VCS - PA 6180 - VACD 1008 YTV-109 #song #lyrics
ಸಿದ್ಧಾರೂಢರ ಚರಿತೆ ಹೇಳುವೆ ಭಕ್ತಿಯಿಂದ ಕೇಳಿ ||
ಎದ್ದು ಕೂಡಲೇ ನಿತ್ಯ ನೆನೆದರೆ ದು:ಖವಿಲ್ಲ ನೋಡಿ ||
ಸಿದ್ಧಾರೂಢರ ಚರಿತೆ ಹೇಳುವೆ ಭಕ್ತಿಯಿಂದ ಕೇಳಿ |
ಎದ್ದು ಕೂಡಲೇ ನಿತ್ಯ ನೆನೆದರೆ ದು:ಖವಿಲ್ಲ ನೋಡಿ ||
ಬಿದರ ಕೋಟಿ ಜಿಲ್ಲೆ, ವಂಶದುರ್ಗವೆಂಬ ಹಳ್ಳಿ ಐತಿ ಒಂದ||
ಚದುರೆ ಮಲ್ಲಮ್ಮ, ಗುರುಶಾಂತರೆಂಬ ಸತಿಯು-ಪತಿಯು ಚಂದ||
ಸದಾ ಹ್ರದಯದಲಿ ಶಿವನ ನೆನೆಯುತ್ತ ಇದ್ದರು ಆನಂದ ||
ಸದಮಲಾತ್ಮ ಶಿವ ಜನಿಸಿ ಬಂದನು
ಪುಣ್ಯ ಗರ್ಭದಿಂದ
ಇವರ ಪುಣ್ಯ ಗರ್ಭದಿಂದ||
ಸಿದ್ಧಾರೂಢರ ಚರಿತೆ ಹೇಳುವೆ ಭಕ್ತಿಯಿಂದ ಕೇಳಿ |
ಎದ್ದು ಕೂಡಲೇ ನಿತ್ಯ ನೆನೆದರೆ ದು:ಖವಿಲ್ಲ ನೋಡಿ ||
ಚಿಕ್ಕವಯಸಿನಲಿ ಘಣಮಹಿಮೆಯನು ತೋರುತ್ತಲಿ ಬೆಳೆದ||
ಚಿಕ್ಕ ಪಾತ್ರೆಯ ಒಡೆದು ಎಳ್ಳಿನ ರಾಶಿ ತೋರಿಸಿದ ||
ಅಕ್ಕರೆ ಆಟಕ್ಕೆ ಎಮ್ಮೆ ಅಡ್ಡ ಬರೆ ಸತ್ತು ಹೋಗಲೆಂದ||
ಬಿಕ್ಕಿ ಬಿಕ್ಕಿ ದು:ಖಿಸವ ತಾಯಿಗಾಗಿ ಮತ್ತೆ ಜೀವ ನೀಡಿದ
ಸತ್ತ ಎಮ್ಮೆ ಬದುಕಿಸಿದ ||
ಸಿದ್ಧಾರೂಢರ ಚರಿತೆ ಹೇಳುವೆ ಭಕ್ತಿಯಿಂದ ಕೇಳಿ |
ಎದ್ದು ಕೂಡಲೇ ನಿತ್ಯ ನೆನೆದರೆ ದು:ಖವಿಲ್ಲ ನೋಡಿ ||
ವರ ಗುರುವಿನ ಶೋಧಮಾಡಲು ಹಿಡಿದು ಹೊರಟ ದಾರಿ ||
ಹಿರಿಯರೆನಿಸಿದ ಸೋಮ-ಭೀಮರು ತಿರುಗಿದರ್ ಹೌಹಾರಿ||
ಶರಿರಕೆ ಎಷ್ಟೇ ಕಷ್ಟ ಬಂದರೂ ಬಿಡಲಿಲ್ಲ ತನ್ನ ಗುರಿ ||
ಪರಮ ಸದ್ಗುರು ಗಜದಂಡಯೋಗಿಯ ಕಂಡನಾತ ಹೋಗಿ
ಅಲ್ಲಿ ವಿನಯದಿಂದ ಬಾಗಿ||
