ಆತ್ಮೀಯ ಬಂದುಗಳೆ ಅಮ್ಮನೊಂದಿಗೆ ಉತ್ತರದೇವಿ ಕುರಿತ ಜನಪದ ಗೀತೆಯನ್ನು ಹಾಡಿರುವೆ. ಅತ್ತೆ ಸೊಸೆಯರ ನಡುವೆ ನಡೆದ ಘಟನೆಯಲ್ಲಿ ಉತ್ತರ ದೇವಿ ಎಂಬ ಸೊಸೆ ನೀರು ತರಲು ಹೋದಾಗ ತಡವಾಗಿ ಮನೆಗೆ ಬಂದಾಗ ಅತ್ತೆಯು ಅವಳ ಶೀಲವನ್ನು ಪ್ರಶ್ನಿಸಿ ಹಲಾವರು ರೀತಿಯಲ್ಲಿ ನಿಂದಿಸುತ್ತಾಳೆ. ಇಬ್ಬರ ನಡವೆ ಸಾಕಷ್ಟು ಮಾತು ಕತೆ ನಡೆದು ಉತ್ತರ ದೇವಿಯೆಂಬ ಸೊಸೆಯೇ ಬ್ಯಾಡ ಎಂದು ಮಗನಿಗೆ ಹೇಳುವಾಗ ಕೊನೆಗೆ ಉತ್ತರ ದೇವಿಯು ಇಸ್ಟೆಲ್ಲಾ ಆದರೂ ನಾನು ಇಲ್ಲಿ ಇರುವುದು ತರವಲ್ಲ ಎಂದು ತನ್ನ ತವರು ಮನೆಗೆ ಬಂದ ಸಂದರ್ಭದಲ್ಲಿ ಉತ್ತರ ದೇವಿಯ ತಾಯಿ ನಿನ್ನ ಹೆಸರು ಈ ಲೋಕದ ಮೇಲೆ ಸದಾ ಇರಲಿ ನೀನು ಉತ್ತರೆ ಮಳೆಯಾಗಿ ಹರಸು! ನಾನು ಅತ್ತದ ಮಳೆಯಾಗುವೆ. ನನ್ನ ಅರೆಯದಲ್ಲು ನಿನ್ನ ಅಪ್ಪ ಇದೇ ರೀತಿ ಕಾಡಿದ್ದ ಎಂದು ಹೇಳುವಂತಹ ಅರ್ಥಪೂರ್ಣ ಕತೆಯಾದರಿತ ಗೀತ ಸಾಹಿತ್ಯ ಇದಾಗಿದೆ. ಈಗಲೂ ಸಹ ಮಳೆಗಾಲದಲ್ಲಿ ಯಾವ ಮಳೆ ಬರಲಿಲ್ಲ ಅಂದರು ಉತ್ತರೆ ಮಳೆ ಬರುತ್ತದೆ ಎಂಬ ನಂಬಿಕೆ, ಅತ್ತದ ಮಳೆ ಎತ್ಲುದಾದರೂ ಬರುತ್ತೆ ಎನ್ನುವ ಗಾದೆ ಮಾತು ನಮ್ಮ ಹಳ್ಳಿಯ ಜನರಲ್ಲಿ ಬರುವುದು. ಜೋತೆಗೆ ಸಾಕಷ್ಟು ಜನ ವಿದ್ವಾಂಸರು ಉತ್ತರ ದೇವಿ ಕುರಿತು ಕೃಷಿ ಮಾಡಿದ್ದಾರೆ. ಇಂತಹ ಅಪರೂಪದ ಸಾಹಿತ್ಯವನ್ನು ಅವ್ವ ಬಾವನಾತ್ಮಕವಾಗಿ ಹಾಡಿದ್ದಾರೆ. ಕೇಳಿರಿ ಸ್ನೇಹಿತರಿಗೂ ಕೇಳಿಸಿ ವಂದನೆಗಳೊಂದಿಗೆ
ಮೋಹನ್ ಕುಮಾರ್
ಜನಪದ ಕಲಾವಿದ..
19 сен 2024