ರಾಷ್ಟ್ರೀಯ ವೈದ್ಯರ ದಿನ: ಅವಧೂತರಿಂದ ಅರ್ಥಪೂರ್ಣ ಆಚರಣೆ | ಅವಧೂತ ಶ್ರೀ ವಿನಯ್ ಗುರೂಜಿ
ಪರಮಪೂಜ್ಯ ಅವಧೂತ ಶ್ರೀ ವಿನಯ್ ಗುರೂಜಿ ಅವರು ಇಂದು ವೈದ್ಯರ ದಿನಾಚರಣೆ ಅಂಗವಾಗಿ ನಗರದ ವಿಕ್ಟೋರಿಯಾ ಆಸ್ಪತ್ರೆ ಆವರಣದಲ್ಲಿರುವ ಇನ್ಸ್ಟಿಟ್ಯೂಟ್ ಆಫ್ ಗ್ಯಾಸ್ಟ್ರೋಎಂಟರಾಲಜಿ ಸೈನ್ಸಸ್ & ಆರ್ಗನ್ ಟ್ರಾನ್ಸ್ಪ್ಲಾಂಟ್ ನಲ್ಲಿ ವಿಶೇಷವಾಗಿ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿಗಳೊಂದಿಗೆ ಕೇಕ್ ಕಟ್ ಮಾಡುವ ಮೂಲಕ ಆಚರಿಸಿದರು. ಈ ಸಂದರ್ಭ ಆಸ್ಪತ್ರೆಯ ಮುಖ್ಯ ವೈದ್ಯರಾದ ಖ್ಯಾತ ವೈದ್ಯ ಡಾ. ನಾಗೇಶ್ ಎನ್.ಎಸ್ ಅವರನ್ನು ಅವಧೂತರು ವಿಶೇಷವಾಗಿ ಸನ್ಮಾನಿಸಿದರು. ಹಾಗೂ ಆಸ್ಪತ್ರೆಯ ರೋಗಿಗಳಿಗೆ ಹಣ್ಣು ಹಂಪಲುಗಳನ್ನು ವಿತರಿಸಿದರು. ಇದಕ್ಕೂ ಮೊದಲು ಅವಧೂತ ಶ್ರೀ ವಿನಯ್ ಗುರೂಜಿಗಳು ಆಸ್ಪತ್ರೆಯ ಸುತ್ತಲೂ ವೀಕ್ಷಿಸಿ ಆಸ್ಪತ್ರೆಯ ಉತ್ತಮ ಕಾರ್ಯ ವೈಖರಿಗೆ ಡಾ. ನಾಗೇಶ್ ಎನ್.ಎಸ್ ಹಾಗೂ ಸಿಬ್ಬಂದಿಗಳಿಗೆ ಅಭಿನಂದನೆ ಸಲ್ಲಿಸಿ ಶುಭಾಶೀರ್ವಚನ ನೀಡಿದರು.
ಇನ್ನು ವಿಕ್ಟೋರಿಯಾ ಆಸ್ಪತ್ರೆ ಆವರಣದಲ್ಲಿರುವ ಇನ್ಸ್ಟಿಟ್ಯೂಟ್ ಆಫ್ ಗ್ಯಾಸ್ಟ್ರೋಎಂಟರಾಲಜಿ ಸೈನ್ಸಸ್ & ಆರ್ಗನ್ ಟ್ರಾನ್ಸ್ಪ್ಲಾಂಟ್ ನಲ್ಲಿ ಕಳೆದ 28 ತಿಂಗಳುಗಳಲ್ಲಿ ಸುಮಾರು ಒಂದು ಲಕ್ಷ ಎಂಬತ್ತು ಸಾವಿರ ರೋಗಿಗಳು ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಬಹುತೇಕ ಹತ್ತು ಸಾವಿರಕ್ಕೂ ಹೆಚ್ಚು ಶಸ್ತ್ರಚಿಕಿತ್ಸೆಗಳು ಯಶಸ್ವಿಯಾಗಿ ನಡೆದಿದೆ. ಇನ್ನು ಆಸ್ಪತ್ರೆಯು ಕೂಡಾ ಯಾವುದೇ ಖಾಸಗೀ ಆಸ್ಪತ್ರೆಗಳಿಗೂ ಕಮ್ಮಿಯಾಗದ ರೀತಿಯಲ್ಲಿ ಉತ್ತಮವಾದ ಸೇವೆ ಮತ್ತು ಸ್ವಚ್ಛತೆಯನ್ನು ಕಾಪಾಡಿಕೊಂಡು ಬಂದಿದೆ. ಅದೇ ರೀತಿ ಪ್ರಸ್ತುತ ಆಸ್ಪತ್ರೆಯಲ್ಲಿ ಡಾ.ನಾಗೇಶ್ ಅವರ ನೇತೃತ್ವದಲ್ಲಿ ಉತ್ತಮವಾದ ಆರೋಗ್ಯ ಸೇವೆ ಕೂಡಾ ಲಭ್ಯವಾಗುತ್ತದೆ. ಸರಕಾರೀ ಆಸ್ಪತ್ರೆ ಎಂಬ ತಾತ್ಸಾರವನ್ನು ಬಿಟ್ಟು ಅತ್ಯಂತ ಕಡಿಮೆ ವೆಚ್ಚದಲ್ಲಿ ಚಿಕಿತ್ಸೆಗಾಗಿ ರಾಜ್ಯದ ಯಾವ ಮೂಲೆಯಲ್ಲಿರುವ ರೋಗಿಗಳಾದರೂ ಇಲ್ಲಿ ಭೇಟಿ ನೀಡಬಹುದು. ಇಂತಹ ಉತ್ತಮ ಸೇವೆ ಮತ್ತು ಸೌಲಭ್ಯವನ್ನು ನಿರ್ವಹಿಸಿಕೊಂಡು ಬಂದಿರುವ ಡಾ. ನಾಗೇಶ್ ಎನ್.ಎಸ್ ಅವರ ಕಾರ್ಯ ಶ್ಲಾಘನೀಯ ಹಾಗೂ ಇಲ್ಲಿನ ಸಿಬ್ಬಂದಿಗಳೂ ಉತ್ತಮ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಪರಮಪೂಜ್ಯ ಅವಧೂತ ಶ್ರೀ ವಿನಯ್ ಗುರೂಜಿ ಅವರು ಅಭಿಪ್ರಾಯಪಟ್ಟರು.
ಆಸ್ಪತ್ರೆ ಕುರಿತು ಹೆಚ್ಚಿನ ಮಾಹಿತಿಗಾಗಿ:
ಇನ್ಸ್ಟಿಟ್ಯೂಟ್ ಆಫ್ ಗ್ಯಾಸ್ಟ್ರೋಎಂಟರಾಲಜಿ ಸೈನ್ಸಸ್ & ಆರ್ಗನ್ ಟ್ರಾನ್ಸ್ಪ್ಲಾಂಟ್
ವಿಕ್ಟೋರಿಯಾ ಆಸ್ಪತ್ರೆ ಆವರಣ, ಕೆ,ಆರ್ ಮಾರ್ಕೆಟ್ ರಸ್ತೆ, ಬೆಂಗಳೂರು - 560002
ದೂರವಾಣಿ: 080-26707727
30 июн 2024