ಗಾಯನ : ಶ್ರೀ ಶ್ರೀರಂಗ ಜೋಶಿ , ಬೆಳಗಾವಿ
ರಚನೆ : ಶ್ರೀ ಮಾರುತಿ ಭೀಮಪ್ಪ ದೇಸಾಯಿ , ಗೋಕಾಕ
🇮🇳 ತಾಯ್ನಾಡಿನ ನೆಲವನು ಬೆಳಗುವೆವು 🇮🇳
ಭಾರತ ಮಾತೆಯ ಮಕ್ಕಳು ನಾವು
ಅಂದದ ನಾಡನು ಕಟ್ಟುವೆವು
ದ್ವೇಷ ಅಸೂಯೆ ದೂಡತ ನಾವು
ತಾಯ್ನಾಡಿನ ನೆಲವನು ಬೆಳಗುವೆವು
ಜಾತಿ-ಭೇದವ ತೊರೆಯುತ ನಾವು
ಮತಿಮಂದತೆ ಮರೆಯುವೆವು
ಅಭಿವೃದ್ಧಿಯ ಜಪ ಮಾಡುತ ನಾವು
ತಾಯ್ನಾಡಿನ ನೆಲವನು ಬೆಳಗುವೆವು
ಸನಾತನವನು ಉಳಿಸುತ ನಾವು
ನೆಲದ ಸಂಸ್ಕೃತಿಯ ಬೆಳೆಸುವೆವು
ದಿವ್ಯಭಾವನೆ ಹೊಂದುತ ನಾವು
ತಾಯ್ನಾಡಿನ ನೆಲವನು ಬೆಳಗುವೆವು
“ಸರ್ವೇ ಜನ ಸುಖಿನೋ ಭವಂತು” ಎನುತಲಿ ನಾವು
ಹೃದಯದಿ ಎಲ್ಲರ ಜೊತೆ ಬಾಳುವೆವು
ತ್ರಿವರ್ಣ ಧ್ವಜವನು ಹಾರಿಸುತ ನಾವು
ತಾಯ್ನಾಡಿನ ನೆಲವನು ಬೆಳಗುವೆವು
13 авг 2024