ಮಾನವೀಯತೆಯನ್ನು ಕಾಪಾಡಿಕೊಳ್ಳುವುದು ಹೇಗೆ ? | ಅವಧೂತ ಶ್ರೀ ವಿನಯ್ ಗುರೂಜಿ
ಮನುಷ್ಯ ತನ್ನಲ್ಲಿರುವ ಸ್ವಾರ್ಥದ ಕಾರಣದಿಂದ ಮುಖ್ಯವಾಗಿ ಮಾನವೀಯತೆಯನ್ನು ಮರೆಯುತ್ತಾನೆ. ಹಾಗೆಯೇ ಸುಖಗಳ ಅತಿಯಾದ ಆಸಕ್ತಿ ಇರುವುದರಿಂದಲೇ ಮಾನವೀಯತೆ ತನ್ನಿಂದ ದೂರ ಇರುತ್ತದೆ. ಇದನ್ನ ಅಸುರೀ ಗುಣ ಎನ್ನಲಾಗುತ್ತದೆ. ಮನುಷ್ಯನಲ್ಲಿ ನಾನು ಎಂಬ ಅತಿಯಾದ ಆಸಕ್ತಿ ಹೊರಟು ನಾವು ಎಂಬ ಭಾವನೆ ಕೂಡಿದಾಗಲೇ ತನ್ನಲ್ಲಿ ಮಾನವೀಯತೆ ಮೊಳಕೆಯೊಡಿಯುವುದು. ಬದುಕಿನ ಪಾಠಗಳ ಬಗ್ಗೆ ಚಿಂತನೆ ಮಾಡಿದಾಗ, ತಾನೂ ಕೂಡಾ ಪ್ರಕೃತಿಯ ಒಂದು ಭಾಗ ಅಷ್ಟೇ ಎಂಬ ವಿವೇಕ ಬಂದಾಗ ಮನುಷ್ಯ ಸುರ ಆಗುತ್ತಾನೆ. ಅಂದರೆ ಮಾನವೀಯತೆ ಇದೆ ಎಂದರ್ಥ. ಯಾವುದೇ ಪ್ರತಿಫಲ ಅಥವಾ ಪ್ರಯೋಜನೆ ಇಲ್ಲದೇ ನಾವು ಕೆಲಸ ಮಾಡಿದರೆ ಅದುವೇ ಮಾನವೀಯತೆ, ಹಾಗಲ್ಲದಿದ್ದಲ್ಲಿ ಅದು ಬರೀ ಸ್ವಾರ್ಥವೇ ಆಗಿರುತ್ತದೆ.
14 окт 2024