ಬುದ್ದ ಪೂರ್ಣಿಮ: ಇವುಗಳ ಬಗ್ಗೆ ತಿಳಿದುಕೊಳ್ಳಲೇಬೇಕು | ಅವಧೂತ ಶ್ರೀ ವಿನಯ್ ಗುರೂಜಿ
ಸ್ಪಷ್ಟತೆಯಿರುವ ಬದುಕು, ಸ್ಪಷ್ಟತೆಯಿರುವ ನಡವಳಿಕೆ, ಸ್ಪಷ್ಟತೆಯಿರುವ ನುಡಿ ಮತ್ತು ನಡೆಯ ಬುದ್ದಿ ಇದ್ದವನ ಪೂರ್ಣಿಮೆಯೇ ಬುದ್ದ ಪೂರ್ಣಿಮ. ಇವೆಲ್ಲವೂ ಬುದ್ದನಿಗಿತ್ತು. ತಾನು ಮಾಡುವ ಕೆಲಸವೇನು, ಏನು ಮಾಡಬೇಕು ಮತ್ತು ಮಾಡುವುದರ ಉದ್ದೇಶ ಏನು ಎಂಬುದರ ಬಗ್ಗೆ ಸಂಕ್ಷಿಪ್ತವಾದ ಅರಿವು ಬುದ್ದನಲ್ಲಿತ್ತು. ಬುದ್ದನ ಜೀವನವೇ ಪವಿತ್ರವಾಗಿತ್ತು. ಬುದ್ದನ ಹುಟ್ಟೇ ಅಗ್ನಿಯ ಮೂಲದಿಂದ ಉಂಟಾಗಿರುವುದು. ವಿಷ್ಣುವಿನ ವೈರಾಗ್ಯ ಅವತಾರವನ್ನು ಬುದ್ದಾವತಾರ ಎಂದು ಹೇಳಲಾಗುತ್ತದೆ. ಬುದ್ದ ತನ್ನೊಳಗೆ ಬಂದಿರುವ ಪ್ರಶ್ನೆಗಳಿಗೆ ಉತ್ತರವನ್ನು ಕಂಡು ಕೊಳ್ಳಲು ತಪಸ್ಸಿಗೆ ತೆರಳಿರುತ್ತಾನೆ. ಪ್ರಮುಖವಾಗಿ ಅಸೂಯೆ, ವ್ಯಾಧಿ ಹಾಗೂ ಮೃತ್ಯು ವಿನ ಬಗ್ಗೆ ಬಲವಾದ ಪ್ರಶ್ನೆಗಳು ಹುಟ್ಟಿರುವುದರಿಂದಲೇ ಈ ಪ್ರಶ್ನೆಗಳು ಅಥವಾ ಭಯದಿಂದ ಮುಕ್ತಿ ಹೊಂದುವುದು ಹೇಗೆ ಎಂದು ಕಂಡುಕೊಳ್ಳಲು ತಪಸ್ಸು ಮಾಡಿ ಸತ್ಯವನ್ನು ಕಂಡುಕೊಳ್ಳಲು ಪ್ರಯತ್ನ ಮಾಡುತ್ತಾನೆ. ಇನ್ನು ಬುದ್ದ ತಪಸ್ಸಿಗೆ ಹೋಗುವಾಗಲೂ ತನ್ನ ಕುಟುಂಬವನ್ನು ಚೆನ್ನಾಗಿ ನೋಡಿಕೊಳ್ಳುವಂತೆ ಹೇಳಿ ಹೋಗಿರುತ್ತಾನೆ. ಇದೇ ರೀತಿ ನಾವು ಕೂಡಾ ನಮ್ಮ ಕುಟುಂಬಗಳ ಬಗ್ಗೆ ಕಾಳಜಿಯನ್ನು ಹೊಂದಿರಬೇಕು. ಹಾಗೆಯೇ ನಮ್ಮ ದಾರಿಯೂ ಸ್ಪಷ್ಟವಾಗಿರಬೇಕು. ಅದೇ ರೀತಿ ನಮ್ಮ ಜೀವನದಲ್ಲೂ ಪ್ರಶ್ನೆಗಳು ಹುಟ್ಟಿದಾಗ ಅವುಗಳಿಗೆ ಉತ್ತರವನ್ನು ಕಂಡುಕೊಳ್ಳಲು ಪ್ರಯತ್ನ ಮಾಡಬೇಕು.
21 июн 2024