ನಮ್ಮೊಳಗಿನ ಸತ್ಯವನ್ನು ಸಹಜವಾಗಿ ತಿಳಿಯಲು ಹೀಗೆ ಮಾಡಿ | ಅವಧೂತ ಶ್ರೀ ವಿನಯ್ ಗುರೂಜಿ
ನಾವು ಧ್ಯಾನ ಮಾಡುವುದು ಅಂದರೆ ನಮ್ಮೊಳಗಿನ ಚೈತನ್ಯವನ್ನೇ ನಾವು ಧ್ಯಾನ ಮಾಡುವುದು. ಅಂದರೆ ನಾವು ನಮ್ಮೊಳಗಿರುವ ಕಾರಣ ಶರೀರವನ್ನು ಧ್ಯಾನ ಮಾಡುವುದು ಎಂದರ್ಥ. ಇದನ್ನು ಸ್ವಸ್ವರೂಪ ಅನು ಸಂಧಾನ ಎಂದು ಭಗವದ್ಪಾದರು ಹೇಳುತ್ತಾರೆ. ಧ್ಯಾನ ಮಾಡುವುದರಿಂದ ಶರೀರದ ಎಲ್ಲಾ ಭಾಗಗಳಿಗೂ ಉಸಿರು ಸಮಾನವಾಗಿ ಹಂಚಿಕೆಯಾಗುತ್ತದೆ. ಇದರಿಂದ ನಮ್ಮ ಆರೋಗ್ಯ ಮತ್ತು ತ್ವಛೆಯಲ್ಲಿ ಬೆಳವಣಿಗೆಯುಂಟಾಗುತ್ತದೆ. ಧ್ಯಾನ ಮಾಡುವ ಸಂದರ್ಭದಲ್ಲಿ ನಮ್ಮ ಉಸಿರಾಟವನ್ನು ಸಾಮಾಣ್ಯ ವೇಗದಲ್ಲಿ ಹಗುರವಾಗಿ ಒಳಗೆ ಎಳೆದುಕೊಂಡು ನಿಧಾನವಾಗಿ ಬಿಡುವುದರಿಂದ ನಮ್ಮ ಶರೀರದ ಹೆಬ್ಬೆಟ್ಟಿನಿಂದ ನೆತ್ತಿಯ ತನಕ ಹಗುರವಾದ ಅನುಭವ ಸಿಗುತ್ತದೆ. ಇದನ್ನೇ ಧ್ಯಾನ ಅನ್ನುವುದು. ತನ್ನನ್ನು ತಾನು ಅರಿತ ದಿನ ಸತ್ಯದ ಪರಾಕಾಷ್ಟೆಯ ಪರಿಚಯ ಆಗುತ್ತದೆ ಎಂದು ವಚನಕಾರರು ಹೇಳಿದ್ದಾರೆ. ಇದಕ್ಕೆ ಯಾವುದೇ ವಸ್ತ್ರ, ಆಹಾರ ನಿಬಂಧನೆಗಳೂ ಇಲ್ಲ. ಅವನವನ ಮನಸ್ಸಿಗೆ ಇಷ್ಟವಾಗುವ ರೀತಿಯಲ್ಲಿ ಧ್ಯಾನ ಮಾಡುವುದೇ ಸಹಜ ಮಾರ್ಗ. ಇದರಿಂದ ಸತ್ಯವನ್ನು ಸಹಜವಾಗಿ ನೋಡಲು ಸಾಧ್ಯವಾಗುತ್ತದೆ.
14 июн 2024