ದಾವಣಗೆರೆ: ದಾವಣಗೆರೆ ಸಂಸದ ಜಿಎಂ ಸಿದ್ದೇಶ್ವರ ವಿರುದ್ಧ ಸಚಿವ ಎಸ್ಎಸ್ ಮಲ್ಲಿಕಾರ್ಜುನ ಕಿಡಿಕಾರಿದ್ದಾರೆ. 1994ರಲ್ಲಿ ಜಿಎಂ ಸಿದ್ದೇಶ್ವರ್ ಹೇಗಿದ್ದರು, ನಾವು ನಮ್ಮಪ್ಪ ಬಡ್ಡಿ ವ್ಯವಹಾರವನ್ನು ಇದುವರೆಗು ಮಾಡಿಲ್ಲ, ನಮ್ಮಪ್ಪ ಭೀಮಸಮುದ್ರ ಬಿಟಿ ಕುಟುಂಬದ ಜೊತೆ ಕೈಗಡ ವ್ಯವಹಾರವಿತ್ತು, ನಾವು ಯಾವತ್ತು ಬಡ್ಡಿ ಲೇವಾದೇವಿ ವ್ಯವಹಾರ ಮಾಡಿಲ್ಲ, ಒಂದಕ್ಕೆ ನಾಲ್ಕು ರೂಪಾಯಿ ಬಡ್ಡಿ ವ್ಯವಹಾರವನ್ನು ಮಾಡಿ ಲೂಟಿ ಹೊಡೆದಿರಬಹುದು, ನಾನು ಜಿಎಂ ಸಿದ್ದೇಶ್ವರ್ರಿಂದ ಸಂಸ್ಕಾರವನ್ನು ಕಲಿಯಬೇಕಾಗಿಲ್ಲ, ನಾನು ಬೇಕಾದ್ರೆ ಅವರಿಗೆ ಸಂಸ್ಕಾರವನ್ನು ಹೇಳಿಕೊಡುತ್ತೇನೆ, ನಮ್ಮಪ್ಪ ನಮ್ಮಜ್ಜ ನಮ್ಮವ್ವ ಸಂಸ್ಕಾರ ಕಲಿಸಿದ್ದಾರೆ ಎಂದು ತಿರುಗೇಟು ಕೊಟ್ಟಿದ್ದಾರೆ.
ಬಡ್ಡಿ ಸಮೇತ ವಸೂಲು ಮಾಡಿದ್ದಾರೆಂದು ಮೊನ್ನೆ ಹೇಳಿಕೆ ಕೊಟ್ಟಿದ್ದಾರೆ, ಬಡ್ಡಿ ಸಮೇತ ವಸೂಲು ಮಾಡಿ ಸಂಸದರು ಊರು ಹಾಳುಮಾಡಿದ್ದಾರೆ, ದಾವಣಗೆರೆಯಲ್ಲಿ ಸಬ್ ರಿಜಿಸ್ಟರ್ ಸರ್ಕಾರಿ ಪಾರ್ಕ್ ನ್ನು ರಿಜಿಸ್ಟರ್ ಮಾಡಿಕೊಟ್ಟಿದ್ದಾರೆ, ಹಳೇ ದಾವಣಗೆರೆಯಲ್ಲಿ ಇಂತಹದೊಂದು ಪ್ರಕರಣ ಹೊರಬಂದಿದೆ, ಕಾರ್ಪೋರೇಟರ್ ಅಕ್ಕ ಅವರ ಅಪ್ಪ ಇಂತಹದೊಂದು ಪ್ರಕರಣದಲ್ಲಿ ಭಾಗಿಯಾಗಿದ್ದಾರೆ, 2021ರಲ್ಲಿ ಪಾರ್ಕ್ ಜಾಗವನ್ನು ಖಾತೆ ಮಾಡಿ 2022ರಲ್ಲಿ ರಿಜಿಸ್ಟರ್ ಮಾಡಿದ್ದಾರೆ, ನಾನು ಆ ಪ್ರಕರಣದಲ್ಲಿ ಸಬ್ ರಿಜಿಸ್ಟರ್ ಮೇಲೆ ಕ್ರಮ ಕೈಗೊಳ್ಳುತ್ತೇನೆ ಎಂದು ಹೇಳಿದರು.
#ssmallikarjun #davanagere #bjp
Our Website : Vijaykarnataka.com
Facebook: / vijaykarnataka
Twitter: / vijaykarnataka
Our Video Website: kannada.timesxp.com/
30 июл 2023