ಸಿದ್ಧಾರೂಢರ ಚರಿತೆ ಹೇಳುವೆ ಭಕ್ತಿಯಿಂದ ಕೇಳಿ |
ಎದ್ದು ಕೂಡಲೇ ನಿತ್ಯ ನೆನೆದರೆ ದು:ಖವಿಲ್ಲ ನೋಡಿ ||
ಮೇಲು ಕೀಳೆಂಬ ಭೇದವಿಲ್ಲದೆ ಎಲ್ಲ ಸೇವೆಗೈದ||
ಶಾಲೆ ಕಲಿಯದೆ ವೇದ ಶಾಸ್ತ್ರವ ಕೇಳಿ ನಿಪುಣನಾದ ||
ಮೇಲಾಗಿ ಸುಬ್ಬಯ್ಯ ಶಾಸ್ತ್ರಿಗಳಿಗೆ ಸರಿಯಾಗಿ ಉತ್ತರ ನೀಡಿದ ||
ಕಾಲಕಳೆಯದೆ ಗುರುವಿನಾಙ್ನೆಯಂತೆ ದೇಶ ಸಂಚಾರಿಯಾದ
ಜಗದ ಉದ್ದಾರಕೆ ನಡೆದ ||
ಸಿದ್ಧಾರೂಢರ ಚರಿತೆ ಹೇಳುವೆ ಭಕ್ತಿಯಿಂದ ಕೇಳಿ |
ಎದ್ದು ಕೂಡಲೇ ನಿತ್ಯ ನೆನೆದರೆ ದು:ಖವಿಲ್ಲ ನೋಡಿ ||
ಒಳ್ಳೆ ಒಳ್ಳೆಯ ತೀರ್ಥಕ್ಷೇತ್ರಗಳ ದರ್ಶನಗೈಯುತ್ತಾ ||
ಕಲ್ಲು ಮನಸಿನ ಕೆಟ್ಟ ಜನರಿಗೆ ಸನ್ಮಾರ್ಗ ತೋರುತ್ತಾ ||
ಎಲ್ಲಿ ನೋಡಲು ನಮಃ: ಶಿವಾಯ ಎಂಬ ಮಂತ್ರವ ಬೀರುತ್ತಾ||
ಬಲ್ಲ ಮಹಾತ್ಮರ ಬಳಗದೊಂದಿಗೆ ನಿರುತದಲ್ಲಿ ಇರುತಾ ||
ಸತ್ಯ ಶಾಸ್ತ್ರವ ಹೇಳುತ್ತಾ||
ಸಿದ್ಧಾರೂಢರ ಚರಿತೆ ಹೇಳುವೆ ಭಕ್ತಿಯಿಂದ ಕೇಳಿ |
ಎದ್ದು ಕೂಡಲೇ ನಿತ್ಯ ನೆನೆದರೆ ದು:ಖವಿಲ್ಲ ನೋಡಿ ||
ಸಂಚಾರ ಮಾಡುತ್ತಾ, ಗರಗದ ಶ್ರೀ ಮಡಿವಾಳ ಯೋಗಿಯ ಕಂಡ ||
ಹಂಚಿಕೆಯಿಂದಲಿ ಅವರ ಹತ್ತಿರನುಭವದ ಊಟ ಉಂಡ||
ಮುಂದೆ ಹುಬ್ಬಳ್ಳಿ ಪಟ್ಟಣಕೋಗಲು ಅಪ್ಪಣೆ ಪಡಕೊಂಡ||
ಕೊಂಚ ಸಂಶಯವಿಲ್ಲದೆ ಅಲ್ಲಿ ಸ್ಥಾನ ನೋಡಿಕೊಂಡ ||
ದಿವ್ಯ ಕ್ಷೇತ್ರ ಮಾಡಿಕೊಂಡ ||
ಸಿದ್ಧಾರೂಢರ ಚರಿತೆ ಹೇಳುವೆ ಭಕ್ತಿಯಿಂದ ಕೇಳಿ |
ಎದ್ದು ಕೂಡಲೇ ನಿತ್ಯ ನೆನೆದರೆ ದು:ಖವಿಲ್ಲ ನೋಡಿ ||
ಪಾಪಿಯೊಬ್ಬನು ಬೆಂಕಿ ತಲೆಯ ಮೇಲೆ ಇಟ್ಪರು ಸುಮ್ಮನಾದ ||
