ಎಂಥಾ ಶ್ರೀಮಂತಾನಂತನೋ | Entha Srimantha | Shri Prassana Venkata Dasaru By: Shanmukharaja M
#bhakti #bhavageethegalu #dasarapada #shanmukharaja #music #prayer #kannada #devotional #lyrics #song
ಶ್ರೀ ಪ್ರಸನ್ನ ವೆಂಕಟ ದಾಸರು ರಚಿಸಿದ ಕೀರ್ತನೆಗಳಲ್ಲಿ ಬಹಳ ಮುಖ್ಯವಾದ ಹಾಡು - ಎಂಥಾ ಶ್ರೀಮಂತಾನಂತನೋ. ಇತಿಹಾಸದ ಪ್ರಕಾರ, ಆಳುವ ಪೇಶ್ವೆ ಬಾಜಿರಾವ್ ತನ್ನ ಆಸ್ಥಾನಕ್ಕೆ ದಾಸರನ್ನು ಕರೆತರಲು ವೈಯಕ್ತಿಕ ಬರವಣಿಕೆದಾರನನ್ನು ದೂತನಾಗಿ ಕಳುಹಿಸಿವನು. ದೂತನು ಪ್ರಸನ್ನ ವೆಂಕಟ ದಾಸರನ್ನು ಪೇಶ್ವೆಯ ಆಸ್ಥಾನಕ್ಕೆ ಆಹ್ವಾನಿಸುತ್ತಾನೆ ಮತ್ತು ಈ ಪ್ರಕ್ರಿಯೆಯಲ್ಲಿ ತಮ್ಮ ಸ್ವಂತ ಬರವಣಿಗೆಯ ಕೌಶಲ್ಯದ ಬಗ್ಗೆ ಬಹಳ ಹೆಮ್ಮೆಯಿಂದ ಮಾತನಾಡುತ್ತಾರೆ. ದಾಸರು ಭಗವಂತನನ್ನು ಸ್ತುತಿಸುವ ಯಾವ ಪೂರ್ವಸಿದ್ಧತೆಯಿಲ್ಲದೆಯೇ ಕೀರ್ತನೆಯನ್ನು ಹಾಡಲು ಶುರುಮಾಡುತ್ತಾರೆ ಮತ್ತು ಬರೆಯುವಂತೆ ದೂತನಿಗೆ ಪಂಥಹ್ವಾನ ನೀಡುತ್ತಾರೆ. ಕನ್ನಡದ ಈ ದಾಸಕೀರ್ತನೆಯು ಆಧುನಿಕ-ದಿನದ ರಾಪ್ ಹಾಡಿಗಿಂತ ಎನೇನೂ ಕಡಿಮೆಯಿಲ್ಲ, ಹಾಡನ್ನು ಬರೆಯಲು ವಿಫಲವಾದ ದೂತನಿಗೆ ವಿಸ್ಮಯವೋ ವಿಸ್ಮಯ. ಅಹಂಕಾರ ಮುರಿದು ತನ್ನ ಸೋಲನ್ನು ಒಪ್ಪಿಕೊಳ್ಳುತ್ತಾನೆ.
ಎಂಥಾ ಶ್ರೀಮಂತಾನಂತನೋ ಶ್ರೀಕಾಂತೆಯ ಕಾಂತಎಂಥಾ ಶ್ರೀಮಂತಾನಂತನೋ
ಬೊಮ್ಮನು ಹೆಮ್ಮಗ ಮೊಮ್ಮ ಮ್ಮಢಮ್ಮರಿ
ಮೊಮ್ಮಗ ಶಣ್ಮಶಿರಮ್ಮ ಪರಮ್ಮಅಮ್ಮರಸಮ್ಮೋಹ ನಿಮ್ಮಣುಗಮ್ಮರು
ನಮ್ಮೊ ನಮ್ಮ ಪರಮ್ಮ ಮಹಿಮ್ಮ
ಅಂಬರುಹಂಗಳ ಅಂಗನಂತಗತ ಮಂಗಳ
ಪಾಂಗ ವಿಶ್ವಂಗಳ ಮಂಗಳಸಿಂಗರದಂಗುಟ ಸಂಗದ ಗಂಗಜ
ಕಂಗಳ ಘಂಗಳ ಹಿಂಗಿಪಳಾಂಗಾ
ಪನ್ನಗಪನ್ನಶಯನ್ನ ಮಹೋನ್ನತ
ಪನ್ನಗವರವಾಹನ್ನ ರತುನ್ನಭವಾನ್ನ ಸುಖೋನ್ನತ ರನ್ನಗ
ರನ್ನಿಜ ನಿನ್ನೆದುರಿನ್ನ್ಯಾ ರೆನ್ನೊಡೆಯನ್ನೆ
ಬಲ್ಲ ಕೈವಲ್ಯಜ್ಞರೊಲ್ಲಭ ಸುಲ್ಲಭ
ಬಲ್ಲಿದ ಖುಲ್ಲರದಲ್ಲಣನಲ್ಲದೆಹುಲ್ಲುದುನನ್ನೊಳವಲ್ಲ ನಿನ್ನಲ್ಲದೆ
ಸಲ್ಲದು ಸೊಲ್ಲ ನಿನ್ನಲ್ಲದಿನಿಲ್ಲ
ಅಂಬರ ದುಂಬಿಗೆ ತುಂಬೆ ವಿಶ್ವಂಬಸುರ
ದಿಂಬಿಲಿ ನಿಂಬಿಟ್ಟುಕೊಂಬ ಕೃಪಾಂಬುಧಿಇಂಬಕದಂಬಕಬಿಂಬ ಪ್ರಸನ್ವೇಂಕಟ
ನಂಬಿದ ಬಿಂಬನಿವನೆಂಬ ಕುಟುಂಬಿ
12 сен 2024