ಮಿಥುನ ರಾಶಿಯವರು ಯಾವ ಸಮಯದಲ್ಲಿ ಜಾಗೃತಿ ವಹಿಸುವುದು ಉತ್ತಮ
ಮಿಥುನ ರಾಶಿಯವರಿಗೆ ಈ ವರ್ಷದಲ್ಲಿ ಗುರು ಶನಿ ರಾಹು ಗಳೆಲ್ಲರು ಅಶುಭ ಫಲವನ್ನು ನೀಡುವರು.
ದೇವರ ಅನುಗ್ರಹ ಇಲ್ಲದಿರುವುದು,
ಕೆಲಸ ವ್ಯವಹಾರದಲ್ಲಿ ತುಂಬಾ ಕಠಿಣ ಪರಿಸ್ಥಿತಿ ಬರುವುದು,
ಉದ್ಯೋಗದಲ್ಲಿ ಬದಲಾವಣೆ ಬರುವುದು,
ಪ್ರೇಮಿಗಳಿಗೆ ಸ್ತ್ರೀ ಸಂಬಂಧವಾಗಿ ತೊಂದರೆಗಳು ಬರುವ ಸಾಧ್ಯತೆ ಹೆಚ್ಚಿದೆ,
ಆರೋಗ್ಯದಲ್ಲಿ ಏರುಪೇರು ನಿಮ್ಮ ಉನ್ನತ ಅಧಿಕಾರಿಗಳಿಂದ ದಬಾಯಿಸುವಿಕೆ ಇರುವುದು.
ಕುಟುಂಬ ವರ್ಗದವರಿಂದ ದೂರವಿರಬೇಕಾದ ಸಾಧ್ಯತೆಯೂ ಬರುವುದು.
ಮನಸ್ಸಿಗೆ ನೆಮ್ಮದಿ ಇಲ್ಲದಿರುವುದು.
ಪ್ರಾಣಿ ಮತ್ತು ವಿಷಜಂತುಗಳಿಂದ ತೊಂದರೆ ಉಂಟಾಗುವುದು.
ಪ್ರಯಾಣ ಸಮಯದಲ್ಲಿ ಜಾಗೃತಿ ವಹಿಸಬೇಕು.
ರಾತ್ರಿ ಸಮಯದಲ್ಲಿ ವಾಹನ ಚಾಲನೆ ಮಾಡುವುದು ಕಡಿಮೆ ಮಾಡಿದರೆ ಉತ್ತಮ.
ನವಗ್ರಹ ಸ್ತೋತ್ರ ಹೋಮ ಮಾಡುವುದು ಉತ್ತಮ.
||ಶ್ರೀ ಕೃಷ್ಣಾರ್ಪಣಮಸ್ತು||
31 мар 2024