ಕೋಪವಿಲ್ಲದೆ ಶರಿರ ಕರ್ಮವಿದು ಎಂದು ವರವ ನೀಡಿದ ||
ಆಪತ್ತು ಕಳೆದು ನಿನ್ನ ಮನೆಯಲ್ಲಿ ಸಿರಿಯು ಹೆಚ್ಚಲೆಂದ ||
ದೀಪದಂತೆ ಮೈ ಸುಟ್ಟುಕೊಂಡು ಜಗವೆಲ್ಲ ತಾ ಬೆಳಗಿದ ||
ಜಗದ ದಿವ್ಯ ಜ್ಯೋತಿಯಾದ ||
ಸಿದ್ಧಾರೂಢರ ಚರಿತೆ ಹೇಳುವೆ ಭಕ್ತಿಯಿಂದ ಕೇಳಿ |
ಎದ್ದು ಕೂಡಲೇ ನಿತ್ಯ ನೆನೆದರೆ ದು:ಖವಿಲ್ಲ ನೋಡಿ ||
ಶರಣನಾದ ತುಕ್ಕಪ್ಪನ ಮಗನ ರೋಗ ಕಳೆದು ಬಿಟ್ಟ||
ಹೀರು ಬಾಯಿಗೆ ಬಂದ ಯಮನ ಪಾಶ ಹರಿದು ಬಿಟ್ಟ ||
ಮುರಕಿಭಾವಿಯೆಂಬ ಗ್ರಾಮದಲ್ಲಿ ಪ್ರತ್ಯಕ್ಷ ಭೆಟ್ಟಿ ಕೊಟ್ಟ||
ಕರುಣಾಮುರ್ತಿ ಭಕ್ತರಿಗಾಗಿ ಹಲವು ರೂಪ ತೊಟ್ಟ||
ತಾನೇ ಹಲವು ರೂಪ ತೊಟ್ಟ||
ಸಿದ್ಧಾರೂಢರ ಚರಿತೆ ಹೇಳುವೆ ಭಕ್ತಿಯಿಂದ ಕೇಳಿ |
ಎದ್ದು ಕೂಡಲೇ ನಿತ್ಯ ನೆನೆದರೆ ದು:ಖವಿಲ್ಲ ನೋಡಿ ||
ಮೌನಯೋಗಿ ಗುರುನಾಥಾರೂಢರ ಸ್ಥಿತಿಗೆ ಕಾರಣಾದ||
ಜ್ಞಾನವ ನೀಡಿ ಕಬೀರದಾಸರ ಜೀವ ಭಾವನಳಿದ ||
ಆನಂದದಿಂದ ಅಕ್ಕಲಕೋಟೆಯ ಶರಣರಿಗೆ ಒಲಿದ ||
ಮಾನನಿಧಿ ಶಿವಪುತ್ರ ಸ್ವಾಮಿಗೆ ವಿದ್ಯೆಯ ಕರುಣಿಸಿದ ||
ಬ್ರಹ್ಮ ವಿದ್ಯೆಯ ಕರುಣಿಸಿದ||
ಸಿದ್ಧಾರೂಢರ ಚರಿತೆ ಹೇಳುವೆ ಭಕ್ತಿಯಿಂದ ಕೇಳಿ |
ಎದ್ದು ಕೂಡಲೇ ನಿತ್ಯ ನೆನೆದರೆ ದು:ಖವಿಲ್ಲ ನೋಡಿ ||
ತಿರುಕನಂತೆ ಕಂಡರೂ ಆತ ಮಹಾರಾಜ ಯೋಗಿ ಇದ್ದ ||
ಹರುಷದಿಂದಲಿ ಸರ್ವರನ್ನು ಸಮ ದ್ರಷ್ಟಿಲಿ ನೋಡಿದ್ದ ||
ಶರಣೆಂದು ಶಿಷ್ಯರು ಬಂದರೆ ಬೇಡಿದ್ದು ಕೊಡುತ್ತಿದ್ದ||
ನಿರುತ ನಿಜಗುಣ ದೇವರಿಗೆ ತಾ ಕರುಣೆ ತೋರಿದ್ದ||
ಕೈಯಲಿ ಲೇಖನಿ ಹಿಡಿಸಿದ್ದ||
