ಬಣ್ಣಕೆ ಮರುಳಾಗಿ ಮಣ್ಣು ತಿನ್ನಬೇಡ ಬೇರಾರದೊ ಹೊನ್ನಿಗೆ ಕನ್ನ ಹಾಕಬೇಡ ಮಾತಿಗೆ ಮರುಳಾಗಿ ಮಂಕನಾಗಬೇಡ ಮತಿಯ ಮಂಗನ ಮಾಡಿ ಅತಿ ಆಸೆ ಪಡಲುಬೇಡ...೧ ನಿನ್ನ ನೀ ಹೊಗಳುತ ಪರರ ನಿಂದಿಸಬೇಡ ಕಳೆದ್ಹೋದ ವಿಷಯಕೆ ಮತ್ತೆ ಚಿಂತಿಸಬೇಡ ಕಳೆದೆಲ್ಲ ಕಷ್ಟ ನೆನೆದು ಕಣ್ಣೀರು ಹಾಕಬೇಡ ಇತರರಿಗೆ ನೋವುಕೊಟ್ಟು ನಗುತ ನಿಲ್ಲಬೇಡ..೨ ಮಕ್ಕಳ ಬೆಳೆಸಿ ನೀ ಸುಖವ ಕೋರಲುಬೇಡ ಮುಕ್ಕಾದ ಮನದಿಂದ ಶಾಪ ನೀಡಲೇಬೇಡ..೩ ರಾತ್ರಿಯ ಕತ್ತಲನು ಬೆಳಕೆಂದು ಭ್ರಮಿಸಬೇಡ ಖಾತ್ರಿ ಇಲ್ಲದಾ ಕೆಲಸಕ್ಕೆ ಕೈ ಹಾಕಲೇಬೇಡ...೪ ಮುದ್ದು ಮಾಡುವ ಕಂದನ ಬಡಿದು ಬೆಳೆಸಬೇಡ ಹದ್ದುಮೀರಿದವರ ಲಕ್ಷ್ಯಮಾಡಲೇಬೇಡ ಕದ್ದು ಆಲಿಸುವವರ ಮಾತೆಂದು ಕೇಳಲೇಬೇಡ.. ತಾಯಿ ತಂದೆಯ ಮನವ ಎಂದೂ ನೋಯಿಸಬೇಡ..೫ ಬಡತನ ಬಂತೆಂದು ಕುಗ್ಗಿ ದುಃಖಿಸಬೇಡ ಸಿರಿತನ ಬಂತೆಂದು ಹಿಗ್ಗಿ ನಲಿಯಬೇಡ. ನಯವಿನಯ ಮಾತು ಕೇಳಿ ವಂಚಿತನಾಗಲೇಬೇಡ.. ದುಷ್ಟ ಸಂಗವ ಬಯಸಿ ನೀ ಕೆಡಲೇಬೇಡ..೬ ಸಾಹಿತ್ಯ " ಮಾಲೂರು ಜಿ ವಿ ನರಸಿಂಹಮೂರ್ತಿ" ❤✅✅🙏🙏🙏
Recordings ಅಪ್ಲೋಡ್ 27-03-2023 ರಾಜೇಶ್ ಮೈಸೂರು ಅಪ್ಲೋಡ್ ನಂ - 561 💢RAJESHMYSORE16💢 ÷÷÷÷÷÷÷÷÷÷÷÷÷÷÷ Song : Irabeku iruvante Singer : Raghavendra Beejadi Lyrics : Dr. H S Venkateshmurthy Music : Raghavendra Beejadi Label : Raghavendra Beejadi +++++++++++++++++++++++++++ S1: ಇರಬೇಕು ಇರುವಂತೆ .. ತೊರೆದು ಸಾವಿರ ಚಿಂತೆ.. ಮಳೆ ಸುರಿಸಿ ಹಗುರಾದ ಮುಗಿಲಿನಂತೆ S2: ಇರಬೇಕು ಇರುವಂತೆ.. ತೊರೆದು ಸಾವಿರ ಚಿಂತೆ.. ಮಳೆ ಸುರಿಸಿ ಹಗುರಾದ ಮುಗಿಲಿನಂತೆ S1: ಮಳೆ ಸುರಿಸಿ ಹಗುರಾದ .. ಮುಗಿಲಿನಂತೇ ಏ.. S2: ಮಳೆ ಸುರಿಸಿ ಹಗುರಾದ .. ಮುಗಿಲಿನಂತೇ.. ++++++++++ ಫಾಲೋ ಮಾಡಿ ಲೈಕ್ ಮಾಡಿ ಸಪೋರ್ಟ್ ಮಾಡಿ 🙏🙏 🏵️🏵️RAJESHMYSORE16🏵️🏵️ 🌻🌻RoopaGowda32🌻🌻 Date-27-03-2023 ಅಪ್ಲೋಡ್ ನಂ - 561 ××××××××××××× S1: