ಮನಸ್ಸಿನ ಗೊಂದಲಗಳನ್ನು ನಿವಾರಿಸುವುದು ಹೇಗೆ? | ಅವಧೂತ ಶ್ರೀ ವಿನಯ್ ಗುರೂಜಿ
ಹೆಣ್ಣು ದೇವೀ ಸ್ವರೂಪ. ಆದರೆ ಹೆಣ್ಣು ದೇಹದಿಂದ ದೇವಿಯಲ್ಲ. ಹೆಣ್ಣಿನಲ್ಲಿರುವ ಚೈತನ್ಯ ಶಕ್ತಿಯಿಂದ ದೇವರ ಸ್ವರೂಪ. ಆದ್ಯಾತ್ಮದಲ್ಲಿ ಮೊದಲು ಬೇಕಾಗಿರುವುದು ಮನಸ್ಸಿನ ಪರಿಸ್ಥಿತಿಯನ್ನು ನೇರಾನೇರ ದಾರಿ ತೋರಿಸುವವರ ಮುಂದೆ ಬಿಚ್ಚಿಡುವುದು. ಅವಾಗ ನಿಜವಾದ ಜ್ಞಾನಿ ಅಥವಾ ಗುರುವಾಗಿರುವವನು ಅವನಿಗೆ ದಾರಿ ತೋರಿಸುತ್ತಾನೆ. ನಾವು ನಮ್ಮ ಮನಸ್ಸಿನ ಗೊಂದಲಗಳಿಗೆ ಉತ್ತರವನ್ನು ಕಂಡುಕೊಂಡಾಗಲಷ್ಟೇ ನಮ್ಮ ಮನಸ್ಸಿನ ಭ್ರಮೆಗಳಿಗೂ ಉತ್ತರ ಸಿಗುವುದು. ಈ ಅಧ್ಯಯನ ಮೊದಲು ನಡೆಯಬೇಕು. ಮೊದಲು ನಾವು ನಮ್ಮ ಮನಸ್ಸನ್ನು ಹತೋಟಿಯಲ್ಲಿ ಇಡಬೇಕಾಗುತ್ತದೆ. ಯಾಕೆಂದರೆ ಮನಸ್ಸಿಗೆ ದೇಹದ ಆವಶ್ಯಕತೆ ಇಲ್ಲ ಎಂದರೆ ಅದಕ್ಕೆ ಅಸ್ಥಿತ್ವ ಇಲ್ಲ.
4 июл 2024