ಆರೋಗ್ಯವೇ ಮಹಾ ಭಾಗ್ಯ ಎಂದು ಎಲ್ಲರಿಗೂ ತಿಳಿದಿರುವ ವಿಚಾರವಲ್ಲವೇ..!?ಈ ಹಿನ್ನೆಲೆಯಲ್ಲಿ ಗ್ರಾಮೀಣ ಸಾಂಪ್ರದಾಯಿಕ ಪರಂಪರೆಯ ಅಡುಗೆಯೂ ಒಂದು ಕಲೆ.. ಇದನ್ನೇ ಒಂದು ಕಾನ್ಸೆಪ್ಟ್ ಆಗಿ ತೆಗೆದುಕೊಂಡು ಕೊರೋನಾದ ಲಾಕ್ ಡೌನ್ ಸಮಯವನ್ನು ಸದುಪಯೋಗ ಪಡಿಸಿಕೊಂಡು ನಮ್ಮ ಭಾರತದ ಪ್ರದಾನ ಮಂತ್ರಿ ಶ್ರೀ ನರೇಂದ್ರ ದಾಮೋದರ ಮೋದೀಜಿಯವರ ಮೇಕ್ ಇಂಡಿಯಾ ಪರಿಕಲ್ಪನೆಗೆ ಪೂರಕವಾಗಿ ತನ್ನದೇ ಯೂಟ್ಯೂಬ್ ಚಾನೆಲ್ ಮೂಲಕ ಗ್ರಾಮೀಣ ಅಡುಗೆ ತಯಾರಿ ಮಾಡಿ ವೀಡಿಯೋ ಹರಿಯಬಿಟ್ಟು ಭಟ್ & ಭಟ್ ನಾ ಸುದರ್ಶನ್ ಭಟ್ ಸಹೋದರರೇ ನಮ್ಮ ಇಂದಿನ ವಿಶೇಷ ಸಾಧಕರು..!!
ತಾನು ಸ್ವತಃ ತಲೆಗೊಂದು ರುಮಾಲು ಕಟ್ಟಿ ಹಲಸಿನ ಹಣ್ಣು ಕೊಯ್ದ ಹಲಸಿನ ಗಟ್ಟಿ ಮಾಡಿ ವೀಕ್ಷಕರಿಗೆ ಅದರ ರೆಸಿಪಿಯನ್ನು ಹಂಚಿಕೊಳ್ಳುವುದು.. ಜೊತೆಗೆ ಸಾಂಪ್ರದಾಯಿಕವಾಗಿ ಗ್ರಾಮೀಣ ಬದುಕಿನ ಅವಿಭಾಜ್ಯ ಅಂಗ ವಾದ ಕಡೆಯುವ ಕಲ್ಲನ್ನು ಬಳಸಿ ಹಿಟ್ಟು ರುಬ್ಬುವುದು.. ಮನೆ ಹೊರಗೆ ತೋಟದಲ್ಲೇ ಎರಡು ಕಲ್ಲಿಟ್ಟು ಒಲೆ ಮಾಡಿ ಮಣ್ಣಿನ ಮಡಿಕೆಯಲ್ಲೆ ಬೇಯಿಸುವುದು ಇತ್ಯಾದಿಗಳು ಜನಮನ್ನಣೆ ಗಳಿಸಿ ಸುದರ್ಶನ್ ಭಟ್ ಸಹೋದರರು ಯಶಸ್ವಿಯಾದರು..
ಇವರು ಬಡತನದಲ್ಲಿ ಅರಳಿದ ಹೂವುಗಳು. ಎಂದರೂ ತಪ್ಪಾಗಲಿಕ್ಕಿಲ್ಲ... ಯುಟ್ಯೂಬ್ ಚಾನೆಲ್ ಮೂಲಕ ವೀಡಿಯೋ ಮಾಡಿ ಪ್ರಕೃತ ಯೂಟ್ಯೂಬ್ ಗೋಲ್ಡನ್ ಪ್ಲೇ ವಿನ್ನರ್ ಆಗುತ್ತೇವೆ ಎಂಬ ಕನಸು ಇವರಿಗೆ ಇರಲಿಲ್ಲ ಎಂಬುದು ಇವರ ಮನದ ಮಾತು..
ತನ್ನ ಈ ಉದ್ಯಮಕ್ಕೆ ಅಮ್ಮನೇ ಪ್ರೇರಣೆ ಎಂಬ ಮಾತು ತುಂಬಾ ಮಾರ್ಮಿಕವಾಗಿದೆ..ಎಲ್ಲರೂ ಪೇಟೆ ಬದುಕನ್ನೇ ಬಯಸುವ ಈ ಸಂದರ್ಭದಲ್ಲಿ ಈ ಯುವಕರು ಗ್ರಾಮವನ್ನು ತನ್ನ ಕಾರ್ಯಕ್ಷೇತ್ರವಾಗಿ ಆಯ್ಕೆಮಾಡಿ ಯಶ್ಷಸಿಯದ ಯೂಟ್ಯೂಬ್ ಸೆಲೆಬ್ರಿಟಿಗಳು..
