ಪೇಟೆಗಳಲ್ಲಿ ವಾಸಿಸುತ್ತಿರುವವರು ಈ ಅಭ್ಯಾಸವನ್ನು ಬದಲಿಸಲೇಬೇಕು! | ಅವಧೂತ ಶ್ರೀ ವಿನಯ್ ಗುರೂಜಿ
ಸಂಸಾರದ ಸಮತೋಲನ ಹೇಗೆ ಕಾಪಾಡುವುದು ಎನ್ನುವುದು ಹಲವರ ಪ್ರಶ್ನೆ. ಸಂಸಾರ ಎಂದರೆ ಎಲ್ಲರೂ ಒಂದೇ ದೃಷ್ಟಿಕೋನ ಮತ್ತು ಮನಸ್ಥಿತಿಯಲ್ಲಿ ಬದುಕುವ ರೀತಿ. ಪ್ರಸ್ತುತ ಸಂಸಾರದಲ್ಲಿ ಅಸಮತೋಲನ ಉಂಟಾಗಲು ತಾನು ಮೇಲು ಎನ್ನುವ ಅಹಂಕಾರವೇ ಕಾರಣ. ಸಂಸಾರದ ಹಾದಿಯನ್ನು ಹಳ್ಳಿ ಮತ್ತು ನಗರವಾಸಿಗಳ ಜೀವನ ಶೈಲಿಯೊಂದಿಗೆ ಹೋಲಿಸಬಹುದು. ಹಳ್ಳಿಯಲ್ಲಿ ಎಷ್ಟೇ ಕಷ್ಟ ಕಾರ್ಪಣ್ಯಗಳಿದ್ದರೂ ತಂದೆ ತಾಯಿಯರನ್ನು ವೃದ್ಧಾಶ್ರಮಕ್ಕೆ ಹಾಕುವುದಿಲ್ಲ. ಮಕ್ಕಳ ವಿದ್ಯಾಭ್ಯಾಸಕ್ಕೂ ಹಳ್ಳಿಯಲ್ಲಿ ಪ್ರೊತ್ಸಾಹವಿದೆ. ಗ್ರಾಮಗಳಲ್ಲಿ ಮನೆಗೆ ಅತಿಥಿಗಳು ಬಂದಾಗ ತೋರುವ ಆದರಾಥಿತ್ಯಗಳನ್ನು ಸಿಟಿಗಳಲ್ಲಿ ನಿರೀಕ್ಷಿಸುವುದು ಕಷ್ಟ. ಹಳ್ಳಿಗಳಲ್ಲಿ ಮನುಷ್ಯತ್ವವನ್ನು ದುಡ್ಡಿನಿಂದ ಅಳೆಯುವ ಪ್ರಮೇಯ ಬರುವುದಿಲ್ಲ. ಮನುಷ್ಯತ್ವ ಆಧ್ಯಾತ್ಮದ ಮೂಲ ತತ್ವವಾಗಿದೆ. ಹಳ್ಳಿಗಳಲ್ಲಿ ಸಮಾನ ಭಾವ ಮತ್ತು ಸಾಮರಸ್ಯ ಸಂಸಾರದಲ್ಲಿರುತ್ತದೆ. ಹಳ್ಳಿಗಳಲ್ಲಿ ಗಲಾಟೆಗಳಾದರೂ ಅದು ನಾಲ್ಕು ಗೋಡೆಗಳ ಒಳಗೆ ಬಗೆಹರಿಯುತ್ತದೆ. ಇದು ಹಳ್ಳಿಗರ ಪ್ರಬುದ್ಧತೆಯನ್ನು ಪ್ರದರ್ಶಿಸುತ್ತದೆ. ಹಳ್ಳಿಗಳಲ್ಲಿ ವಾಸಿಸುವವರ ವಿದ್ಯಾಭ್ಯಾಸ ಕೊಂಚ ಕಡಿಮೆಯೇ ಇದ್ದರೂ ಅವರ ಪ್ರಬುದ್ಧತೆ ಅವರ ಕೆಲಸದಲ್ಲಿರುತ್ತದೆ. ಪೇಟೆಗಳಿಗೆ ಹೋಲಿಸಿದರೆ ಹಳ್ಳಿಗಳಲ್ಲಿ ಖಾಯಿಲೆಗಳು ಕಮ್ಮಿ. ನಗರಗಳಲ್ಲಿ ಒತ್ತಡದಿಂದಲೇ ಹಲವು ಖಾಯಿಲೆಗಳು ಉಂಟಾಗುತ್ತದೆ. ಹಳ್ಳಿಗಳಲ್ಲಿ ಮಕ್ಕಳು ಮತ್ತು ಶಿಕ್ಷಕರ ನಡುವಿನ ಸಂಬಂಧಕ್ಕೂ ನಗರಗಳಲ್ಲಿ ಮಕ್ಕಳು ಮತ್ತು ಶಿಕ್ಷಕರ ನಡುವಣ ಸಂಬಂಧಗಳಲ್ಲೂ ವ್ಯತ್ಯಾಸವನ್ನು ಕಾಣಬಹುದು. ಹಳ್ಳಿಗಳಲ್ಲಿ ವಿದ್ಯಾಭ್ಯಾಸ ಪಡೆಯುವ ಮಕ್ಕಳಿಗೆ ವಾಸ್ತವಿಕವಾಗಿಯೇ ಸಂಸ್ಕಾರ ದೊರೆಯುತ್ತದೆ. ಹಳ್ಳಿಗಳಲ್ಲಿ ವಿದ್ಯಾರ್ಥಿಗಳು ಶಿಕ್ಷಕರನ್ನು ದೈವೀ ಭಾವದಲ್ಲಿ ಕಾಣುತ್ತಾರೆ. ಆದರೆ ಮಹಾನಗರಗಳಲ್ಲಿ ಇಂತಹಾ ಬಾಂಧವ್ಯಗಳನ್ನು ಕಾಣಲು ಸಾಧ್ಯವಾಗುವುದಿಲ್ಲ. ರೆಸಿಡೆನ್ಸಿ ಶಾಲೆಗಳಲ್ಲಿ ಓದಿದ ಮಕ್ಕಳು ಭಾವದ ಕೊರತೆಯನ್ನು ಅನುಭವಿಸುತ್ತಾರೆ. ಭಾರತೀಯರ ರಥ ಭಾವನೆಯಿಂದ ಮುನ್ನಡೆಯಿತೇ ವಿನಃ ಶಿಕ್ಷಣದಿಂದಲ್ಲ. ಹಳ್ಳಿಗಳಲ್ಲಿ ವೈವಾಹಿಕ ಸಂಬಂಧದಲ್ಲಿ ಎಷ್ಟೇ ಕಷ್ಟಗಳು ಬಂದರೂ ದೂರ ಹೋಗುವುದಿಲ್ಲ. ಮಕ್ಕಳಿಗೆ ವಿದ್ಯಾಭ್ಯಾಸ ಕೊಡುವ ಉದ್ದೇಶದಲ್ಲಿ ಸಾಮರಸ್ಯದಿಂದ ಬದುಕುವುದೂ ಒಂದು. ಆದರೆ ಆ ಗುಣ ನಗರಗಳಲ್ಲಿ ಕಣ್ಮರೆಯಾಗುತ್ತಿದೆ. ಮನಸ್ಸಿನ ಭಾವದಿಂದ ಪ್ರೀತಿ ಹುಟ್ಟುತ್ತದೆ ಆದರೆ ಪೇಟೆಗಳಲ್ಲಿನ ಯುವಕರಿಗೆ ಈ ಭಾವನೆಯ ಬೆಲೆ ತಿಳಿದಿಲ್ಲ. ತಂದೆ ತಾಯಿಯ ವಿರುದ್ಧವಾಗಿಯೇ ಕೋರ್ಟ್ ಮೆಟ್ಟಿಲೇರುವ ಮಕ್ಕಳೂ ಇದ್ದಾರೆ. ಇದು ಭಾರತದ ಮಣ್ಣಿನ ಗುಣವನ್ನು ಮರೆತ ಫಲಿತಾಂಶ. ಪುರಾಣದ ಮಹಾಪುರುಷರ ರೀತಿಯ ಬದುಕನ್ನು ಹಳ್ಳಿಗಳಲ್ಲಿ ಮಾತ್ರ ಕಾಣಲು ಸಾಧ್ಯ. ರಾಮನ ಬಗ್ಗೆ ಮಾತನಾಡುವವರು ಮೊದಲು ರಾಮನ ಆದರ್ಶಗಳನ್ನು ಪಾಲಿಸಬೇಕು. ಪ್ರೀತಿ ಮತ್ತು ಸಾಮರಸ್ಯಕ್ಕೆ ಸಮಾನ ಮನಸ್ಥಿತಿ ಮುಖ್ಯವೇ ಹೊರತು ವರ್ಗಗಳಲ್ಲ. ಸಾಮಾನ್ಯ ಪ್ರಜ್ಞೆಯ ಕೊರತೆ ಹಳ್ಳಿಗರಿಗಿಲ್ಲ ನಗರವಾಸಿಗಳಿಗೇ ಹೆಚ್ಚು ಬಾಧಿಸುವುದು. ಸಿಟಿಗಳಲ್ಲಿ ಸಂಬಂಧದ ಕೊರತೆ ಎದ್ದುಕಾಣುತ್ತಿದೆ. ಇದನ್ನು ಜ್ಯೋತಿಷ್ಯ ಸರಿಮಾಡುವುದಿಲ್ಲ. ಅಮ್ಮ ಮತ್ತು ಮಗುವಿನ ನಡುವಿನ ವಾತ್ಸಲ್ಯ ವ್ಯಕ್ತವಾಗಲು ಮೊದಲು ತಾಯಿ ತನ್ನ ಮಗುವಿನೊಂದಿಗಿರಬೇಕಾಗುತ್ತದೆ. ಹಣದ ಹಿಂದೆ ಬಿದ್ದವರು ಕೆಟ್ಟ ದಾರಿಯನ್ನು ತುಳಿಯುತ್ತಾರೆ. ನಗರಗಳಲ್ಲಿ ಅಪರಾಧದ ಪ್ರಮಾಣ ಹೆಚ್ಚಾಗುವ ಮೂಲ ಕಾರಣ ಪ್ರಾಮಾಣಿಕತೆ ಮತ್ತು ಪಾರದರ್ಶಕತೆಯ ಕೊರತೆಯೇ ಆಗಿದೆ. ಮನುಷ್ಯತ್ವ ಮನುಷ್ಯನಲ್ಲಿ ಇಲ್ಲದಿದ್ದರೆ ಆ ಪಾಪಕ್ಕೆ ಪರಿಹಾರವಿಲ್ಲ. ವಿದ್ವಾಂಸ ಎಂದರೆ ವಿವೇಕ ಶೀಲನಾಗಿರಬೇಕು. ಆದರೆ ಪ್ರಸ್ತುತ ಬಿರುದು ಬಾವಲಿಗಳ ಅರ್ಥ ತಿಳಿಯದೆ ಅದನ್ನು ತಲೆಯ ಮೇಲಿರಿಸುತ್ತಿದ್ದೇವೆ. ಭಾರತೀಯರದ್ದು