ಅತಿರೇಕದ ಹಾಸ್ಯ ಅಲ್ಲವಲ್ಲಾ...!!!? ಪ್ರಜ್ವಲ್ ಹಾಕಿದ ಯಾವುದೇ ವೇಷದಲ್ಲೂ ಅರ್ಥಗರ್ಭಿತ ಹಾಸ್ಯ ಇದ್ದೇ ಇರುತ್ತದೆ. ಪ್ರೇಕ್ಷಕರು ಅದನ್ನು ಬಯಸುತ್ತಾರೆ. ವಿಮರ್ಶೆ ಮತ್ತು ಚರ್ಚೆ ಮಾಡುವುದಾದರೆ, ಪ್ರೇಕ್ಷಕರು,ತಾವು(ಕಲಾವಿದರು) ಹೇಳಿದ್ದನ್ನು, ಮತ್ತು ಮಾಡಿದ್ದನ್ನು ಎಲ್ಲವನ್ನೂ ಬೆಲ್ಚಪ್ಪರಂತೆ ಒಪ್ಪಿಕೊಳ್ಳುತ್ತಾರೆಂದು ಕೆಲವು ಕಲಾವಿದರು ಬಾವಿಸುತ್ತಾರೆ!!! ಅದು ತಪ್ಪು ಕಲ್ಪನೆ!!! ಕೆಲವು ವರ್ಷಗಳ ಹಿಂದೆ ಮಂಗಳೂರಿನ ಪುರಭವನದಲ್ಲಿ ಪ್ರಸಿದ್ಧ!!!? ಕಲಾವಿದರ ಕೂಡುವಿಕೆಯಿಂದ ಅದ್ದೂರಿಯ *ಶ್ರೀ ದೇವಿಮಹಾತ್ಮೆ* ಟಿಕೆಟಿನ ಆಟ ನಡೆಯಿತು. ಬಾರೀ ಪ್ರಚಾರದೊಂದಿಗೆ ನಡೆದ ಆಟಕ್ಕೆ ಮಡಿಕೇರಿ, ಸುಳ್ಯ, ಉಡುಪಿ, ಕಾಶರಗೊಡು ಮುಂತಾದ ಪ್ರದೇಶಗಳಿಂದ ಅಭಿಮಾನಿಗಳು ಬಂದಿದ್ದರು. ಆಟ ಪ್ರಾರಂಭವಾಗಿ ಬ್ರಹ್ಮ ಮತ್ತು ವಿಷ್ಣು (ಕಲಾವಿದರ ಹೆಸರು ಹೇಳುವುದಿಲ್ಲ!!!🤣)ವಿಗೆ ಪಾರಂಪರಿಕವಾಗಿ ಭಾರೀ *ವಾದ* ನಡೆಯಿತು!!! ಕಡೆಗೆ ಅದು ವೈಯಕ್ತಿಕ ವಿಷಯಕ್ಕೆ ದಾರಿಮಾಡಿ ಕೊಟ್ಟಿತ್ತು! ಮೇಳದ ವಿಷಯ ಬಂತು! ಮೇಳದಿಂದ ಹೊರಹಾಕಿದ ವಿಷಯಬಂತು!!! 😇ಹಲವಾರು ದಶಕಗಳ ಅನುಭವದ ವಿಷಯ ಬಂತು! ಯೋಗ್ಯತೆಯ ವಿಷಯ ಬಂತು! ನಾನು ಅಷ್ಟು ಪುಸ್ತಕ! ವಿಮರ್ಶಾ ಲೇಖನ,ಬರೆದಿದ್ದೇನೆ! ತರಬೇತಿ!!! ಇತ್ಯಾದಿ ವಿಷಯಗಳು ಬಂದವು!!!