ಕೆಲವು ದಿನಗಳಿಂದ ತಮ್ಮ ಮಾತು ಆಲಿಸುತ್ತಿದ್ದೇನೆ, ನಿಮ್ಮ ಮಾತುಗಳು ಅನುಭವದ ಸಾರಗಳು, ಸ್ವಂತ ಅನುಭವದ ಪಾಠಗಳು. ಮಾತು ನೇರ, ನಿರ್ದಿಷ್ಟ, ಮನಸ್ಸಿಗೆ ನಾಟುತ್ತವೆ. ಮಾತುಗಳನ್ನು ಕೇಳುತ್ತಲೇ ಇರಬೇಕು ಅನಿಸುತ್ತದೆ. ವಸ್ತುನಿಷ್ಠ, ಸ್ಪಷ್ಟ, ಬೋಧನೆ ಇಲ್ಲ, ಹಾಗಾಗಿ ಇಷ್ಟ.
ಪೂಜ್ಯರ ಜ್ಞಾನಾಮೃತ ನಮಗೆ ಉತ್ತಮ ಜೀವನ ನಡೆಸಲು ದಾರಿದೀಪ. ಇವುಗಳನ್ನು ಎಲ್ಲರೂ ಕೂಡಿ ಕೇಳುವುದೇ ಒಂದು ಆನಂದ. ನಿಮ್ಮನ್ನು ಪಡೆದ ನಾವು ನಿಜಕ್ಕೂ ಪುಣ್ಯವಂತರು. ನೀವು ಹೇಳಿದ ದಾರಿಯಲ್ಲಿ ನಾವು ನಡೆದು ತೋರಿಸುತ್ತೇವೆ. ಈ ಮುಖಾಂತರ ನಿಮಗೆ ನಮ್ಮ ಪ್ರಣಾಮಗಳನ್ನು ಸಲ್ಲಿಸುತ್ತೇವೆ.