#ಶ್ರೀಲಲಿತಾ_ಸಹಸ್ರನಾಮ
ಸ್ನೇಹಿತರೇ ನನಗೆ ಎಷ್ಟೋ ಜನ ಕೇಳ್ತೀರಾ ಶ್ರೀಚಕ್ರ ಇದ್ರೆ ಮಾತ್ರ ಶ್ರೀ ಲಲಿತಾಸಹಸ್ರನಾಮ ಹೇಳಬೇಕಾ ಶ್ರೀಚಕ್ರ ಪೂಜೆ ಮಾಡಿದರೆ ಮಾತ್ರ ಲಲಿತಾ ಸಹಸ್ರನಾಮ ಹೇಳಬೇಕಾ , ನಮ್ಮ ಮನೆಯಲ್ಲಿ ಶ್ರೀಚಕ್ರ ಇಲ್ಲ ಏನು ಮಾಡುವುದು ಅಂತ , ಶ್ರೀ ಚಕ್ರ ಅಂದರೆ ಏನು ಶ್ರೀ ಅಂದರೆ ದೇವಿ ಚಕ್ರ ಅಂದರೆ ಮಂಡಲ , ಅಂದರೆ ಶ್ರೀಚಕ್ರಾಂತರ ವಾಹಿನಿ ಅಂತ ಲಲಿತೆಗೆ ಹೇಳುತ್ತೇವೆ , ದೇವಿಯ ಸ್ವರೂಪವೇ ಶ್ರೀಚಕ್ರ. ಅಕಸ್ಮಾತಾಗಿ ನಿಮ್ಮನೆಯಲ್ಲಿ ಶ್ರೀಚಕ್ರ ಇಲ್ಲದಿದ್ದರೂ ನಿಮ್ಮ ಕುಲದೇವಿ ,ನೀವು ಆರಾಧಿಸುವ ಯಾವುದೇ ದೇವಿಯನ್ನು ಪೂಜಿಸಿ , ದೇವಿಯ ಭಾವಚಿತ್ರ ಇರಬಹುದು ,ಇಲ್ಲ ಮೂರ್ತಿ ನೀವು ಯಾವುದನ್ನು ಭಕ್ತಿಯಿಂದ ದೇವಿ ಪೂಜೆಯನ್ನು ಮಾಡುತ್ತಿರೊ ಆ ದೇವಿಯ ಮುಂದೆ ತುಪ್ಪದ ದೀಪ ಹಚ್ಚಿ ಲಲಿತಾ ಸಹಸ್ರನಾಮ ಹೇಳಬಹುದು . ಅಕಸ್ಮಾತಾಗಿ ನಮಗೆ ಬೆಳಿಗ್ಗೆ ಹೇಳಲಿಕ್ಕೆ ಆಗುವುದಿಲ್ಲ ಅಂದರೆ ಸಂಜೆ ಸಮಯದಲ್ಲಿ ಕೈಕಾಲು ಮುಖ ತೊಳೆದು ಒಗೆದ ಬಟ್ಟೆಗಳನ್ನು ಧರಿಸಿ ಹೇಳಿ ಹಣ್ಣು ,ಹಾಲು , ತೆಂಗಿನಕಾಯಿ, ಕೊಬ್ಬರಿ ಸಕ್ಕರೆ ಹೀಗೆ ಏನಾದರೂ ನೈವೇದ್ಯ ತೋರಿಸಿ ಆರತಿ ಮಾಡಬಹುದು....
ಶ್ರೀಚಕ್ರ ಇಲ್ಲ ಲಲಿತಾ ಸಹಸ್ರನಾಮ ದಿಂದ ಕುಂಕುಮಾರ್ಚನೆ ಮಾಡಬೇಕು ಅಂದ್ರೆ ನೀವು ಪೂಜಿಸುವ ದೇವಿಯ ಭಾವಚಿತ್ರ ಮೂರ್ತಿ ಮುಂದೆ ಒಂದು ಬೆಳ್ಳಿ ತಾಮ್ರ ಬಟ್ಟಲು ಅಥವಾ ತಟ್ಟೆ ಇಟ್ಟು ಸಹಸ್ರನಾಮ ಹೇಳುತ್ತಾ ಕುಂಕುಮಾರ್ಚನೆ ಮಾಡಬಹುದು. ಇಲ್ಲ ಇವತ್ತು ನಾನು ಹಾಕಿರುವ ಶ್ರೀಚಕ್ರ ಮಂಡಲ ರಂಗೋಲಿ ಹಾಕಿ ದೀಪ ಹಚ್ಚಿಟ್ಟು ಲಲಿತಾ ಸಹಸ್ರನಾಮ ಹೇಳಬಹುದು. ಇದರ ಮಹಿಮೆಸ ಅಪಾರ , ಯಾರಿಗೆ ಮನೆ ಇಲ್ಲ ಬಾಡಿಗೆ ಮನೆಯಲ್ಲಿ ಇದ್ದು ಒದ್ದಾಡುತ್ತಿದ್ದೀರಾ ಅವರು ಸ್ವಂತ ಮನೆ ಸಂಕಲ್ಪ ಮಾಡಿ ಪ್ರತಿದಿನ ಹೇಳಿದರೆ ಸ್ವಂತ ಸೂರು ಖಂಡಿತ.. ನಿಮ್ ಮನಸಲ್ಲಿ ಏನೇ ಇದ್ದರೂ ಅದನ್ನು ಸಂಕಲ್ಪ ಪೂರ್ವಕ ಮಾಡಿ ಹೇಳಿದರೆ ಫಲ ಶತಸಿದ್ಧ , ಒಂದು ಮಂಡಲ ಅಂತ ನಲವತ್ತೊಂದು ದಿನ ಸಂಕಲ್ಪ ಮಾಡಿ ಹೇಳಬಹುದು , ಇಲ್ಲ ಪ್ರತಿ ಶುಕ್ರವಾರ ಮಂಗಳವಾರ ಕೂಡ ಹೇಳಬಹುದು , ಇಲ್ಲ ಪ್ರತಿದಿನ ಕೂಡ ಹೇಳಿ ಅದ್ಭುತ ಫಲಿತಾಂಶ ಖಂಡಿತ... ಆದರೆ ಉಚ್ಚಾರ ಸ್ಪಷ್ಟವಾಗಿರಬೇಕು ,ತಪ್ಪು ತಪ್ಪು ಹೇಳಬೇಡಿ ,
ಶ್ರೀ ಲಲಿತಾಸಹಸ್ರನಾಮಸ್ತೋತ್ರವು ಬ್ರಹ್ಮಾಂಡಪುರಾಣದ ಉತ್ತರಖಂಡದ ಹಯಗ್ರೀವ-ಅಗಸ್ತ್ಯಸಂವಾದದಲ್ಲಿದೆ.
