'ಶಾಲೆಗೆ ತುಂಬಿದೆ ನಲವತ್ತು ಗುರುವೇ ನಮ್ಮ ಸಂಪತ್ತು '
ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ
ಸರ್ಕಾರಿ ಪ್ರೌಢಶಾಲೆ ದಳವಾಯಿ ಕೋಡಿಹಳ್ಳಿಯು ಗ್ರಾಮೀಣ ಭಾಗದಲ್ಲಿ ಬಸವನ ಬೆಟ್ಟ ಮತ್ತು ಭೀಮನಕಿಂಡಿ ಬೆಟ್ಟಗಳ ನಡುವಿನ ಹಸಿರು ಸಿರಿಯ ನಡುವೆ 1984 ರಲ್ಲಿ ತಲೆಯೆತ್ತಿ ನೂರಾರು ವಿದ್ಯಾರ್ಥಿಗಳ ಬದುಕಿಗೆ ಉಸಿರು ನೀಡಿದೆ. ಈ ಶಾಲೆ ಇದೀಗ ಸುವರ್ಣ ಮಹೋತ್ಸವದತ್ತ ಸಾಗುತ್ತಿರುವುದು ನಮಗೆಲ್ಲ ಅಭಿಮಾನದ ಸಂಗತಿಯಾಗಿದೆ. ಸರ್ಕಾರಿ ಶಾಲೆಯಾದರೂ ಸಹ ಆರಂಭದ ದಿನದಿಂದಲೂ ಗುಣಾತ್ಮಕ ಶಿಕ್ಷಣದಿಂದ ಈ ಭಾಗದ ಜನರ ಪ್ರೀತಿಗೆ ಪಾತ್ರವಾಗಿದ್ದು. ಫಲಿತಾಂಶದಲ್ಲಿ ಗಣನೀಯ ಪ್ರಗತಿ ಸಾಧಿಸುತ್ತಾ ಬಂದಿದೆ. ಕರ್ತವ್ಯ ಪ್ರಜ್ಞೆಯ ಗುರುಗಳಿಂದ ಕೂಡಿದ್ದು ಈ ಶಾಲೆಯು ಈಗಾಗಲೇ ವಿದ್ಯಾವಂತ ಸತ್ಪ್ರಜೆಗಳ ಸಮೂಹವನ್ನು ನಾಡಿಗೆ ಕಾಣಿಕೆಯಾಗಿ ನೀಡಿದೆ. ಇಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ಅರ್ಥಪೂರ್ಣವಾದ ಬದುಕನ್ನು ಕಟ್ಟಿಕೊಂಡಿರುವುದು ಈ ಶಾಲೆಯ ಹಿರಿಮೆಗೆ ಸಾಕ್ಷಿಯಾಗಿದೆ. ಶಾಲೆಯು 40 ವಸಂತಗಳನ್ನು ಪೂರೈಸಿರುವ ಈ ಸುಸಮಯದಲ್ಲಿ ನಮಗೆ ವಿದ್ಯೆ ನೀಡಿ ಬೆಳಕಿನತ್ತ ಮುನ್ನಡೆಸಿದ ಗುರು ದೇವರಿಗೆ ಹೂ'ದಳ'ವನ್ನರ್ಪಿಸಿ ಭಕ್ತಿ 'ಕೋಡಿ'ಯನ್ನು ಹರಿಸಿ, ಗೌರವಿಸಿ, ಸತ್ಕರಿಸಲು ಹಾಗೂ ಜ್ಞಾನ ದೇಗುಲದ ಮೇಲಿನ ಅಭಿಮಾನವನ್ನು ಪ್ರಕಟಿಸಲು ಆಯೋಜಿಸಿರುವ ಗುರುದೇವೋಭವ, ಗುರು ಶಿಷ್ಯರ ಸಮ್ಮಿಲನ 🙏
ಮಂಡ್ಯ ಜಿಲ್ಲೆ,ಮಳವಳ್ಳಿ ತಾಲ್ಲೂಕು, ದಳವಾಯಿ ಕೋಡಿಹಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆ 😊
22 сен 2024