#bandemarama #yelahankabandemarama #trending #bhaskarthotagere
ಯಲಹಂಕದ ವೀರಸಾಗರದ ಶ್ರೀ ಆದಿಶಕ್ತಿ ಬಂಡೆಮಾರಮ್ಮನವರ ದೇವಾಲಯಕ್ಕೆ 150 ವರ್ಷಗಳ ಇತಿಹಾಸವಿದೆ. ಈ ದೇವಿಯ ಮೂಲ ವಿಗ್ರಹವು ಊರ ಒಳಗಿದ್ದು, ವೀರಸಾಗರದಲ್ಲಿ ಪ್ರತಿಷ್ಠಾಪಿಸಲ್ಪಟ್ಟಿರುವ ಬಂಡೆಮಾರಮ್ಮನವರು ಬರುವ ಭಕ್ತಾದಿಗಳ ಪಾಲಿಗೆ ಬಂಧುವಾಗಿದ್ದಾಳೆ ಎನ್ನುತ್ತಾರೆ ಇಲ್ಲಿಗೆ ಬರುವ ಭಕ್ತಸಮೂಹ.
ಈ ದೇವಾಲಯದಲ್ಲಿ ವಿಶೇಷವಾಗಿ ಅಮಾವಾಸ್ಯೆ ದಿನದಂದು `ತಡೆ' ಒಡೆಯಲಾಗುತ್ತದೆ. ಮಾಟಮಂತ್ರದಂತಹ ಸಮಸ್ಯೆಗಳಿಂದ ಬಳಲುತ್ತಿರುವವರು ದೂರದ ಊರುಗಳಿಂದ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು `ತಡೆ'ಒಡೆಸಲೆಂದೆ ಈ ದೇವಸ್ಥಾನಕ್ಕೆ ಬರುತ್ತಾರೆ. ಈ ದೇವಸ್ಥಾನದಲ್ಲಿ ಮತ್ತೊಂದು ವಿಶೇಷವಿದೆ. ಶ್ರೀ ಕ್ಷೇತ್ರ ಮಾರಿಕಟ್ಟೆಯ ಧರ್ಮಾಧಿಕಾರಿಗಳಾದ ಶ್ರೀ ಲೋಕೇಶ್ ಪಟ್ಟದ ದೇವರು ಅವರು ನುಡಿಯುವ ‘ಕವಡೆ ಶಾಸ್ತ್ರ’ ಕೇಳುಗರನ್ನು, ನೋಡುಗರನ್ನು ಆಶ್ಚರ್ಯಚಕಿತರನ್ನಾಗಿಸುತ್ತದೆ. ಇವರು ನುಡಿಯುವ ‘ಕವಡೆ ಶಾಸ್ತ್ರ’ 100ಕ್ಕೆ ನೂರರಷ್ಟು ಸತ್ಯವಾಗಿದೆ ಎನ್ನುತ್ತಾರೆ ಭಕ್ತಾದಿಗಳು, ಇದಕ್ಕೆ ಅಲ್ಲವೇ ಹೇಳುವುದು ವಿಜ್ಞಾನ, ತಂತ್ರ್ಯಜ್ಞಾನ ಎಷ್ಟೇ ಬೆಳೆದರು ಇವರೆಡಕ್ಕು ನಿಲುಕದ ಶಕ್ತಿ ಅದ್ಯಾವುದಾದರೂ ಇದೆ ಅಂದ್ರೆ ಅದುವೇ ದೈವ ಶಕ್ತಿ.
ಎಲ್ಲವೂ ಈ ದೇವಿ ಯಿಂದ ಸಾಧ್ಯವಾಗುತ್ತಿದೆ ದೇವಿ ‘ಕವಡೆ’ ಮೂಲಕ ಬರುವ ಭಕ್ತಾದಿಗಳ ಕಷ್ಟ-ಸುಖ ಮತ್ತು ಪರಿಹಾರವನ್ನು ನನ್ನ ಬಾಯಿಂದ ನುಡಿಸುತ್ತಿದ್ದಾಳೆ ಅಷ್ಟೇ ಎನ್ನುತ್ತಾರೆ ಧರ್ಮಾಧಿಕಾರಿಗಳಾದ ಶ್ರೀ ಲೋಕೇಶ್ ಪಟ್ಟದ ದೇವರು ಅವರು.
ಶ್ರೀ ಆದಿಶಕ್ತಿ ಬಂಡೆಮಾರಮ್ಮನವರ ದೇವಾಲಯ
ವೀರಸಾಗರ, ಯಲಹಂಕ, ಬೆಂಗಳೂರು-೫೬೦ ೦೩೪
ಮೋ: 9741098632, 9886048168
------------------------------------------------------------
Visit Website: www.eesanje.com
Follow us on
#Facebook: / eesanjenews
#Twitter: / eesanjenews
#Instagram: / eesanjenews
Subscribe to our RU-vid channel: / eesanjenews
Contact Us: eesanje@gmail.com
30 июн 2022