ಬೆಳ್ಳೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಪಡುಬೆಳ್ಳೆ ಪರಿಶಿಷ್ಟ ಪಂಗಡದ ಮನೆಗಳಿಗೆ ಪೇಜಾವರ ಶ್ರೀ ಭೇಟಿ ಬೆಳ್ಳೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಪಡುಬೆಳ್ಳೆ ಪರಿಶಿಷ್ಟ ಪಂಗಡ ಕೊರಗ ಸಮುದಾಯದ ಶ್ರೀಮತಿ ಮೋಹಿನಿ ಮತ್ತು ಸಂಜೀವ ಇವರು ನೂತನವಾಗಿ ನಿರ್ಮಿಸಿದ ಮನೆಗೆ ಪೇಜಾವರ ಶ್ರೀಗಳಾದ ಶ್ರೀ ಶ್ರೀ ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿಯವರು ಭೇಟಿ ನೀಡಿ ಫಲ ಮಂತ್ರಾಕ್ಷತೆ ನೀಡಿ ಆಶೀರ್ವದಿಸಿದರು. ಈ ಸಂದರ್ಭ ಬೆಳ್ಳೆ ಗ್ರಾಮ ಪಂಚಾಯತ್ ನ ಅಧ್ಯಕ್ಷೆ ಶ್ರೀಮತಿ ದಿವ್ಯ ವಿ ಆಚಾರ್ಯ, ಉಪಾಧ್ಯಕ್ಷ ಶಶಿಧರ ವಾಗ್ಳೆ, ಸದಸ್ಯರಾದ ಪರಶುರಾಮ್ ಭಟ್, ಪ್ರೇಮ ವೆಂಕಟೇಶ್, ಹರೀಶ್ ಶೆಟ್ಟಿ, ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕರಾದ ಶ್ರೀ ಮಧ್ವರಾಜ್ ಭಟ್, ವಿಶ್ವ ಹಿಂದೂ ಪರಿಷತ್ತಿನ ಪ್ರಮುಖರಾದ ವಿಶ್ವನಾಥ ಶೆಟ್ಟಿ, ವಿಕಾಸ್ ಪೂಜಾರಿ,ವೀರೇಂದ್ರ ಪಾಟ್ಕರ್, ರಾಕೇಶ್ ಆಚಾರ್ಯ ರಮೇಶ್ ಪೂಜಾರಿ ಮತ್ತು ಮೋಹಿನಿ ಸಂಜೀವ ರವರ ಕುಟುಂಬ ವರ್ಗ ಮತ್ತು ಕೊರಗ ಸಮುದಾಯದ ಬಂಧುಗಳು ಬಂಧುಗಳು ಭಾಗವಹಿಸಿ ಶ್ರೀಗಳಿಂದ ಫಲ ಮಂತ್ರಾಕ್ಷತೆ ಸ್ವೀಕರಿಸಿದರು.
10 окт 2024