ಇದರಲ್ಲಿ ಪೀಠಿಕೆ, ಸಹಸ್ರನಾಮ ಮತ್ತು ಫಲಶ್ರುತಿ ಎಂಬ ಮೂರು ಭಾಗಗಳಿವೆ. ಆ ಪರಬ್ರಹ್ಮಸ್ವರೂಪಿಣಿಯೇ ಉದ್ಯದ್ಭಾನುವಿಗೆ ಸಮನಾದ ಕಾಂತಿಯಿಂದೊಡಗೂಡಿ, ದಾಳಿಂಬೆ ಬಣ್ಣದ ಸೀರೆಯನ್ನುಟ್ಟು, ಸರ್ವಾಭರಣ ಭೂಷಿತೆಯಾಗಿ, ಪಾಶಾಂಕುಶ-ಇಕ್ಷುಕೋದಂಡ ಬಾಣಗಳಿಂದೊಡಗೂಡಿ ಆನಂದ ಸಾಗರಳಾದ ಶ್ರೀ ಲಲಿತಾ ತ್ರಿಪುರಸುಂದರಿಯಾಗಿ ಹದಿನಾರು ವರುಷದ ಯುವತಿಯಾಗಿ ಇಂದ್ರಾದಿದೇವತೆಗಳು ಮಾಡಿದ ಮಹಾಯಜ್ಞದ ಚಿದಗ್ನಿಕುಂಡದಿಂದ ಭಂಡಾಸುರನೆಂಬ ದುಷ್ಟದೈತ್ಯನನ್ನು ಸಂಹರಿಸಲು ಲೋಕಾನುಗ್ರಹಕ್ಕಾಗಿ ದೇವತೆಗಳ ಪ್ರಾರ್ಥನೆಯಂತೆ ಆವಿರ್ಭವಿಸಿದಳು.
ಅನೇನ ಸದೃಶಂ ಸ್ತೋತ್ರಂ ನ ಭೂತಂ ನ ಭವಿಷ್ಯತಿ |
ಸರ್ವರೋಗ ಪ್ರಶಮನಂ ಸರ್ವಸಂಪತ್ ಪ್ರವರ್ಧನಮ್ ||
ಈ ಲಲಿತಾಸಹಸ್ರನಾಮಕ್ಕೆ ಸಮಾನವಾದ ಸ್ತೋತ್ರವು ಹಿಂದೆ ಇರಲಿಲ್ಲ. ಇನ್ನು ಮುಂದೆಯೂ ಇರುವದಿಲ್ಲ.
ಇದು ಸರ್ವರೋಗಗಳನ್ನೂ ಭವರೋಗವೂ ಸೇರಿದಂತೆ ನಿವಾರಿಸಿ ಸರ್ವಸಂಪತ್ತನ್ನೂ ವರ್ಧಿಸುತ್ತದೆ. ಅಪಮೃತ್ಯು, ಕಾಲಮೃತ್ಯು, ಸರ್ವಜ್ವರಗಳನ್ನು ನಿವಾರಿಸುತ್ತದೆ; ದೀರ್ಘಾಯುಷ್ಯವನ್ನೂ ನೀಡುತ್ತದೆ.
ಪುತ್ರಪ್ರದಮಪುತ್ರಾಣಾಂ ಪುರುಷಾರ್ಥಪ್ರದಾಯಕಮ್ l
ಇದಂ ವಿಶೇಷಾಚ್ಛ್ರೀದೇವ್ಯಾಃ ಸ್ತೋತ್ರಂ ಪ್ರೀತಿ ವಿಧಾಯಕಮ್ ॥
ಇದು ಮಕ್ಕಳಿಲ್ಲದವರಿಗೆ ಮಕ್ಕಳನ್ನು ಕೊಡುವುದು ಮತ್ತು ಪುರುಷಾರ್ಥವನ್ನು ಕೊಡುವುದು. ಈ ಸ್ತೋತ್ರವು ಶ್ರೀ ದೇವಿಗೆ ವಿಶೇಷವಾಗಿ ಪ್ರೀತಿದಾಯಕ ವಾಗಿರುವುದು
ವೀಣಾ ಜೋಶಿ
5 окт 2021