ವೃಷಭ ರಾಶಿಯವರಿಗೆ ಜನ್ಮ ರಾಶಿಯಲ್ಲಿ ಗುರು ದಶಮದಲ್ಲಿ ಶನಿ ಪಂಚಮದಲ್ಲಿ ಕೇತು ಇರುವುದರಿಂದ ದೈವಬಲ ಈ ವರ್ಷ ಸ್ವಲ್ಪ ಕಡಿಮೆಯಾಗಿರುವುದು.
ಖರ್ಚು ಹೆಚ್ಚಾಗುವುದು,
ಜನರ ವಿರೋಧ ಹೆಚ್ಚಾಗುತ್ತದೆ ಶತ್ರುಗಳ ಬಾಧೆ ಹೆಚ್ಚಾಗುವುದು,
ಅನಾರೋಗ್ಯ ಹೆಚ್ಚಾಗುತ್ತದೆ,
ನಿಮ್ಮ ಆತ್ಮೀಯರೊಡನೆ ಜಗಳವಾಗುವ ಸಂದರ್ಭ ಹೆಚ್ಚಿದ್ದು
ದುಡುಕಿನ ನಿರ್ಧಾರಗಳಿಂದ ನಿಮ್ಮ ದಾಂಪತ್ಯ ಜೀವನಕ್ಕೆ ಅಡ್ಡಿಯಾಗುವ ಸಂಭವ ಇದೆ.
ಚಂಚಲ ಬುದ್ಧಿ ಮತ್ತು ಉದ್ಯೋಗದಲ್ಲಿ ಬದಲಾವಣೆ ಉಂಟಾಗುವುದು
ಹಣವು ಹೆಚ್ಚಾಗಿ ಪೋಲಾಗುವುದು
ವಿಷ್ಣುದೇವರ ಆರಾಧನೆ ಗಣಪತಿ ಸೇವೆ ಹಿರಿಯರ ಸೇವೆ ಗೋ ಸೇವೆ ಅನ್ನದಾನ ಮಾಡಿದ್ದಲ್ಲಿ ಶುಭವಾಗುವುದು.
||ಶ್ರೀ ಕೃಷ್ಣಾರ್ಪಣಮಸ್ತು||
31 мар 2024