ಅಕ್ಷಯ ತೃತೀಯಕ್ಕೆ ಯಾಕೆ ಇಷ್ಟು ಮಹತ್ವ..?
ಅಕ್ಷಯ ತೃತೀಯಕ್ಕೆ ಯಾಕೆ ಇಷ್ಟು ಮಹತ್ವ ಎಂಬ ಈ ಪ್ರಶ್ನೆಗೆ ಪದ್ಮಪುರಾಣದಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ
1 ಸೂರ್ಯನು ಮೇಷ ರಾಶಿಯಲ್ಲಿ ಸಂಚಾರ ಮಾಡುತ್ತಿರುತ್ತಾನೆ. ಸೂರ್ಯನಿಗೆ ಮೇಷ ರಾಶಿ ಉಚ್ಚ ಸ್ಥಾನವಾಗಿದೆ ಅದರಲ್ಲೂ ಈ ದಿವಸ ಅತ್ಯಂತ ಗರಿಷ್ಠನಾಗಿರುತ್ತಾನೆ
2. ಹಾಗೆಯೇ ಚಂದ್ರನ ವೃಷಭ ರಾಶಿಯಲ್ಲಿ ಇರುತ್ತಾನೆ.
ವೃಷಭ ರಾಶಿ ಚಂದ್ರನಿಗೆ ಉಚ್ಚ ಸ್ಥಾನ ವಾಗಿದೆ.
3.ಎಲ್ಲಾ ಗ್ರಹಗಳಿಗೂ ತಂದೆ ತಾಯಿಯಂದಿರುವ ಸೂರ್ಯ ಮತ್ತು ಚಂದ್ರರಿಬ್ಬರು ಉಚ್ಚ ಸ್ಥಾನದಲ್ಲಿ ಇದ್ದಾಗ ಉಳಿದ ಎಲ್ಲಾ ಗ್ರಹಗಳು ಕೂಡ ಸಂತೋಷದಲ್ಲಿಯೇ ಇರುತ್ತಾರೆ.
4. ಯಾವ ಗ್ರಹಗಳು ಕೂಡ ಯಾರಿಗೂ ಕೆಡಕನ್ನು ಮಾಡುವುದಿಲ್ಲ
5. ಈ ಸಮಯದಲ್ಲಿ ಸ್ವಲ್ಪ ಪುಣ್ಯದ ಕೆಲಸವನ್ನು ಮಾಡಿದರು ಸಂಪೂರ್ಣ ಫಲವನ್ನು ನೀಡುತ್ತಾರೆ
6 ಆದ್ದರಿಂದ ವೈಶಾಖ ಮಾಸದ ಅಕ್ಷಯ ತೃತೀಯ ದಿವಸವೇ ಪುಣ್ಯದ ಕೆಲಸವನ್ನು ಮಾಡಲು ಅನಂತ ಫಲ ಎಂದು ಪುರಾಣ ತಿಳಿಸಿದೆ
7. ವೈಶಾಖಂತಾನಿ ಪಾಪಾನಿ ಸುರ್ಯಾತಾನಿ ತಮಾಂಸಿ ಚ |
ಪರೋಪಕಾರ ಪೈಶುನ್ಯ ಪ್ರಾಂತಾನಿ ಸುಕೃತಾನಿ ಚ||
ಅರ್ಥ ಕತ್ತಲೆಯ ಕೊನೆಯ ಎಂದರೆ ಸೂರ್ಯನ ಕಿರಣ ಹಾಗೆ ಎಲ್ಲಾ ಪಾಪಗಳ ಕೊನೆಯೆಂದರೆ ಅದು ವೈಶಾಖ ಮಾಸ ಹೀಗೆ ಪದ್ಮಪುರಾಣ ಪಾತಾಳ ಅಂದದಲ್ಲಿ ಒಂದು ಶ್ಲೋಕ ವೈಶಾಖ ಮಾಸದ ಮಹತ್ವ ಸಾರಿ ಹೇಳಿದೆ
8. ವೈಶಾಖ ಮಾಸದಲ್ಲಿ ಬರುವ ಅಕ್ಷಯ ತೃತೀಯ ದಿವಸ ಸಾವಿರದಷ್ಟು ಅಧಿಕ ಪುಣ್ಯವನ್ನು ನೀಡುತ್ತದೆ.
13 апр 2023