ಹೆಸರು ರವಿ ಬೆಳಗೆರೆ. ವಯಸ್ಸು, ಇತಿಹಾಸ ಮತ್ತು ಪ್ರಾಚ್ಯಶಾಸ್ತ್ರದಲ್ಲಿ ಎಂ.ಎ., ಮಾಡಿದ್ದೇನೆ. ಪತ್ರಿಕೋದ್ಯಮ ನನ್ನ ಹೊಟ್ಟೆ ತುಂಬಿಸುತ್ತಿದೆ. `ಪ್ರಾರ್ಥನಾ` ನಾನು ಕಟ್ಟಿದ ಶಾಲೆ. ಎರಡು ಬಾರಿ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳು ಬಂದಿವೆ.
ಹಿರಿಯರಾದ ಶಿವರಾಮ ಕಾರಂತರ ಹೆಸರಿನ ಎರಡು ಪ್ರಶಸ್ತಿಗಳನ್ನು ಪಡೆದಿದ್ದೇನೆ. ಕರ್ನಾಟಕ ಮಾಧ್ಯಮ ಅಕಾಡೆಮಿಯವರು ಪತ್ರಿಕೋದ್ಯಮದಲ್ಲಿ ನಾನು ಮಾಡಿದ್ದು ಸಾಧನೆ ಅಂದುಕೊಂಡು ಪ್ರಶಸ್ತಿ ನೀಡಿದ್ದಾರೆ. ಅಂತೆಯೇ ರಾಜ್ಯ ಸರ್ಕಾರ ನನಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿದೆ. ಓದು, ತಿರುಗಾಟ ನನ್ನ ಹವ್ಯಾಸಗಳು. ಬರವಣಿಗೆ ನನ್ನ ಆತ್ಮ ಸಮಾಧಾನದ ಸಂಗತಿ. ಎಡಪಂಥೀಯ ವಿಚಾರಧಾರೆ ನನ್ನನ್ನು ಆಕರ್ಷಿಸಿದೆ. ಚಳವಳಿಗಳಿಂದ ನಿರಾಶನಾಗಿ ದೂರ ಸರಿದಿದ್ದೇನೆ. ಪ್ರತಿಭಟನೆಗೆ ಬೇರೆ ವಿಧಾನಗಳೂ ಇವೆ ಎಂಬ ನಂಬಿಕೆ ಉಳಿದುಕೊಂಡಿದೆ, ನಲವತ್ತು ವರ್ಷದಿಂದ ನನ್ನೊಂದಿಗೆ ಸಿಗರೇಟು ಉಳಿದುಕೊಂಡಂತೆ. ನನ್ನ ಬಗೆಗಿನ ಉಳಿದ ವಿವರಗಳು ಅಂಥ ಕುತೂಹಲಕಾರಿಯಲ್ಲ.
Enjoy & Stay connected with us...!!! Subscribe to : ru-vid.com Facebook : facebook.com/ravibelagere143
ಅಣ್ಣ ಬದುಕಿದ್ದಾಗ ತುಂಬಾ ಸಾರಿ ಆಫೀಸ್ ಫಂಕ್ಷನ್ಗೆ ಬರ್ತಾ ಇದ್ದೀವಿ. ದಿಲ್ನೆ fir yaad Kiya coloumnalli ಹಲವಾರು ಆರ್ಟಿಕಲ್ ಬರೆದಿದ್ದೆ ಅಣ್ಣ ಇನ್ನೊಂದು ಹತ್ತು ವರ್ಷ ಬದುಕಿರಬೇಕಾಗಿತ್ತು.ವಿಧಿ ಆಟದಾಮುಂದೆ ನಾವೆಲ್ಲ ಯಾರು ಭಾವಣಕ್ಕ.
ಇಲ್ಲಿ ಮಲ್ಲಾಡಿಹಳ್ಳಿಯ ತಿರುಕ ರಾಘವೇಂದ್ರ ಸ್ವಾಮೀಜಿಗಳ ಜೊತೆ ಇರುವ ಯಾವ Photo ಗಳೂ ಇಲ್ಲ ಯಾಕೆ...? ಅನಾಥಸೇವಾಶ್ರಮದ ಪ್ರತೀ ಕಾರ್ಯಕ್ರಮಕ್ಕೂ ಕೃಷ್ಣಶಾಸ್ತ್ರಿಗಳು ಬರುತ್ತಿದ್ರು.... ಮತ್ತು ರಾಘವೇಂದ್ರ ಸ್ವಾಮಿಗಳು & ಕೃಷ್ಣಶಾಸ್ತ್ರಿಗಳ life journey same to same ಇತ್ತು.