#ayodhya #kanadadevotional #tulunadu #manojkkutthar#shettyajayraj#poojasanil#jaishreeram
THIS KANNADA DEVOTIONAL SONG ABOUT AYODHYA SHRI RAMA MANDIR
SINGER : POOJA SANIL
LYRICS : SHETTY AJAYRAJ
PRODUCER : MANOJ K KUTTHAR
EDIT : MANISH KARKERA NADAR
POSTER DISIGN : JITHESH SARAPADY
SPECIAL THANKS : ASHOK POOJARY ,SANTHOSH POOJARY ,SUDHAKAR POOJARY,SURENDRA SHRI POJARY FAMILY
MIXING ,MASTERING:SHAMEER MUDIPU
SONG LYRICS :
ನಯನಗಳಿಗೆ ನಿತ್ಯ ಸಮೃದ್ಧ ಕಾಂತಿಯು...
ಧಮನಿಯೊಳಗೆ ಇದುವೆ ಸುಖಕರ ಶಾಂತಿಯು ...
ರಾಮ ನಿನ ನಾಮವು ...
ಕರ್ಣಗಳಿಗೆ ತಲುಪೊ ಮಧುರ ಶುಭನಾದವು ...
ಜ್ಞಾನ ಚಿಗುರಿಸೋ ಸತ್ಯ ಸತ್ವ ಅಗಾಧವು ...
ರಾಮ ನಿನ್ನ ನಾಮವು ... ಪಾವಿತ್ರ್ಯದ ಧಾಮವು ...
ನೋಡಲೆನಿತು ಸುಂದರ...ಅಯೋಧ್ಯಾ ಮಂದಿರ ...
ಎಂತಾ ಭಾಗ್ಯವಿದುವೆ ಜನುಮ ಪಾವನ ..
ಶೂರ,ವೀರ ಹಂದರ...ಶ್ರೀ ರಾಮ ಚಂದಿರ ...ನಿನ್ನ ನೆನೆಯಲು ಭಯ ಕಳೆದು ಶುಭ್ರ ಜೀವನ ...
ಜನರ ಮನದಿ ಬೆರೆತು ಹೋದ ದೇವ ನಿನ್ನ ನೆನೆಯುತ...
ಹೃದಯ ಕದವ ತೆರೆದು ಸ್ವಾಮಿ ಹೇಳಿತಿಲ್ಲಿ ಸ್ವಾಗತ...
ಮನು ಕಾಯದ ಅಣು ಅಣುವು ನಿನ್ನ ಎದುರು ಬಾಗುತ ...
ಶ್ರೀ ರಾಮ
ನಿನ ಮಹಿಮೆ ಬಲ್ಲರು ..
ಜಯ ಜಯರಾಮ
ಶರಣಾದೆವೆಲ್ಲರು ...
ಚರಣ೧:
14 ವರ್ಷ ವನದಿ.. ವಾಸವಾದೆ ಛಲದಿ ...
ಪಿತೃವಾಕ್ಯಪಾಲ ....ನೀ ಗೆದ್ದೆ ಲೋಕ ಪರಿಧಿ ...
ಶಿವಧನುಸ್ಸು ...ಮುರಿದಿ ...ಮಿಥಿಲೆಯ ಸ್ವಯಂವರದಿ ...
ಸೀತಾಮಾತೆ ವರಿಸಿ ವೀರ ನಡಿಗೆ ನಡಿದಿ..
ಭಾವಂತರಂಗದ ಈ ಭಜನೆ ಕೇಳು ಬಾ...
ಇಲ್ಲಿ ಶ್ರುತಿಯ ಮೆರುಗಿದೆ ...ಈ ಹೃದಯ ತಾಳದ
ನಮ್ಮದೆನ್ನುವುದೇನಿಲ್ಲ ...ಪರಮಾತ್ಮ ನಿನದೆಲ್ಲ ...
ನಿನ್ನ ದಯೆಯ ಸಾಗರದಿ ಅಲೆಯಂತೆ ನಾವೆಲ್ಲ ...
ಬಡವಾಗಿಸು ,ದಡ ಸೇರಿಸು ...
ನಿನ್ನ ಕೈಯ ಆಟವೆಲ್ಲ ...
ಶ್ರೀ ರಾಮ ..
ನಿನ ಮಹಿಮೆ ಬಲ್ಲರು
ಜಯ ಜಯರಾಮ...
ಶರಣಾದವೆಲ್ಲರು ...
ಚರಣ ೨:
ಕಷ್ಟವೆಲ್ಲ ದಾಟಿ ..ನಿಷ್ಠೆಯಿಂದ ಬದುಕಿ ..
ಶ್ರೇಷ್ಠ ಪುರುಷನಾಗಿ ..ಪಡೆದೆ ಜನರ ಭಕುತಿ ...
ಲಕ್ಷ್ಮಣನ ಪ್ರೀತಿ ...ಸೋದರತೆಗೆ ಸಾಕ್ಷಿ ...
ನಿನ್ನ ಜೀವ ಚರಿತೆ ...ಸರ್ವ ಜಗಕೆ ಸ್ಫೂರ್ತಿ ..
ಹನುಮನೆ ಪೂಜಿಪ ...ನಿನ ವಚನ ಪಾಲಿಪ...
ತನ್ನ ಎದೆಯ ತೆರೆಯುತ ...
ನಿನ್ನ ರೂಪ ತೋರಿದ ...
ಬರಡಾದ ಬದುಕಲ್ಲಿ ಭರವಸೆಯ ಬೆಳಕಾಗಿ ...
ರಾಮ,ನಾಮ,ಜಪದೊಳಗೆ ಕ್ಷಾಮ ಇರದು ನಿಜವಾಗಿ ...
ಕರುಣಾಳು ಬಾ ಬಳಿಗೆ ...ಹೊಸ ಹಸಿಯ ದಿಶೆಯಾಗಿ ..
ಶ್ರೀರಾಮ ..
ನಿನ ಮಹಿಮೆ ಬಲ್ಲರು ...
ಜಯಜಯರಾಮ ...
ಶರಣಾದೆವೆಲ್ಲರು ....
ಗಾಯಕಿ :ಪೂಜಾ ಸನಿಲ್
ಅಲ್ಬಂ: ಪೂಜಿಪೆ ರಾಮ
ಸಾಹಿತ್ಯ : ಶೆಟ್ಟಿ ಅಜಯ್ ರಾಜ್
ಬ್ಯಾನರ್: ಕಲಾ ನಿರೆಲ್
15 сен 2024