ವಿದ್ಯೆಯ ಮಹತ್ವವನ್ನು ಪ್ರತ್ಯೇಕವಾಗಿ ಹೇಳುವ ಅಗತ್ಯವಿಲ್ಲ. ಅದರಲ್ಲೂ ಪ್ರಾರ್ಥಮಿಕ ಹಂತದ ಕಲಿಕೆಯು ಮಗುವಿನ ಸುಂದರ ಭವಿಷ್ಯ ರೂಪಿಸುವಲ್ಲಿ ಅತೀ ಮುಖ್ಯ ಹಂತವಾಗಿದೆ.
ಆದರೆ, ಶಿಕ್ಷಣದ ಪ್ರಾರ್ಥಮಿಕ ಹಂತದಲ್ಲಿಯೇ ಮಗುವಿಗೂ ಪೋಷಕರಿಗೂ ಹಲವಾರು ಸಮಸ್ಯೆಗಳು ಹಾಗೂ ಸಾಲು ಸಾಲು ಸವಾಲುಗಳು. ವಿದ್ಯೆಯ ಮಹತ್ವ ಅರಿಯದ ಮಗು ಒಂದೆಡೆಯಾದರೆ ಅತ್ಯುತ್ತಮ ಶಿಕ್ಷಣ ಒದಗಿಸಿ ತನ್ನ ಜೀವನವನ್ನು ತಾನೇ ರೂಪಿಸುವಂತೆ ಮಗುವಿಗೆ ಸಹಾಯ ಮಾಡಲು ಕಷ್ಟಪಡುವ ಪೋಷಕರು ಇನ್ನೊಂದೆಡೆ.
ಇಂತಹ ಗಂಭೀರ ಸಮಸ್ಯೆಗಳನ್ನು ಪರಿಹರಿಸಲು ಸಹಾಯವಾಗುವಂತೆ ಚೆರ್ರಿ ಲರ್ನ್ app ಮಕ್ಕಳಿಗಾಗಿ ಕಲಿಕೆಯ ಹೊಸ ರೀತಿಯನ್ನು ಒದಗಿಸುತ್ತಿದೆ. ಕಲಿಕೆಯಲ್ಲಿ ಉದಾಸೀನತೆಯನ್ನು ಹೋಗಲಾಡಿಸಿ, ಆಸಕ್ತಿಯನ್ನು ಹೆಚ್ಚಿಸಲು ಚಿತ್ರಸಹಿತ ಚಟುವಟಿಕೆಗಳು, ಆಧುನಿಕ ರೀತಿಯ ಅನಿಮೇಟೆಡ್ ವಿಡಿಯೋಗಳನ್ನು ಒಳಗೊಂಡ ಚೆರ್ರಿ ಲರ್ನ್ app, ೧ ರಿಂದ ೫ನೇ ತರಗತಿಯ ಕನ್ನಡ ಹಾಗೂ ಇಂಗ್ಲಿಷ್ ಮಾಧ್ಯಮದ ಪಠ್ಯಗಳನ್ನು ಮತ್ತು CBSE ಪಠ್ಯಗಳನ್ನು ಹೊಸ ರೀತಿಯಲ್ಲಿ ಕಲಿಯಲು ಹಾಗೂ ನೆನಪಿಟ್ಟುಕೊಳ್ಳಲು ಮಗುವಿಗೆ ಸಹಾಯ ಮಾಡುತ್ತದೆ. ಅಲ್ಲದೆ, ಮಗುವು ಕನ್ನಡ ಹಾಗೂ ಇಂಗ್ಲಿಷ್ ಗ್ರಾಮಾರ್ ಗಳನ್ನೂ ಹೊಸದಾಗಿ ಹಾಗೂ ಸುಲಭವಾಗಿ ಕಲಿಯಲು ಸಹಾಯ ಮಾಡುತ್ತದೆ.
ನೀವು ಚೆರ್ರಿ ಲರ್ನ್ app ನ್ನು Install ಮಾಡದಿದ್ದಲ್ಲಿ ಕೂಡಲೇ ಮಾಡಿ ಉಪಯೋಗವನ್ನು ಸ್ವತಃ ಪರೀಕ್ಷಿಸಿ.
ಪುಟಾಣಿಗಳ ಮೆಚ್ಚಿನ ಅಣ್ಣ ಅವರೇ ನಮ್ಮ ಪುತ್ತೂರಿನ ಉಲ್ಲಾಸಣ್ಣ...ಹೌದು ನಮ್ಮ ಬಾಲ್ಯದಲ್ಲಿ ಉಲ್ಲಾಸಣ್ಣನ ಹಾಡು ಅಂದರೆ ಅದು ಸದಾ ಅಚ್ಚುಮೆಚ್ಚು.. ನಟನೆ ಮಾಡುತ್ತಾ ನಕ್ಕು ನಗಿಸುತ್ತಾ ಮಕ್ಕಳೊಂದಿಗೆ ಮಕ್ಕಳಾಗಿ ಹಲವು ಹಾಡು ಕಥೆ ಹೇಳುತ್ತಾ ಕುಣಿಸುವುದೇ ತಮ್ಮ ಕಾಯಕ ಮಾಡಿಕೊಂಡು ಇದನ್ನು ದೇವರ ಸೇವೆ ಎಂದೇ ಭಾವಿಸಿ ಅದರಲ್ಲೇ ಸಂತೃಪ್ತಿಯೊಂದಿಗೆ ಸದಾ ನಗು ನಗುತ್ತ ಒಂದು ಜೊಳಿಗೆಯಲ್ಲಿ ಒಂದಿಷ್ಟು ತಾವೇ ಬರೆದ ಮಕ್ಕಳ ಪುಸ್ತಕ ಹಾಕಿಕೊಂಡು ಸುಮಾರು 30 ವರ್ಷಗಳಿಂದ ಲಾಭದ ಅಪೇಕ್ಷೆ ಇಲ್ಲದೆ ಪುತ್ತೂರು, ಉಪ್ಪಿನಂಗಡಿ,ಸುಳ್ಯ, ವಿಟ್ಲ ಇಲ್ಲಿನ ಅಂಗನವಡಿ, ಶಾಲೆಗಳಿಗೆ ಹೋಗಿ ಹಂಚುವ ಸರಳ ವ್ಯಕ್ತಿ ಅದು ನಮ್ಮ ಉಲ್ಲಾಸಣ್ಣ..