ಸಿದ್ಧಾರೂಢರ ಚರಿತೆ ಹೇಳುವೆ ಭಕ್ತಿಯಿಂದ ಕೇಳಿ ||
ಎದ್ದು ಕೂಡಲೇ ನಿತ್ಯ ನೆನೆದರೆ ದು:ಖವಿಲ್ಲ ನೋಡಿ |||
☆ ಆರೂಢ ಕೈಲಾಸ - ಭಕ್ತಿ ಗೀತೆಗಳು
☆ #ಶ್ರೀಸಿದ್ಧಾರೂಢ ಸ್ವಾಮಿಜಿಗಳ ಬಗ್ಗೆ ಧ್ವನಿಮುದ್ರಣಗೊಂಡು ಬಿಡುಗಡೆಯಾದ ಪ್ರಪ್ರಥಮ ಕ್ಯಾಸೆಟ್
☆ ಗಾಯಕರು :ಮಂಜುಳಾ ಗುರುರಾಜ , ಬಿ.ಆರ್.ಛಾಯಾ , ಶಂಕರ ಶಾನಭಾಗ , ಶ್ರೀನಿಜಗುಣದೇವರು
☆ ಸಾಹಿತ್ಯ , ರಾಗ ಸಂಯೋಜನೆ : ಶ್ರೀ ನಿಜಗುಣದೇವರು
☆ ಸಂಗೀತ : ಎ.ಸುಂದರಮೂರ್ತಿ
☆ ಸಂಯೋಜನೆ , ಸಂಕಲನ : ವಿಶ್ವನಾಥ ಇರಕಲ್ಲ
☆ ಡಿಜಿಟಲೀಕರಣ : ಶ್ರೀನಿವಾಸ ಇರಕಲ್ಲ
☆ AARUDHA KAILASA - DEVOTIONAL SONGS
☆ SHRI #SIDDHAROODHA #SWAMI #HUBLI #MATH SONG
☆ SUNG BY : MANJULA GURURAJ , B.R.CHAYA , SHANKAR SHANBHAG , NIJAGUNADEVARU
☆ LYRICS , TUNES : SHR NIJAGUNADEVARU
☆ MUSIC : A.SUNDERMURTHY
☆ ORGANISED , EDITED : VISHWANATH IRKAL
☆ DIGITAL CONVERTION : SHRINIVAS IRKAL
ಕರ್ನಾಟಕದ ಪ್ರಪ್ರಥಮ ಲೈಸೆನ್ಸ್ಡ್ ಪಡೆದ ಕ್ಯಾಸ್ಸೆಟ್ಸ್ ತಯಾರಿಕಾ ಸಂಸ್ಥೆ , ವಿಜಯ ರೆಕಾರ್ಡಿಂಗ್ ಸರ್ವಿಸಸ್ ,1981 ರಿಂದ ಉತ್ತರ ಕರ್ನಾಟಕದ ಪ್ರಸಿದ್ಧ , ಹೆಸರಾಂತ ದೇವಸ್ಥಾನಗಳ ,ಮಠ , ಮಾನ್ಯರ, ಪಾರಂಪರಿಕ ಗೀತೆಗಳನ್ನು ,ವಾದ್ಯಗಳನ್ನು , ಕಲೆಗಳನ್ನು,ಕಲಾಕಾರರನ್ನು ಮೊಟ್ಟು ಮೊದುಲು ಕ್ಯಾಸ್ಸೆಟ್ಟ್ ಮೂಲಕ ಪರಿಚಿಯಿಸಿದ ಸಂಸ್ಥೆ
