ರಂಗಸ್ಥಳದ ಅತಿಥಿ ಜನ್ಸಾಲೆ ರಾಘವೇಂದ್ರ ಆಚಾರ್ಯ
ಗಾನಗಂಧರ್ವ ಕಾಳಿಂಗ ನಾವುಡರ ಅಭಿಮಾನಿ ಯಕ್ಷ ಗಂಧರ್ವನಾಗಿ ರಂಗಸ್ಥಳದಲ್ಲಿ ಮಿಂಚಿ, ಪ್ರೇಕ್ಷಕರನ್ನು ಮೋಡಿಮಾಡಿದ ಕರಾವಳಿಯ ಕಂಚಿನ ಕಂಠದ ಕೋಗಿಲೆ ಜನ್ಸಾಲೆ ರಾಘವೇಂದ್ರ ಆಚಾರ್ಯ.
ಬಡತನದಲ್ಲಿ ಹುಟ್ಟಿದ ಈ ಕಲಾಕುಸುಮ ಬಡಗುತಿಟ್ಟಿನ ರಂಗಸ್ಥಳದಲ್ಲಿ ತನ್ನ ಕೋಗಿಲೆ ಕಂಠದಲ್ಲಿ ಮಿಂಚಿ ದೇಶವಿದೇಶಗಳಲ್ಲಿ ಪ್ರಖ್ಯಾತಿ ಪಡೆದ ಓರ್ವ ಮೇರು ಕಲಾವಿದ. ಜನ್ಸಾಲೆಯವರು ತನ್ನ ಬಡತನವನ್ನೇ ಮೆಟ್ಟಿನಿಂತು ತನ್ನ ಸ್ವರದಿಂದ ಸಿರಿವಂತಿಕೆಯ ದಾರಿ ಕಂಡುಕೊಂಡ ಅದ್ಭುತ ಕರಾವಳಿಯ ಪ್ರತಿಭೆ, ಕಾಳಿಂಗ ನಾವುಡರ ಅಪ್ಪಟ ಅಭಿಮಾನಿಯಾಗಿದ್ದ ರಾಘವೇಂದ್ರಾಚಾರ್ಯ ಅವರ ಪ್ರೇರಣೆಯಿಂದ ರಂಗಸ್ಥಳಕ್ಕೆ ಧುಮುಕಿದರು ನಂತರ ತನ್ನ ಅದ್ಭುತ ಕಂಠದಿಂದ ಬಡಗುತಿಟ್ಟಿನಲ್ಲಿ ಅತಿ ಚಿಕ್ಕ ವಯಸ್ಸಿನಲ್ಲೇ ಪ್ರಧಾನ ಭಾಗವತರಾಗಿ ಹೊರಹೊಮ್ಮಿದರು. ಅನೇಕ ಅಪಮಾನ ಅವಮಾನಗಳನ್ನು ಗೆದ್ದು ಸಾಧಿಸಿದರೆ ಸಬಳವನ್ನೂ ನುಂಗಬಹುದು ಎನ್ನುವ ಗಾದೆ ಮಾತಿಗೆ ಬದ್ಧರಾಗಿ ಬದುಕು ಕಂಡುಕೊಂಡವರು. ತನ್ನ ಮೌನದಿಂದಲೇ ಎಲ್ಲ ಉತ್ತರವನ್ನು ನೀಡಿ, ದ್ವೇಷಗಳನ್ನು ಪ್ರೀತಿಸುವ ಮನೋಭಾವದೊಂದಿಗೆ ಬದುಕು ಕಟ್ಟಿಕೊಂಡ ಈ ಅದ್ಭುತ ಕಲಾವಿದ ಇನ್ನಷ್ಟು ವಿಚಾರಗಳನ್ನು ಈ ಸಂದರ್ಶನ ಕಾರ್ಯಕ್ರಮದಲ್ಲಿ ನೀವೇ ನೋಡಿ.
#ಯಕ್ಷಗಾನ#ರಂಗಸ್ಥಳ#ಗಂಡುಕಲೆ
#ನೇರ #ನಿಷ್ಠುರ #ಸ್ಪಷ್ಟ #ನೈಜ #ಸುದ್ದಿ #ಡೆಮಾಕ್ರಟಿಕ್
#ರಂಗಸ್ಥಳ#ಯಕ್ಷಗಾನ#ಕರಾವಳಿ
#ಗಂಡುಕಲೆ#ನೈಜವಿದ್ಯಮಾನ #ವಿಶ್ಲೇಷಣೆ #democratictv #democraticnews #webportal #television #democratic #tv #news #karnataka #udupi #accident
2 авг 2020