ಕಲ್ಕುಡ ಕಲ್ಲುರ್ಟಿ ಮೂಲಸ್ಥಾನದ ಬಗ್ಗೆ ವಿನಾಕಾರಣ ಗೊಂದಲಗಳನ್ನು ಸೃಷ್ಟಿ ಮಾಡಲಾಗುತ್ತಿದೆ. ಕರಾವಳಿಯ ದೈವಗಳೆಂದರೆ ನಮ್ಮ ಪೂರ್ವಜರು. ನಮ್ಮ ಪೂರ್ವಜರ ಜೊತೆಗೆ ಬಾಳಿ ಬದುಕಿದವರು. ಸೌಹಾರ್ಧತೆಯ ಪ್ರತೀಕವಾಗಿರುವ ದೈವಗಳ ಹೆಸರನ್ನು ಇದೀಗ ರಾಜಕೀಯ ಕಾರಣಕ್ಕಾಗಿ ಧರ್ಮ-ಧರ್ಮಗಳನ್ನು ಎತ್ತಿಕಟ್ಟಲು ಬಳಸಲಾಗುತ್ತಿದೆ. ಕಲ್ಕುಡ ಕಲ್ಲುರ್ಟಿ ಜೈನಾದಿಗೆಯ ಮೂಲಸ್ಥಾನವನ್ನು ಹೊಂದಿರುವವರು. ಅರಸೊತ್ತಿಗೆ ಪಟ್ಟ ದೈವಗಳಾಗಿರುವ ಕಲ್ಕುಡ ಕಲ್ಲುರ್ಟಿ ಯಾವುದೋ ಖಾಲಿ ಗುಡ್ಡದಲ್ಲಿ ಮೂಲಸ್ಥಾನವನ್ನು ಹೊಂದಿಲ್ಲ. ಕಲ್ಕುಡ ಕಲ್ಲುರ್ಟಿ ಹುಟ್ಟಿ, ಬದುಕಿ, ಸಾಧಿಸಿ, ಜೋಗ ಬಿಟ್ಟು ಮಾಯವಾಗಿ ರಾಜನ್ ದೈವವಾಗುವರೆಗಿನ ಮೂಲಸ್ಥಾನಗಳನ್ನು ಅಧ್ಯಯನ ಮಾಡಿ ಸಚಿತ್ರ ವರದಿಯನ್ನು ನಿಮ್ಮ ಮುಂದಿಡಲಾಗಿದೆ. ನೋಡಿ, ಕೇಳಿ ಮತ್ತು ಹಂಚಿಕೊಳ್ಳಿ...
#Kalkuda #Kallurti #Jain #Bahubali #Gommateshwara
11 дек 2020