ಅತ್ಯಂತ ಉಪಯುಕ್ತ ಉಪನ್ಯಾಸ ಮಕ್ಕಳಿಗೂ,ಹಿರಿಯರಿಗೂ.ಇಂದಿನ ಅವಶ್ಯಕತೆಯೇ ಇದು.ಇದನ್ನು ಆಲಿಸಿದ ಎಲ್ಲರೂ ತಮ್ಮ ಹಾಗೂ ಇತರ ಮಕ್ಕಳಿಗೆ ಇದನ್ನು ಕೇಳಲು ಅವಕಾಶ ಮಾಡಿಕೊಡಲು ವಿನಂತಿ. ಪೂಜ್ಯ ಗುರುಗಳ ಅಡಿದಾವರೆಗಳಿಗೆ ನನ್ನ ನಮನಗಳು.
. *ಶ್ರೀ ಬ್ರಹ್ಮಾನಂದ ಭಾರತಿ ಸ್ವಾಮಿಗಳು*: *ಶ್ರೀ ಚೈತನ್ಯ ರಾಜಾರಾಮ ಆಶ್ರಮ*, ಶಿರಳಗಿ ಸಿದ್ದಾಪುರ (ಉತ್ತರ ಕನ್ನಡ ಜಿಲ್ಲೆ) ಶ್ರೀ ಬ್ರಹ್ಮಾನಂದ ಭಾರತಿ ಸ್ವಾಮೀಜಿಯವರು ಆಳವಾದ ಅಧ್ಯಯನ ಹಾಗೂ ನಿರಂತರ ತಪಸ್ಸಿನಲ್ಲಿ ತೊಡಗಿರುವ ಯೋಗಿಗಳು. ಅದ್ವೈತ ತತ್ವದಲ್ಲಿ ಅಪಾರ ಶ್ರದ್ಧೆ, ಸಾಧನೆ ಹಾಗೂ ಜ್ಞಾನವಿರುವ ಗುರುಗಳು. ತಮ್ಮ ವಿದ್ವತ್ಪೂರ್ಣ ಪ್ರವಚನ ಹಾಗೂ ವಾತ್ಸಲ್ಯಮಯ ಮಾರ್ಗದರ್ಶನದಿಂದಾಗಿ ಈಗಾಗಲೇ ನಾಡಿನಾದ್ಯಂತ ಪರಿಚಿತರಾಗಿದ್ದಾರೆ. ಉಪನಿಷತ್, ಭಗವದ್ಗೀತೆ, ಶ್ರೀ ಶಂಕರಾಚಾರ್ಯರ ಬೋಧನೆಗಳು ಇತ್ಯಾದಿಗಳ ಕುರಿತಂತೆ ಅವರು ನಡೆಸಿಕೊಡುತ್ತಿರುವ ಸತ್ಸಂಗಗಳು ರಾಜ್ಯಾದ್ಯಂತ ಅಧ್ಯಾತ್ಮ ಸಾಧಕರನ್ನು ಈ ದಾರಿಯಲ್ಲಿ ಸಾಗಲು ಪ್ರೇರೇಪಿಸುತ್ತಿವೆ. ಬ್ರಹ್ಮೀಭೂತ ಶ್ರೀ ಪರಮಾನಂದ ಭಾರತಿ ಸ್ವಾಮೀಜಿಯವರ ಶಿಷ್ಯರಾಗಿರುವ ಅವರು, ಶ್ರೀ ಶಂಕರಾಚಾರ್ಯರು, ಶ್ರೀ ರಮಣರು, ಶ್ರೀ ಶ್ರೀಧರ ಸ್ವಾಮಿಗಳು ಇವರೆಲ್ಲರ ಗುರು ಪರಂಪರೆಯು ನೀಡಿದ ಜ್ಞಾನಸಾಗರದಲ್ಲಿ ಸದಾ ಅನುಸಂಧಾನ ನಡೆಸುತ್ತಿರುವ ಯೋಗಿಗಳು. ತಮ್ಮ ನಿರಂತರ ತಪಸ್ಸು, ಆಳವಾದ ಜ್ಞಾನ, ಪ್ರಶಾಂತತೆ, ಸುಮಧುರ ಹಾಗೂ ಸ್ಫುಟವಾದ ಕನ್ನಡ, ವಾತ್ಸಲ್ಯಪೂರ್ಣ ಧ್ವನಿ, ನಾಲಿಗೆಯಲ್ಲಿ ನಲಿಯುವ ಉಪನಿಷತ್ತು, ಭಗವದ್ಗೀತೆ ಹಾಗೂ ಮಂಕುತಿಮ್ಮನ ಕಗ್ಗದಂಥ ಚಿಂತನೆಗಳು- ಇವೆಲ್ಲವುಗಳಿಂದಾಗಿ, ಸ್ವಾಮೀಜಿಯವರ ಪ್ರವಚನ-ಸತ್ಸಂಗ ಕಾರ್ಯಕ್ರಮಗಳು ಈಗಾಗಲೇ ಲಕ್ಷಾಂತರ ಸಾಧಕರ ಮನೋಬುದ್ಧಿಯನ್ನು ತಟ್ಟಿವೆ. ಪ್ರಸ್ತುತ ಅವರು ಲೋಕಕಲ್ಯಾಣದ ಆಶಯದೊಂದಿಗೆ “ತ್ರಯೋದಶ ಕೋಟಿ ರಾಮತಾರಕ ಮಂತ್ರ ಜಪಯಜ್ಞ” ಕೈಗೊಂಡಿದ್ದು, ಈ ಜಪದಲ್ಲಿ ತೊಡಗಿಕೊಳ್ಳಲು ರಾಜ್ಯಾದ್ಯಂತ ಅನೇಕರಿಗೆ ಪ್ರೇರಣೆ ನೀಡುತ್ತಿದ್ದಾರೆ. ಸದಾ ತಪಸ್ಸು, ಅಧ್ಯಯನ ಹಾಗೂ ಜ್ಞಾನ ಪ್ರಸರಣಕ್ಕಾಗಿ ಸತ್ಸಂಗದಲ್ಲಿ ನಿರತರಾಗಿರುವವರು ಶ್ರೀ ಬ್ರಹ್ಮಾನಂದ ಭಾರತಿ ಸ್ವಾಮಿಗಳು.
howdu gurugale odade hana maaduva namma film herogalu eshtu jana odi degreepadediddare?? namma rajkumar avara makkalu, Ambaani ivarugalu utthama nirdarshana