"ವಿಜಯ" ಕ್ಯಾಸೆಟ್ಸರವರ - ಸುಪ್ರಸಿದ್ಧ - #ಕನ್ನಡಭಕ್ತಿಗೀತೆಗಳು #ಸುಪ್ರಭಾತ #ನಾಮಾವಳಿ #ದಾಸರಪದಗಳು #ಜಾನಪದಗೀತೆಗಳು #ಭಜನಾಪದಗಳು #ತತ್ಟಭಜನಾಪದಗಳು #ಕೈವಲ್ಯಪದಗಳು #ಡೊಳ್ಳಿನಪದಗಳು #ಚೌಡಕಿಪದಗಳು #ಗೀಗೀಪದಗಳು #ಎಕಧಾರಿಪದಗಳು #ಸೊಬಾನಪದಗಳು #ಕೀರ್ತನೆ #ಪ್ರವಚನ #ಅಮೃತವಾಣಿ #ನಾಟಕ #ಬಯಲಾಟ #ದೊಡ್ಡಾಟ #ಸಣ್ಣಾಟ #ಯಕ್ಷಗಾನ #ಹಿಂದೂಸ್ತಾನಿಕರ್ನಾಟಕಿಶಾಸ್ತ್ರೀಯಗಾಯನ #ಹಿಂದೂಸ್ತಾನಿಕರ್ನಾಟಕಿವಾದ್ಯಗಳು ಅಲ್ಲದೆ #ತುಳು #ತೆಲಗು #ಮರಾಠಿ #ಕ್ಷಾತ್ರಭಾಷಾSSKಸಾವಜಿ #ಉರ್ದು ಭಾಷೆಯ ಕಾರ್ಯಕ್ರಮಗಳನ್ನು ಕೇಳಿ ಆನಂದಿಸಿರಿ ,ಹೆಚ್ಚಿನ ವಿಜಯ ಕಾರ್ಯಕ್ರಮಗಳಿಗಾಗಿ ಹಾಗೂ ವಿಶೇಷವಾಗಿ ಉತ್ತರ ಕರ್ನಾಟಕದ ಶೈಲಿಯ ಹಾಡುಗಳಿಗಾಗಿ , ಈ ಧ್ವನಿ ಹಾಗೂ ಚಿತ್ರೀಕರಣದ ಹಕ್ಕುದಾರರು
FIRST LICENSED CASSETTES PRODUCERS IN KARNATAKA -SINCE 1981
PRODUCED AND MARKETED - MOST FAMOUS AND POPULAR LIKE,SUBSCRIBE.
THIS AUDIO AND VIDEO ALL COPY RIGHTS RESERVED BY
VIJAI RECORDING SERVICES , # 7 , S.S.K COMPLEX , DAJIBANPETH , HUBLI -580028
CELL NO - +91 9448113141 , 9980240325 .
PLEASE SUBSCRIBE / LIKE / SHARE / COMMENTS TO OUR CHANNELS ( 3 )
VIJAI RECORDING SERVICES ! VISHWANATH IRKAL ! SHRINIVAS V IRKAL
10 фев 2018