ದಾವಣಗೆರೆ: ಅಡಿಕೆಗೆ ನಾನಾ ರೀತಿಯಲ್ಲಿ ಮಿಶ್ರಣ ಮಾಡುವಲ್ಲಿ ಪರಿಣಿತರು. ಕಲಬೆರಕೆ ಬಗ್ಗೆ ಚೆನ್ನಾಗಿ ಗೊತ್ತು. ಲೋಕೋಪಯೋಗಿ ಇಲಾಖೆಯ ಕಾಮಗಾರಿಗಳ ಬಗ್ಗೆ ಸರಿಯಾದ ಮಾಹಿತಿ ಪಡೆಯಲಿ. ಅದನ್ನು ಬಿಟ್ಟು ಬೇರೆ ರೀತಿಯಾಗಿ ಮಾತನಾಡಿದರೆ ಸರಿ ಇರಲ್ಲ. ನಾಯಿ, ನರಿ, ಕಾಗೆ ಬೊಗಳಿದರೆ, ಕೂಗಿದರೆ ನಾನು ಪ್ರತಿಕ್ರಿಯೆ ನೀಡಬೇಕಾ. ನೋಡೋಣ, ಏನೇನು ಮಾಡುತ್ತಾರೆ ಎಂಬುದನ್ನು. ಆಮೇಲೆ ನಾನು ಮಾತನಾಡುತ್ತೇನೆ.
ಇದು ಸಂಸದ ಜಿ. ಎಂ. ಸಿದ್ದೇಶ್ವರ್ ವಿರುದ್ಧ ಹೆಸರು ಹೇಳದೇ ಮಾಜಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಅವರು ಆಕ್ರೋಶ ವ್ಯಕ್ತಪಡಿಸಿದ ಪರಿ.
ಕಲ್ಲೇಶ್ವರ ರೈಸ್ ಮಿಲ್ನಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ನಾವು ಮಂಜೂರು ಮಾಡಿದ ಕಾಮಗಾರಿಗಳಿಂದ ಬಂದ ಹಣದಲ್ಲಿ ಬಿಜೆಪಿಯವರು ಮಜಾ ಮಾಡುತ್ತಿದ್ದಾರೆ. ಒಂದು ಕಾಮಗಾರಿಯಾದರೂ ಮಂಜೂರಾತಿ ಮಾಡಿದ್ದರೆ ತೋರಿಸಲಿ. ಹಳೇ ಬಸ್ ನಿಲ್ದಾಣ ಕಾಮಗಾರಿ ಸೇರಿದಂತೆ ನಾವು ಮಾಡಿದ ಎಲ್ಲಾ ಯೋಜನೆಗಳನ್ನು ಹಾಳು ಮಾಡಿದ್ದಾರೆ. ನಾವು ಮಾಡಿದ ಕೆಲಸಗಳಿಗೆ ಬೇರೆಯವರ ಹೆಸರು ನಾಮಕರಣ ಮಾಡುತ್ತಿದ್ದಾರೆ. ಅವರು ಮಂಜೂರು ಮಾಡಿಸಿಕೊಂಡು ಬಂದಿರುವ ಯೋಜನೆಗಳಿಗೆ ಹೆಸರಿಡಲಿ. ದಾವಣಗೆರೆಯಲ್ಲಿ ವಿಮಾನ ನಿಲ್ದಾಣ, ಕೈಗಾರಿಕೆ ಸೇರಿದಂತೆ ಇಲ್ಲಿನ ಜನರಿಗೆ ಅನುಕೂಲವಾಗುವಂಥ ಕೆಲಸ ಮಾಡಲಿ. ನಾವೂ ಸಹಕಾರ ನೀಡುತ್ತೇವೆ. ಅದನ್ನು ಬಿಟ್ಟು, ನಮ್ಮ ಅವಧಿಯಲ್ಲಿ ಆದ ಕೆಲಸಗಳಿಗೆ ಯಾರ್ಯಾರದ್ದೋ ಹೆಸರು ನಾಮಕರಣ ಮಾಡಿದರೆ ನಾವು ಸುಮ್ಮನಿರಬೇಕಾ ಎಂದು ಪ್ರಶ್ನಿಸಿದರು.
