"ವೇದಭಾರತೀಸಂಪ್ರತಿಷ್ಠಾನಮ್" (ವೇದಭಾರತೀ) ಆರಂಭ ಆದದ್ದು 2002 ರಲ್ಲಿ ಬೇಲೂರಿನಲ್ಲಿ. ಕಾರಣೀಭೂತರು ಪ್ರಾತಃಸ್ಮರಣೀಯರಾದ ಕೀರ್ತಿಶೇಷ ಶ್ರೀ ಸುಧಾಕರ ಶರ್ಮಾರವರು. "ವೇದಭಾರತೀಸಂಪ್ರತಿಷ್ಠಾನಮ್" ಎಂಬ ಹೆಸರನ್ನು ಹೇಳಿದಾಗ ಅದನ್ನು ಅನುಮೋದಿಸಿದವರೂ ಅವರೇ. ಅನಂತರ 2004 ಚೆನ್ನರಾಯಪಟ್ಟಣದಲ್ಲಿ ಅನಂತರ ಬೆಳ್ತಂಗಡಿಯಲ್ಲಿ ಅನಂತರ ಹಾಸನದಲ್ಲಿ ಆರಂಭ ಆಯ್ತು. ಹಾಸನದಲ್ಲಿ "ವೇದಭಾರತೀಸಂಪ್ರತಿಷ್ಠಾನಮ್" ಎಂಬ ಹೆಸರೇ ಇತ್ತು. ಕೆಲವು ವರ್ಷಗಳ ನಂತರ ವೇದಭಾರತೀ ಎಂಬ ಹೆಸರಿನಿಂದ ನಡೆಯುತ್ತಿದೆ. ಒಳ್ಳೆ ಪ್ರೇರಣೆ. ಒಳ್ಳೆ ಸಂಗತಿ. ಮುಂದುವರೆಯಲಿ.