ಒಬ್ಬೊಬ್ಬರು ಒಬ್ಬೊಬ್ಬರನ್ನು ಹೊಗಳಿ ಕೊಂಡರು! ಇಬ್ಬರೂ ಇಬ್ಬರನ್ನು ತೆಗಳಿ ಕೊಂಡರು!!! ಒಬ್ಬ ಕಲಾವಿದ ನೇರ ಚೌಕಿ ಗೆ ಹೋಗಿ ವೇಷ ಬಿಚ್ಚಿ ರಂಗಸ್ಥಳಕ್ಕೆ ಬಂದು ಏನೇನೋ ಹೇಳಲು ಪ್ರಾರಂಬಿಸಿದರು. ಕಡೆಗೆ ರೊಚ್ಚಿಗೆದ್ದ ಪ್ರೇಕ್ಷಕರು ಗಲಾಟೆ ಮಾಡಿ ಜಾಡಿಸಿದರು.ಪತ್ರಿಕೆಗಳಲ್ಲೂ ಬಂತು. ನಾನೂ ವಿಮರ್ಶೆ ಬರೆದೆ! ಕೆಲವರು *ಅಡ್ಡಗೋಡೆಯಲ್ಲಿ ದೀಪ ಇಟ್ಟಹಾಗೆ* ಹೇಳಿಕೆ ನೀಡಿದರು (ಅವರ ಹೆಸರೂ ಗೊತ್ತಿದೆ! 😂) ನಾನು ಇಬ್ಬರನ್ನೂ ಜಾಡಿಸಿ ಬರೆದೆ ಅಡ್ಡಗೋಡೆಯಲ್ಲಿ ದೀಪ ಇಟ್ಟಹಾಗೆ ಹೇಳಿಕೆ ನೀಡಿದ....ಅವರನ್ನೂ ಕುಟುಕಿದೆ! ಯಾಕೆ ಗೊತ್ತಾ??? ಎಷ್ಟೋ ವರ್ಷದ ಅನುಭವ!!! ಯಕ್ಷಗಾನ ಪುಸ್ತಕ!!! ವಿಮರ್ಶಾ ಲೇಖನ, ತರಬೇತಿ, ಹಲವಾರು ಸನ್ಮಾನ, ಪ್ರಶಸ್ತಿ!!!..... ಹೀಗಿದ್ದೂ ಒಂದೇ ಕ್ಷಣದಲ್ಲಿ... ಕೆಲವೇ ನಿಮಿಷಗಳಲ್ಲಿ ಸಾವಿರಾರುಮಂದಿ ಸೇರಿರುವ ಈ ಪುಣ್ಯ ಪ್ರಸಂಗದ ರಂಗಸ್ಥಳದಲ್ಲಿ ಇವರೇನು ಮಾಡಿದ್ದು? ಇವರ ಅತಿರೇಕದಿಂದಾಗಿ ಇವರು ಮಾಡಿದ ಸೇವೆ ನೀರಿನಲ್ಲಿ ಹೋಮ ಹಾಕಿದ ಹಾಗೆ ಆಗಲಿಲ್ಲವೇ? ಗಂಡುಕಲೆ ಯಕ್ಷಗಾನ ಪರಂಪರೆಯ ಮರ್ಯಾದೆಯನ್ನು ಇವರು ಮಣ್ಣುಪಾಲು ಮಾಡಿದಲ್ಲವೆ? ಇವರ *ವೈಯಕ್ತಿಕ ವಾದಕ್ಕೆ* (ಜಗಳಕ್ಕೆ)ಇದೇ ರಂಗಸ್ಥಳ ಬೇಕಿತ್ತಾ??? ಕಲಾವಿದರು ಸಮಾಜಕ್ಕೆ ಮಾದರಿ ಆಗಬೇಕು. ವೈಯಕ್ತಿಕ ಬದುಕು ಅವರಿಗೂ ಬೇಕು.ಅದು ಬೇರೆ ವಿಷಯ. ಆದರೆ ಗಂಡುಕಲೆಯ ಮರ್ಯಾದೆ ಹರಾಜು ಮಾಡಬಾರದಲ್ಲವೇ?....ಒಂದು ವಿಷಯ ರಂಗದಲ್ಲಿನ ಕಲಾವಿದರ ನೈಜತನ (ಒಳ್ಳೆಯತನ) ಈಗ ಪ್ರೇಕ್ಷಕರ ಕೈಯಲ್ಲಿದೆ!!!(ಮೊಬೈಲ್ನಲ್ಲಿ😂)ಅಲ್ಲವೆ???@mudushedde.mangaluru.