40 ಪರ್ಸೆಂಟ್ ತೆಗೆದುಕೊಂಡು ಕೆಲಸ ಮಾಡಲಾಗುತ್ತಿದೆ. ಇದು ಎಲ್ಲರಿಗೂ ಗೊತ್ತಿರುವ ವಿಚಾರ. ಕುಂದುವಾಡ ಕೆರೆ ಸೇರಿದಂತೆ ದಾವಣಗೆರೆಯಲ್ಲಿ ನಡೆಯುತ್ತಿರುವ ಕಾಮಗಾರಿಗಳಲ್ಲಿ ಹಣ ಪಡೆದರೆ ಕೆಲಸ ಆಗುವುದಾದರೂ ಹೇಗೆ? ನಮ್ಮ ಅವಧಿಯಲ್ಲಿ ಮಂಜೂರಾದ ಕಾಮಗಾರಿಗಳಲ್ಲಿನ ಪರ್ಸಂಟೇಜ್ ಪಡೆದು ಮಜಾ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ರಾಜಕಾರಣ ನಿಂತ ನೀರಲ್ಲ, ಅಧಿಕಾರ ಶಾಶ್ವತ ಇಲ್ಲ, ಎರಡು ಬಾರಿ ಮಂತ್ರಿ ಆಗಿದ್ದೇನೆ. ಈಗ ಆರಾಮಾಗಿ ಸಂತೋಷವಾಗಿಲ್ವಾ. ನನಗೆ ಅಧಿಕಾರ ಇದ್ದರೂ ಒಂದೇ ಇಲ್ಲದಿದ್ದರೂ ಒಂದೇ. ಕಮೀಷನ್ ಪಡೆದು ಜೇಬು ತುಂಬಿಸಿಕೊಳ್ಳುವ ಬದಲು ಜನರಿಗಾಗಿ ಕೆಲಸ ಮಾಡಲಿ. ವೈಯಕ್ತಿಕವಾಗಿ ನನಗೆ ಯಾರ ಮೇಲೂ ದ್ವೇಷ ಇಲ್ಲ. ಅಭಿವೃದ್ಧಿ ಕೆಲಸಗಳನ್ನು ಹೇಗೆ ಮಾಡ್ತಾರೆ ಅಂತಾ ನೋಡೋಣ ಅಂತಾ ನಾನು ಸುಮ್ಮನಿದ್ದೇನೆ. ಬಿಜೆಪಿಯವರ ಕಮೀಷನ್ ದಾಹದ ಬಗ್ಗೆ ಜನರಿಗೂ ಗೊತ್ತಾಗಬೇಕು ಎಂದು ತಿಳಿಸಿದರು.
ಬಿಜೆಪಿಯವರು ಜೇಬು ತುಂಬಿಸಿಕೊಳ್ಳುತ್ತಿದ್ದಾರೆ. ನಾಯಿ, ನರಿ, ಕಾಗೆ ಕೂಗಿದರೆ, ಬೊಗಳಿದರೆ ನಾನು ಉತ್ತರ ಕೊಡಬೇಕಾ? ಅದಕ್ಕೂ ಸಮಯ ಬರುತ್ತೆ. ಅಡಿಕೆಗೆ ನಾನಾ ರೀತಿಯ ಅಡಿಕೆ ಮಿಶ್ರಣ ಮಾಡುವಲ್ಲಿ ಬಹಳ ಪರಿಣಿತರು. ಕಲಬೆರಕೆ ಮಾಡುವುದರಲ್ಲಿ ನಿಪುಣರಿದ್ದಾರೆ ಎಂದು ಸಂಸದ ಜಿ. ಎಂ. ಸಿದ್ದೇಶ್ವರ್ ಹೇಸರೇಳದೇ ಆರೋಪಿಸಿದರು.
#SSMallikarjun #GMSiddeshwara #Davanagere
Our Website : Vijaykarnataka.com
Facebook: / vijaykarnataka
Twitter: / vijaykarnataka
13 май 2022