ಸೌಜನ್ಯ ಳ ಸಾವಿಗೆ ನ್ಯಾಯ ಸಿಕ್ಕಿದರೆ ನಾವು ಸತ್ಯ ಧರ್ಮ ನ್ಯಾಯ ಎಂದು ನಂಬುತ್ತೇವೆ, ಇಲ್ಲ ಎಂದು ಅದರೆ ಇದು ಒಂದು ರೀತಿಯಲ್ಲಿ ಪ್ರಚಾರ ಗಳು ಅಷ್ಟೇ, ಸತ್ಯ ಗೆಲ್ಲದೇ ಇದ್ದರೇ ಅಣ್ಣಪ್ಪ ಸ್ವಾಮಿ ಮಂಜುನಾಥ ಸ್ವಾಮಿಯ ಭಕ್ತರಿಗೆ ದೇವರ ಮೇಲೆ ನಂಬಿಕೆ ಭಕ್ತಿ ಹೇಗೆ ಉಳಿಯಲು ಸಾಧ್ಯ, ಸತ್ಯ ಮೇವ ಜಯತೇ ಜಸ್ಟೀಸ್ ಪಾರ್ ಸೌಜನ್ಯ
ನೀವು ಜೈಲಲ್ಲಿ ಕುತ್ಕೊಳ್ಬೇಡಿ ಮಾನ್ಯ ದಕ್ಷ ಶಾಸಕರೇ, ಅದರ ಬದಲು ನಮ್ಮ ತಾಲೂಕಿನ ರಸ್ತೆಗಳನ್ನು ಈ ಕೂಡಲೇ ಉದ್ಧರಿಸಿ, ಅಂತೆಯೇ ಕಳೆದ ವರ್ಷದ ಚುನಾವಣೆಯ ಮುಂಚೆ ಹಲವು ಗ್ರಾಮೀಣ ರಸ್ತೆ ನಿರ್ಮಿಸುವೆ ಎಂದು ಭರವಸೆ ಕೊಟ್ಟು, ಜೆಸಿಬಿ ತರಿಸಿ ಅರ್ಧಂಬರ್ಧ ಇದ್ದ ಮಾರ್ಗವನ್ನೂ ಒಕ್ಕಿ ಇದ್ದ ಕಣಿಗಳನ್ನು ಮುಚ್ಚಿ, ಈಗ ಈ ಗ್ರಾಮೀಣ ರಸ್ತೆಗಳು ಕೆರೆಗಳು ಆಗಿವೆ. ಅವನ್ನು ಈ ಕೂಡಲೇ ಸರಿಪಡಿಸಿ.
ಲೈಲಾ ದ ಸ್ಮಶಾನ ರೋಡ್ ಬೆರ್ಕೆ ಕಡೆ ನಿಮ್ಮ ಕ್ಯಾಮೆರಾ ಇಡ್ಕೊಂಡು ಬನ್ನಿ ಹೇಗೆ ಇದೆ ರೋಡ್ ಅಂತ ಗೊತಾಗುತ್ತೆ ಲೈಲಾ ಪಂಚಾಯತ್ ನ ಹಣೆಬರಹ ಗೊತಾಗುತ್ತೆ ಯಾರು ಕೂಡ ಗಮನ ಹರಿಸ್ತಾ ಇಲ್ಲ ಸುದ್ದಿ ನ್ಯೂಸ್ ನವರು ಒಮ್ಮೆ ಬನ್ನಿ ಈ ರೋಡ್ ಗೆ 🙏🏻
ಬೆಳ್ತಂಗಡಿ ತಾಲೂಕಿನ ಹೆಚ್ಚಿನ ರಸ್ತೆ ಗಳು ಕಿತ್ತು ಹೋಗಿವೆ, ಕೆಲವು ಮಣ್ಣಿನ ರಸ್ತೆ ಇರುವ ಹಳ್ಳಿ ಕಡೆ ಕಳೆದ ವರ್ಷದ ಎಲೆಕ್ಷನ್ ಗೆ ಮುಂಚೆ ರಸ್ತೆ ಮಾಡುತ್ತೇವೆ ಎಂದು ದೊಡ್ಡ ಸಭೆ ಮಾಡಿ ಓಟಿಗೋಸ್ಕರ ಪೊಳ್ಳು ಭರವಸೆ ಕೊಟ್ಟು ಜನರಿಗೆ ಪಂಗನಾಮ ಹಾಕಿದ್ದಾರೆ. ಈಗ ಎಲ್ಲಿದ್ದಾರೆ ಅಭಿವೃದ್ಧಿಯ ಹರಿಕಾರ!!!
ನಡ ಗ್ರಾಮ ಪಂಚಾಯತ್ ವ್ಯಾಪ್ತಿಯ ಕನ್ಯಾಡಿ ಪಡ್ಪು ಪ್ರದೇಶದಲ್ಲಿ ಕೈಗೆಟಕುವ ಎತ್ತರದಲ್ಲಿ ತಂತಿಗಳು ಇವೆ....ಮೆಸ್ಕಾಂ,ಪಂಚಾಯತ್ ಗೆ ತಿಳಿಸಿದರೂ ತೆರವು ಗೊಳಿಸುತ್ತಿಲ್ಲ....ರಸ್ತೆ ಬದಿಯಲ್ಲಿ ಹಾಕುವ ಅವಕಾಶ ಇದ್ದರೂ ನಮ್ಮ ಜಾಗದಲ್ಲಿ...ನಮ್ಮ ಗಮನಕ್ಕೆ ತಾರದೆ ಹಾಕಿದ್ದಾರೆ