ನನಗೆ ಬುದ್ದಿವಾದ ಹೇಳುವವರು ಮೊದಲು ಹೇಗೆ ಇದ್ದಾರೆ ಎನ್ನುವುದನ್ನು ಅವರು ಮೊದಲು ನೋಡಿಕೊಳ್ಳಲಿ. ಅವರ ಬಗ್ಗೆ ಜನತೆ ಯಾವ ಅಭಿಪ್ರಾಯ ಹೊಂದಿದ್ದಾರೆ ಎನ್ನುವುದನ್ನು ಊರೂರು ಸುತ್ತಿ ತಿರುಗಿ ಅರಿತುಕೊಳ್ಳಲಿ ಎಂದು ಮಾಜಿ ಸಚಿವ, ಮಂಗಳೂರು ಕ್ಷೇತ್ರ ಶಾಸಕ ಯು ಟಿ ಖಾದರ್ ಹೇಳಿದ್ದಾರೆ. ಉಳ್ಳಾಲದಲ್ಲಿ ನಡೆದ ಪ್ರತಿಭಟನೆ ಸಂದರ್ಭದಲ್ಲಿ ಗುರುಪುರ ವಜ್ರದೇಹಿ ಸ್ವಾಮೀಜಿ ಅವರು ಉಳ್ಳಾಲ ಖಾದರ್ ವಿರುದ್ಧ ಮಾಡಿರುವ ಟೀಕೆಗಳಿಗೆ ಅವರು ತಿರುಗೇಟು ನೀಡಿದರು. ಇನ್ನು ಕಲ್ಲಡ್ಕ ಪ್ರಭಾಕರ ಭಟ್ ನೀಡಿದ ಹೇಳಿಕೆಗೆ ಕೂಡಾ ಇದೇ ವೇಳೆ ತಿರುಗೇಟು ನೀಡಿದ ಅವರು ಕೊರೊನಾ ಸಂದರ್ಭದಲ್ಲಿ ನಾವು ಉಳ್ಳಾಲದಲ್ಲಿ ಮನೆ ಮನೆಗೆ ತೆರಳಿ ನಮ್ಮ ಸಹಾಯ ಮಾಡಿದ್ದೇವೆ. ಇವರು ಎಲ್ಲಿದ್ದರು..? ಮೊದಲು ಇವರು ಕೂಡಾ ಬಡವರ ಪರ ಕೆಲಸ ಮಾಡಲಿ. ಇವರೂ ಕೆಲಸ ಮಾಡಲಿ. ಜನ ಇವರಿಗೂ ಓಟು ಕೊಡುತ್ತಾರೆ.
ನಮ್ಮ ಕುಡ್ಲ 24X7 ಇದು ವಿಶ್ವಾಸದ ಪ್ರತಿಬಿಂಬ
#NammaKudla #Nammakudlanews24x7 #Nammakudlalive #LIVENEWS
► Download NammaKudlanews 24x7 AndroidApp
:play.google.com/store/apps/de...
id=com.queryapps.nammakudla1
► Subscribe to Namma Kudla news 24x7 :
/ @nammakudlanews24x7
view_as=subscriber
► Like us on Facebook:https: / nammakudla24x7
► Follow us on Twitter: / kudlanamma
29 янв 2021