ತನ್ನೊಡಲ ತಾರೆಗಳ .. ಗುಡಿಸಿ ರಾಶಿಯ ಮಾಡಿ.. ಬೆಳಕಿನುಂಡೆಯ ಬಾನಿಗುರುಳು ಬಿಟ್ಟೂ.. S2: ತನ್ನೊಡಲ ತಾರೆಗಳ .. ಗುಡಿಸಿ ರಾಶಿಯ ಮಾಡಿ.. ಬೆಳಕಿನುಂಡೆಯ ಬಾನಿಗುರುಳು ಬಿಟ್ಟೂ.. S1: ಹೇಗೆ ಮರೆಯಾಗುವುದೊ .. ನಿರ್ಧನಿಕ ನಟ್ಟಿರುಳು.. ಹಾಗೆ ಬಾಳಿಸು ಗುರುವೆ.. ಕರುಣೆಯಿಟ್ಟೂ ಊ... S2: ಹೇಗೆ ಮರೆಯಾಗುವುದೊ .. ನಿರ್ಧನಿಕ ನಟ್ಟಿರುಳು.. ಹಾಗೆ ಬಾಳಿಸು ಗುರುವೆ.. ಕರುಣೆಯಿಟ್ಟೂ ಊ.. ಹಾಗೆ ಬಾಳಿಸು ಗುರುವೆ .. ಕರುಣೆಯಿಟ್ಟೂ ಉ.. ÷÷÷÷÷÷÷÷÷÷÷÷÷÷÷÷÷÷÷÷÷÷÷÷ Lyrics H S Venkatesha Murthy Music Raghavendra Beejadi ÷÷÷÷÷÷÷÷÷÷÷÷÷÷÷÷÷÷÷÷÷÷÷÷ S1: ತಾನು ಬಿಸಿಲಲಿ ನಿಂತು .. ತನ್ನ ಬಳಿ ಬರುವವಗೆ.. ತಣ್ಣಗಿನ ಆಸರೆಯ .. ನೆರಳ ಕೊಟ್ಟೂ.. S2: ತಾನು ಬಿಸಿಲಲಿ ನಿಂತು.. ತನ್ನ ಬಳಿ ಬರುವವಗೆ.. ತಣ್ಣಗಿನ ಆಸರೆಯ .. ನೆರಳ ಕೊಟ್ಟೂ.. S1: ಹೇಗೆ ಗೆಲುವಾಗುವುದೋ .. ಹಸಿರೆಲೆಯ ಹೊಂಗೆ ಮರ ಹಾಗೆ ಬಾಳಿಸು .. ಗುರುವೆ ಪ್ರೀತಿಯಿಟ್ಟೂ ಊ.. S2: ಹೇಗೆ ಗೆಲುವಾಗುವುದೋ .. ಹಸಿರೆಲೆಯ ಹೊಂಗೆ ಮರ.. ಹಾಗೆ ಬಾಳಿಸು ಗುರುವೆ .. ಪ್ರೀತಿಯಿಟ್ಟೂ... ಹಾಗೆ ಬಾಳಿಸು ಗುರುವೆ .. ಪ್ರೀತಿಯಿಟ್ಟು ಉ.. Both: ಇರಬೇಕು ಇರುವಂತೆ .. ತೊರೆದು ಸಾವಿರ ಚಿಂತೆ ಮಳೆ ಸುರಿಸಿ ಹಗುರಾದ .. ಮುಗಿಲಿನಂತೇ.. ಮಳೆ ಸುರಿಸಿ ಹಗುರಾದ.. ಮುಗಿಲಿನಂತೇ..... ++++++++++ ಫಾಲೋ ಮಾಡಿ ಲೈಕ್ ಮಾಡಿ ಸಪೋರ್ಟ್ ಮಾಡಿ 🙏🙏 🏵️🏵️RAJESHMYSORE16🏵️🏵️ 🌻🌻RoopaGowda32🌻🌻 Date-27-03-2023 ಅಪ್ಲೋಡ್ ನಂ - 561 ×××××××××××× S1: ತಾನು ಕೆಸರಲಿ ಕುಸಿಯುತ್ತಿದ್ದರೂ.. ತಾವರೆಯು ಮರಿ ದುಂಬಿಗಳ .. ಪೊರೆವ ತೊಟ್ಟಿಲಾಗಿ.. S2: ತಾನು ಕೆಸರಲಿ ಕುಸಿಯುತ್ತಿದ್ದರೂ .. ತಾವರೆಯು ಮರಿ ದುಂಬಿಗಳ.. ಪೊರೆವ ತೊಟ್ಟಿಲಾಗಿ.. S1: ಹೇಗೆ ತಾಯ್ತನವನ್ನು ಪ್ರೀತಿಯಲಿ.. ಮೆರೆಯುವುದೋ.. ಹಾಗೆ ಬಾಳಿಸು ಗುರುವೆ .. ಕರುಣೆಯಿಟ್ಟೂ.. S2: ಹೇಗೆ ತಾಯ್ತನವನ್ನು