23ನೇ ಫೆಬ್ರವರಿ; ತಿಡಗುಂದಿ ಆಕ್ವಾಡಕ್ಟ್ ನಿಂದ ಭೂತನಾಳ ಕೆರೆಗೆ ಕೃಷ್ಣಾ ನದಿ ನೀರು ತುಂಬಿಸಿ, ಅಲ್ಲಿಂದ ವಿಜಯಪುರ ನಗರಕ್ಕೆ ಹರಿಸುವಂತೆ 5 ದಿನಗಳ ಹಿಂದೆ ಅಧಿಕಾರಿಗಳಿಗೆ ಸಚಿವರಾದ ಡಾ. ಎಂ.ಬಿ. ಪಾಟೀಲ್ ಸೂಚಿಸಿದ್ದರು. ಪಾಟೀಲರ ನಿರ್ದೇಶನದಂತೆ ಕೆರೆಗೆ ನೀರು ಹರಿಸಿದ್ದಾರೆ. ಭೂತನಾಳ ಕೆರೆಗೆ ಜೀವ ಕಳೆ ಬಂದಿದೆ. ಜೊತಗೆ ವಿಜಯಪುರದ ಜನತೆಯ ಕುಡಿಯುವ ನೀರಿನ ದಾಹ ನೀಗಲಿದೆ.
19 сен 2024