ಮಾದನೂರು ಶ್ರೀವಿಷ್ಣುತೀರ್ಥರು ಮಾಧ್ವವಾಙ್ಮಯದ ಮೇರುತಾರೆ. ಕೇವಲ 50 ವರ್ಷದ ತಮ್ಮ ಜೀವಿತಾವಧಿಯಲ್ಲಿ ಸಾಧಕರಿಗೆ ಮಹದುಪಕಾರವನ್ನು ಮಾಡಿದ ಮಹನೀಯರು. ಭಾಗವತ ಸಾರೋದ್ಧಾರ, ಷೋಡಶಿ, ಚತುರ್ದಶಿ, ಅಧ್ಯಾತ್ಮರಸರಂಜನಿ ಮುಂತಾದ ಗ್ರಂಥಗಳ ಮೂಲಕ ಬಿಂಬರೂಪಿ ಪರಮಾತ್ಮನ ಉಪಾಸನಾ ಪ್ರಕಾರವನ್ನು ತಿಳಿಸಿದ ಮಹಾಜ್ಞಾನಿಗಳು. ಇಂತಹ ಜ್ಞಾನಿವರೇಣ್ಯರಾದ ಶ್ರೀವಿಷ್ಣುತೀರ್ಥರ ಮಹಿಮೆ ಮತ್ತು ಗ್ರಂಥಗಳ ಪರಿಚಯ ಆಸ್ತಿಕ ಸಮಾಜಕ್ಕೆ ಆಗಬೇಕು ಎಂಬ ಉದ್ದೇಶದಿಂದ ಈ RU-vid channel ಅನ್ನು ಪ್ರಾರಂಭಿಸಲಾಗಿದೆ. ತಾವೆಲ್ಲರೂ Subscribe, Like & Share ಮಾಡುವ ಮೂಲಕ ಪ್ರೋತ್ಸಾಹಿಸಬೇಕಾಗಿ ವಿನಂತಿ.