ಬೆದ್ರರಿ ವೆಂಕಟರಮಣ ಮತ್ತು ಶ್ರೀಮತಿ ಸುಲೋಚನಾ ಬಿ ಇವರ ಸುಪುತ್ರರು ಸುದರ್ಶನ್ ಭಟ್ ಮತ್ತು ಮನೋಹರ ಭಟ್ ಹಾಗೂ ಇಬ್ಬರು ಅಕ್ಕಂದಿರು.. ಕುಂಬ್ಳೆ ಸಮೀಪದ ಸೂರಂಬೈಲ್ ಮುಖಾರಿ ಖಂಡದ ಬಳಿಯಲ್ಲೇ ಇರುವ ಬೆದ್ರಡಿ ಇವರ ಹುಟ್ಟೂರು.. ಕಡು ಬಡತನದಲ್ಲಿ ಬೆಳೆದ ಇವರು ಕಿಳಿಂಗಾರು ಅನುದಾನಿತ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣವನ್ನು ಆ ಬಳಿಕ ಕನ್ಯಾನ ಭಾರತ ಸೇವಾಶ್ರಮ ದೈಗೋಳಿ ಸಾಯಿ ನಿಕೇತನ ಸೇವಾಶ್ರಮಗಳಲ್ಲಿದ್ದು ಪ್ರೌಢ ಶಿಕ್ಷಣವನ್ನು ಪೂರೈಸಿದರು..ಪ್ಲಸ್ ಒನ್ ಟು ವಿದ್ಯಾಭ್ಯಾಸವನ್ನು ಪ್ರಣವ್ ಕಾಲೇಜಿನಲ್ಲೂ ಬಿಎ ಎಲ್ ಎಲ್.ಬಿ.ಪದವಿಯನ್ನು ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ಪೂರೈಸಿದರು..ಪ್ರಕೃತ ಕಾಸರಗೋಡಿನಲ್ಲಿ ಲಾಯರ್ ಆಗಿಯೂ ಪ್ರಾಕ್ಟೀಸ್ ಮಾಡುತ್ತಾ ಯೂಟ್ಯೂಬ್ ನಲ್ಲಿ ಜನಮೆಚ್ಚುಗೆ ಗಳಿಸಿದ್ದಾರೆ..
ಬಾಲ್ಯದಲ್ಲಿ ಅಡುಗೆಯವರೊಂದಿಗೆ ಹೋಗುತ್ತಾ ಅಲ್ಲಲ್ಲಿ ಸುಧಾರಣೆಗೆ ಜೊತೆ ಸೇರಿ ಅಡುಗೆಯ ಮೂಲ ಪಾಠವನ್ನು ಕಲಿತು ಅದನ್ನೇ ಪ್ರವೃತ್ತಿಯಾಗಿ ಸೇರಿಕೊಂಡು ಯಶಸ್ವಿಯಾಗಿದ್ದಾರೆ..ಪ್ರಕೃತ ಸೂರಂಬೈಲ್ನಿಂದ ಪೆರ್ಲ ರಸ್ತೆಯಲ್ಲಿ ಮುಖಾರಿ ಕಂಡ (ಗದ್ದೆ) ಎಂಬಲ್ಲಿ ತನ್ನ ವ್ಯಾಪಾರ ಮಳಿಗೆಯನ್ನು ಪ್ರಾರಂಭಿಸಿ ಉದ್ಯಮ ಕ್ಷೇತ್ರಕ್ಕೂ ಧುಮುಕಿದ್ದು ತಂದೆ ತಾಯಿ ಬಂಧು ಬಳಗದ ಸಹಕಾರ ಪ್ರೋತ್ಸಾಹದೊಂದಿಗೆ ಸಹೋದರಿ ಸಹೋದರರು ಜೊತೆ ಸೇರಿ ಕೆಲವು ನಿಷ್ಠೆಯ ಕೆಲಸಗಾರರನ್ನು ಸೇರಿಕೊಂಡು ಉದ್ಯಮ ನಡೆಸುತ್ತಿದ್ದಾರು.. ಅವರಿಗೆ ಶುಭವಾಗಲಿ.. ವ್ಯಾಪಾರದಲ್ಲಿ ಯಶಸ್ವಿಯಾಗಿ ಇನ್ನೂ ಎತ್ತರಕ್ಕೆ ಬೆಳೆಯಲಿ ಎಂದು ಶುಭ ಹಾರೈಸುತ್ತೇನೆ..ಅವರ ಈ ಸಾಧನೆ ನಿರುದ್ಯೋಗಿ ಯುವಕರು ನವ ಉತ್ಸಾಹಿ ಉದ್ಯಮಿಗಳಿಗೆ ಪ್ರೇರಣೆಯಾಗಲಿ ಎಂದೂ ಹಾರೈಸುತ್ತೇನೆ..
ಬದುಕು ಬರಹ ಪರಿಕಲ್ಪನೆ:- ಜಿ.ವೀರೇಶ್ವರ ಭಟ್ ಕರ್ಮರ್ಕರ್
ನೀರ್ಚಾಲು ಕಾಸರಗೋಡು
Mangalore Samachar..
/ @mangaloresamachar9338
13 сен 2024