ಪ್ರೀತಿಯಲಿ .. ಮೆರೆಯುವುದೋ.. ಹಾಗೆ ಬಾಳಿಸು ಗುರುವೆ .. ಕರುಣೆಯಿಟ್ಟೂ.. ಹಾಗೆ ಬಾಳಿಸು ಗುರುವೆ .. ಕರುಣೆಯಿಟ್ಟೂ.. ××××××××× S1: ದಾರಿಯುದ್ದಕೂ ಪೈರು .. ನಗುವಂತೆ ನೀರುಣಿಸಿ.. ಹಾಲುತೆನೆಯಲಿ .. ಅಮೃತ ತುಂಬಿ ನದಿಯೂ.. S2: ದಾರಿಯುದ್ದಕೂ ಪೈರು.. ನಗುವಂತೆ ನೀರುಣಿಸಿ.. ಹಾಲುತೆನೆಯಲಿ .. ಅಮೃತ ತುಂಬಿ ನದಿಯೂ.. S1: ಹೇಗೆ ದೂರದ ನೀಲಿಯಲ್ಲಿ .. ಕೊನೆಗೊಳ್ಳುವುದೋ .... ಓಓಹೋ.. ಹೇಗೆ ದೂರದ ನೀಲಿಯಲ್ಲಿ.. ಕೊನೆಗೊಳ್ಳುವುದೊ.. ಹಾಗೆ ಕೊನೆಗಾಣಿಸು .. ಕೃಪೆಯನಿಟ್ಟೂ ಊ... S2: ಹೇಗೆ ದೂರದ ನೀಲಿಯಲ್ಲಿ .. ಕೊನೆಗೊಳ್ಳುವುದೊ.. ಹಾಗೆ ಕೊನೆಗಾಣಿಸು .. ಕೃಪೆಯನಿಟ್ಟೂ ಉ.. ಹಾಗೆ ಕೊನೆಗಾಣಿಸು .. ಕೃಪೆಯನಿಟ್ಟೂ.. S1: ಇರಬೇಕು ಇರುವಂತೆ .. ತೊರೆದು ಸಾವಿರ ಚಿಂತೆ.. ಮಳೆ ಸುರಿಸಿ ಹಗುರಾದ .. ಮುಗಿಲಿನಂತೆ.. S2: ಇರಬೇಕು ಇರುವಂತೆ.. ತೊರೆದು ಸಾವಿರ ಚಿಂತೆ.. ಮಳೆ ಸುರಿಸಿ ಹಗುರಾದ .. ಮುಗಿಲಿನಂತೇ.. S1: ಮಳೆ ಸುರಿಸಿ ಹಗುರಾದ .. ಮುಗಿಲಿನಂತೇ.. S2: ಮಳೆ ಸುರಿಸಿ ಹಗುರಾದ .. ಮುಗಿಲಿನಂತೇ ಏಏ.. ಮಳೆ ಸುರಿಸಿ ಹಗುರಾದಾ... +++ ಮುಗಿಲಿನಂತೇ.... ಧನ್ಯವಾದಗಳು ರಾಜೇಶ್ ಮೈಸೂರು 🙋🙋🙋🙋👍👍👍👍🙏🙏🙏 Share
ತುಂಬಾ ಅಪ್ಯಾಯಮಾನವಾಗಿ ನೊಂದ ಜೀವಕ್ಕೆ ಸಾಂತ್ವನ ನೀಡುವ ಗಂಗಾಸ್ನಾನ, ತುಂಗಾ ಪಾನ ನೀಡಿದಂತೆ ಆಗಿದೆ. ಧನ್ಯವಾದಗಳು ಸರ್ 🙏👏 ಕನ್ನಡ ಭಾಷೆಯ ಪದಗಳು ಎಷ್ಟೊಂದು ಉತ್ಕೃಷ್ಟ ಗುಣಮಟ್ಟದವುಗಳು ತುಂಬಿದೆ 🙏👏♥️
ಕನ್ನಡ ಸಾಹಿತ್ಯ ಅತಿ ಹೆಚ್ಚು ಹೆಚ್ಚು ಸೊಬಗಿನ ಪದಗಳನ್ನು ಬಳಸಿದರೆ ಉತ್ಕೃಷ್ಟ ಗುಣಮಟ್ಟದ ಕಾದಂಬರಿ, ಸಾಹಿತ್ಯ ಬರುವಷ್ಟು ಇನ್ನಾವ ಭಾಷೆಯಲ್ಲಿಲ್ಲ. ಅಂತಹ ಭಾಷೆಯ ಕನ್ನಡಿಗ ನಾನೂ ಒಬ್ಬ.👏🙏♥️
ತುಂಬ ಸುಂದರ ಹಾಡು.....ಸಾಹಿತ್ಯ ಮನಮುಟ್ಟಿತು. ಎದೆಯಲ್ಲಿ ಚಳಿಗಾಲ , ಒಡಲಲ್ಲಿ ಬರಗಾಲ.... ಮರಳ ಶಾಸನ ಬರೆವ..... ಈ ಸಾಲುಗಳೆಲ್ಲ ಅದ್ಭುತವಾಗಿದೆ. ಸಂಗೀತ, ಗಾಯನದ ಬಗ್ಗೆ ಎರಡು ಮಾತಿಲ್ಲ. ಎಂದಿನಂತೆ ಸೂ.....ಪರ್