ಆಧಾರದ ಪ್ರತೀಕವಾದ ಆಲದ ಮರದ ಗುಣ. ಪಶು ಪಕ್ಷಿಗಳಲ್ಲಿರುವ ವಾತ್ಸಲ್ಯದಿಂದ ಮನುಷ್ಯ ಕಲಿಯಬೇಕಾದ ಅಂಶ ಹಲವಿದೆ. ವೈಕುಂಠ ಏಕಾದಶಿಯ ನಿಜವಾದ ಅರ್ಥವನ್ನು ಮತ್ತು ಅದರ ಹಿನ್ನೆಲೆಯನ್ನು ತಿಳಿದುಕೊಳ್ಳಬೇಕು. ತಮ್ಮ ಜೊತೆಯಲ್ಲಿರುವವರ ಕಾಲೆಳೆದು ಬದುಕುವವರು ತಮ್ಮ ಜೀವನದಲ್ಲೂ ಸಫಲತೆಯನ್ನು ಕಾಣುವುದಿಲ್ಲ. ಪ್ರಾಮಾಣಿಕ, ಪಾರದರ್ಶಕವಾಗಿ ಬದುಕಿದರೆ ನಟಿಸುವ ಪ್ರಮೇಯ ಬೀಳುವುದಿಲ್ಲ.
For More Videos:
ಅವಧೂತರಿಂದ ಸಾಮಾಜಿಕ ಕಾರ್ಯಗಳು|ನೇತ್ರ ತಪಾಸಣಾ ಶಿಬಿರ|ಗಾಂಧೀ ಕುಟೀರ ಭೂಮಿ ಪೂಜೆ|Social Activities by Avadhootha • ಅವಧೂತರಿಂದ ಸಾಮಾಜಿಕ ಕಾರ್...
ಅವಧೂತರಿಂದ ಬ್ಯಾಹಟ್ಟಿಯಲ್ಲಿ ಗ್ರಾಮದೇವತೆ ಪ್ರಾಣ ಪ್ರತಿಷ್ಠಾಪನೆ|Gramadevate Pranapratishthapana by Avadhootha • ಅವಧೂತರಿಂದ ಬ್ಯಾಹಟ್ಟಿಯಲ್...
ನಾಗಲಿಂಗ ಮಹಾಸ್ವಾಮಿಗಳ ಜೀವಂತ ಸಮಾಧಿಗೆ ಅವಧೂತರ ಭೇಟಿ|Avadhootha visited living tomb of Nagalinga Mahaswamy • ನಾಗಲಿಂಗ ಮಹಾಸ್ವಾಮಿಗಳ ಜೀ...
ನಾವೆಲ್ಲರೂ ನಿಮಿತ್ತ ಮಾತ್ರ | We are all here only for a reason • ನಾವೆಲ್ಲರೂ ನಿಮಿತ್ತ ಮಾತ್...
ಜೀವನ ಬದಲಿಸಿದ 5 ಪುಸ್ತಕಗಳು | 5 Books which changed my life • ಜೀವನ ಬದಲಿಸಿದ 5 ಪುಸ್ತಕಗ...
#AvadhoothaSriVinayGuruji #trending #blessings #srivinayguruji #vinayguruji #guruji #youtube #youtubeislife #youtubeguru #youtubecontent #newvideo #subscribers #youtubevideo #youtuber #youtubevideos #india #gurujispeech #shivaspeech #shivaratri #shivaratripuja #aradhana #lordshiva #Nonvegetarianism #idolatry #eating #idolsofgods #Buddha #BhagavadGita #Wife #wifehusband #life
6 окт 2024