ದೇವಸ್ಥಾನವನ್ನು ಸಕಲೇಶಪುರದ ಗುಪ್ತರತ್ನ ಎಂದೇ ಕರೆಯಬಹುದು. ಏಕೆಂದರೆ ಹಲವಾರು ಮಂದಿ ಪ್ರವಾಸಿಗರಿಗೆ ಸಕಲೇಶಪುರದಲ್ಲಿ ಇಂತಹ ಒಂದು ದೇವಾಸ್ಥಾನ ನೆಲೆಸಿರುವುದೇ ತಿಳಿದಿರುವುದಿಲ್ಲ ಈ ದೇವಸ್ಥಾನವೇ ಸಕಲೇಶಪುರ ತಾಲೂಕಿನ ಮೆಕ್ಕನ ಗದ್ದೆ ಬಳಿ ಇರುವ ಬೆಟ್ಟದ ಬೈರವೇಶ್ವರ ದೇವಸ್ಥಾನ. ಬೆಟ್ಟದ ಭೈರವೇಶ್ವರ ದೇವಸ್ಥಾನವು ಸಕಲೇಶಪುರದಿಂದ ಸುಮಾರು ೩೫ಕಿಲೋ. ಮೀಟರ್ ದೂರದಲ್ಲಿ[೨] ಪಾಂಡವರ ಗುಡ್ಡ ಎಂಬ ಬೆಟ್ಟದ ಮೇಲೆ ಇದೆ. ಈ ಆಲಯವು ಸುಮಾರು ೭೦೦ ವರ್ಷಗಳಷ್ಟು ಪುರಾತನವಾಗಿದ್ದು ಸಂಪೂರ್ಣವಾಗಿ ಕರಿಶಿಲೆಯಿಂದ ನಿರ್ಮಿಸಲ್ಪಟ್ಟಿದೆ. ಈ ದೇವಸ್ಥಾನವನ್ನು ಹೊಯ್ಸಳರು ನಿರ್ಮಿಸಿದ್ದಾರೆ. ಬೆಟ್ಟದ ಭೈರಾವೇಶ್ವರ ದೇವಸ್ಥಾನವು ಶಿವ ಪರಮಾತ್ಮನಿಗೆ ಅರ್ಪಿತವಾಗಿದ್ದು ಪಶ್ಚಿಮ ಘಟ್ಟಗಳಲ್ಲಿ ನೆಲೆಸಿದೆ. ಈ ದೇವಸ್ಥಾನದ ಸುತ್ತ ಜೇನುಕಲ್ಲು ಗುಡ್ಡ, ದೀಪದಕಲ್ಲು, ಎತ್ತಿನಭುಜ ಮುಂತಾದ ಬೆಟ್ಟಗಳ ಸಾಲುಗಳನ್ನೇ ಕಾಣಬಹುದು. ಬೆಟ್ಟದ ಭೈರವೇಶ್ವರ ದೇವಸ್ಥಾನಕ್ಕೆ ಆಗಮಿಸುವ ಭಕ್ತಾದಿಗಳು ಈ ಬೆಟ್ಟದ ಮೇಲೆ ನಿಂತು ಭೂ ದ್ರಶ್ಯವನ್ನು ನೋಡಬಹುದು. ಮಲಆವೃತವಾಗಿರುತ್ತದ ಮಳೆಗಾಲದಲ್ಲಿ ಬೆಟ್ಟವು ದಪ್ಪ ಮಂಜಿನಿಂದ ಆವೃತವಾಗಿರುತ್ತದೆ.ಬೆಟ್ಟದ ಭೈರವೇಶ್ವರ ದೇವಾಲಯ ಹಾಸನ ಜಿಲ್ಲೆಯಲ್ಲಿ ಇದೆ.[೧] ಸಕಲೇಶಪುರದಿಂದ ಸುಮಾರು ೩೫ಕಿಲೋ. ಮೀಟರ್ ದೂರದಲ್ಲಿ ಪಾಂಡವರ ಗುಡ್ಡ ಎಂಬ ಬೆಟ್ಟದ ಮೇಲೆ ಇದೆ. ಈ ದೇವಸ್ಥಾನವನ್ನು ಹೊಯ್ಸಳರು ನಿರ್ಮಿಸಿದ್ದಾರೆ. ಈ ದೇವಾಲಯವು ಸುಮಾರು ೭೦೦ ವರ್ಷಗಳಷ್ಟು ಪುರಾತನವಾಗಿದ್ದು ಸಂಪೂರ್ಣವಾಗಿ ಕರಿಶಿಲೆಯಿಂದ ನಿರ್ಮಿಸಲ್ಪಟ್ಟಿದೆ. ಪಾಂಡವರು ನಿರ್ಮಿಸಿದ ಈ ಮೂಲ ದೇವಾಲಯವನ್ನು ಸುಮಾರು ೭೦೦ ವರ್ಷಗಳ ಹಿಂದೆ ಹೊಯ್ಸಳರು ಮರುನಿರ್ಮಾಣ ಮಾಡಿದ್ದಾರೆ. ಸ್ಥಳಪುರಾಣದ ಪ್ರಕಾರ ಮಹಾಭಾರತದ ಕಾಲದಲ್ಲಿ ಪಾಂಡವರು ಅಜ್ಞಾತವಾಸದಲ್ಲಿದ್ದಾಗ ದೇಶದಾದ್ಯಂತ ಸಂಚರಿಸುತ್ತಾ ಹಲವು ಶಿವದೇವಾಲಯಗಳನ್ನು ನಿರ್ಮಿಸಿದ್ದಾರೆ. ಆ ದೇವಾಲಯಗಳ ಸಾಲಿನಲ್ಲಿ ಈ ಬೆಟ್ಟದ ಭೈರವೇಶ್ವರ ದೇವಾಲಯವು ಮುಂಚೂಣಿಯಲ್ಲಿ ಬರುತ್ತದೆ.
5 окт 2024