ ಸ್ತ್ರೀ ವೇಷdhaarigalu. ನನಗೂ ಹೆಮ್ಮೆ ಇವರನ್ನು ಪದೇ ಪದೇ ನೋಡಲು. ರಾಷ್ಟ್ರ ಪ್ರಶಸ್ತಿ ಪಡೆಯಲು ಇವರು ಅರ್ಹರು.
ಯಕ್ಷಗಾನ ಜಾನ ಪದಿಯ ಕಲೆ ಆಗಿತ್ತು. ಪ್ರತಿ ಗ್ರಾಮಕ್ಕೆ ಒಂದರಂತೆ ಮೇಳ ಇತ್ತು. ಸಾಮಾನ್ಯ ಜನ ಇದರಲ್ಲಿ ಸಕ್ರಿಯರಾಗಿರುತಿದ್ದರು. ಯಾವಾಗ ತಿರುಗಾಟದ ಮೇಳಗಳು ಹುಟ್ಟಿಕೊಂಡವೋ ಅವು ಕ್ರಮೇಣ ಬಯಲಾಟ ಮೇಳಗಳನ್ನು ಕೊಂದವು. ಘಟಾನುಘಟಿ ಕಲಾವಿದರು ಕೂಡ ಬಯಲಾಟ ಮೇಳಗಳನ್ನು ಮೇಲೆ ಎತ್ತುವ ಸಾಹಸಕ್ಕೆ ಕೈ ಆಡಿಸಲಿಲ್ಲ. ಹಳ್ಳಿ ಹಳ್ಳಿಗಳಲ್ಲಿ ಬಯಲಾಟದ ಗುಂಗು ಹತ್ತಿಸಿದರೆ ಮಾತ್ರ ಈ ಕಲೆ ಉಳಿದೀತು, ಬೆಳೆದೀತು, ಬೆಳೆ ಬಂದು ಬೆಲೆ ಹೆಚ್ಚಿಸೀತು.