Тёмный
No video :(

| ಭಜಿಸದೆ ಕೆಡಬೇಡ ಹುಚ್ಚು ಮನವೆ ನೀ | ಭಜಿಸು ಶ್ರೀ ಸತ್ಯಾತ್ಮತೀರ್ಥ ಗುರುಗಳ || 

Sri Uttaradimath Adhyatmavani
Подписаться 137 тыс.
Просмотров 304 тыс.
50% 1

|| ಶ್ರೀಗುರುಭ್ಯೋ ನಮಃ ||
ಭಜಿಸದೆ ಕೆಡಬೇಡ ಹುಚ್ಚು ಮನವೆ ಭಜಿಸು ಸತ್ಯಾತ್ಮ ಗುರುಗಳಾ ||
ಕುಜನ ಮತವಳಿದ ಜಯರಾಯರ ಮೂಲವೃಂದಾವನದಿ ಮಂಗಳ ಮಾಡುತ ಪೂರ್ಣಪ್ರಜ್ಞರ ಮಹಿಮೆಯ ಭಜಿಪರ ||
ಚಿಕ್ಕಂದಿನಿಂದಲೆ ರಕ್ಕಸವೈರಿ ಶ್ರೀಕಾಂತನ ಭಜಿಸಿದಮನದವರು
ಚೊಕ್ಕಾಗಿ ಶಾಸ್ತ್ರದ ಜ್ಞಾನದ ಸಾಗರ ಉಕ್ಕಿ ಹರಿಯಿತು ಗುರುಕುಲದಿ
ಸತ್ಕುಲ ಸಾರಥಿಯಾಗಲು ಮನಮಾಡಿ ಮನಪುಂಡಿ ಕಡೆಗೆ ನಡೆಯುತಲಿ
ದೀಕ್ಷೆಯಿಂದಲಿ ಪ್ರಮೊದರಿಂದ ದೀಕ್ಷೆಯ ಪಡೆದ ಗುರುಗಳ ||
ಸರ್ವಜ್ಞ ಪೀಠದಿ ಪವನನ ಮಹಿಮೆಯ ಸಾರುವ ಬಾಲಯತಿಗಳು
ಸರ್ವ ಸಜ್ಜನಕೆ ಅಭಿನವ ರಘೂತ್ತಮರಂತೆ ಕಂಡ ಪ್ರಚಂಡರು
ರವಿಚಂದ್ರರಂತೀಹ ನ್ಯಾಯಸುಧೆ ಕೊಟ್ಟ ದೇವೇಂದ್ರಸುತರ ಭಜಿಸುತಲೀ
ಭುವಿಯಲ್ಲಿ ಬುಧರ ಕೊಳಕನ್ನು ಕಳೆದು ಬೆಳಕು ನೀಡುವ ಪ್ರಭುಗಳ ||
ಸುಮೇಧರಿವರು ಸುಧೆಯ ಪದಗಳ ಸುಧೆಯನುಣಿಸುವ ಧಣಿಗಳು
ಈ ಮೆದಿನಿಲಿ ಕಾಮನ ಅರಿದ ಹೃಷಿಕೇಶರೆಂದರೆ ತಪ್ಪಾಗದು
ಧಮನಿ ಧಮನಿಯಲ್ಲಿ ವ್ಯಾಸರಾಯ ವಿದ್ಯಾಧೀಶ ರಾಘವೇಂದ್ರ ಮುಂತಾದ
ನಮ್ಮ ಗುರುವೃಂದವ ಹೊಂದಿ ಕೇಶವನ ಭಜಿಸುವ ಪುರುಷೊತ್ತಮರನ್ನ ||
ಶ್ರೀಹರಿಯ ರೂಪದ ನರಹರಿಯ ನಾಮದ ಯಜ್ಞ ಮಾಡಿದ ಪ್ರಲ್ಹಾದರು
ಆಹ್ಲಾದದಿಂದಲಿ ಈ ರೀತಿ ಭಜಿಸಿರೊ ಸಂತುಷ್ಟನಾಗುವ ಪ್ರಭಂಜನ
ಬಹಳ ಕಾಲವು ಬಿಡದೆ ಹಸುಳೆಯು ತಾಯಲ್ಲೆ ಹೊಗಿ ಇರುವಂತೆ
ಇಹಲೊಕದಲ್ಲಿ ಪೂರ್ಣಪ್ರಜ್ಞರ ಶಾಸ್ತ್ರ ಬಿಟ್ಟಿರದ ಮುನಿಗಳ ||
ಆನಂದತೀರ್ಥರ ಪೊಂದಿ ಭಜಿಪರ ಪಾದಕ್ಕೆ ಸಂದಲಿ ನಮನಗಳು
ಕೊನೆ ತನಕ ಮನಕೆ ಶಾಸ್ತ್ರದ ಪಾಕದ ಮಕರಂದ ನೀಡಲಿ ನಮಗೆಂದು
ಜಾಣ ಭಾರತೀರಮಣನ ಅರುಹುವ ಅಭಿನವ ಸತ್ಯಧರ್ಮರಿವರು
ಜ್ಞಾನವಿಠ್ಠಲನಲ್ಲಿ ಮನವಿಟ್ಟು ನಮ್ಮ ಮನದ ಕೊಳೆಯಲ್ಲ ಕಳೆಯುವರ ||
- ಸುಮಂತ ಶ್ರೀ ಮನ್ನಾರಿ.
ರಾಗ ಸಂಯೋಜನೆ
ವಾದಿರಾಜ ಕಾಖಂಡಕಿ
ಗಾಯನ
ವೇಣುಗೋಪಾಲ ಕೆ
ತಬಲಾ
ಶ್ರೀವತ್ಸ ಕೌಲಗಿ
ಕೊಳಲು
ದತ್ತಾತ್ರೇಯ ದೇಸಾಯಿ
ತಾಳ
ಶ್ರೀನಿವಾಸ ಕುಲಕರ್ಣಿ
ಹಿನ್ನೆಲೆ ಸಂಗೀತ
Bharadhwaj
ಸ್ಟುಡಿಯೋ :
ಪ್ರವೀಣ್ ಮಂಕಣಿ, VM ರೆಕಾರ್ಡಿಂಗ
Bhajisade kedabeda hucchu manave
.
.
Website- www.uttaradima...
Facebook- / uttaradimath
Instagram- / sri_uttaradimath
RU-vid- / samskrutivahini

Опубликовано:

 

5 сен 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 189   
Далее
Паук
01:01
Просмотров 2,5 млн
Shri Satyatma Gurugal....song
7:47
Просмотров 450 тыс.