ನಮಸ್ತೆ ಆಚಾರ್ಯ ರೆ ಹೋಗುತ್ತಿದೆ ಆಯುಷ್ಯ ಪಾರ್ಟ್ ಒಂದು ಮತ್ತು ಎರಡು ಕೇಳಿದೆ. ಎಷ್ಟೊಂದು ಸುಂದರವಾಗಿ ವರ್ಣಿಸಿದ್ದಿರ. ಜಗದ ಒಡೆಯ ಶ್ರೀ ಕೃಷ್ಣ ಅವರಲ್ಲಿ ಇಟ್ಟ ನಂಬಿಕೆ. ಅದೆ ಕೊನೆಗೆ ನಮ್ಮ ಮುಕ್ತಿಯ ಮಾರ್ಗ. ನಾನು ಬ್ರಾಹ್ಮಣ ಅಲ್ಲ ಶೆಟ್ಟಿ ನಾಗವಂಶ ಕ್ಷ ತ್ರೀಯ. ಅನ್ನುತ್ತಾರೆ. ದೇವರ ಕೀರ್ತನೆ ಯಾರೂ ಮಾಡ ಬಹುದು. ದೇವರ ನಾಮ ಅಂದರೆ ನನ್ನ ತುಂಬಾ ಪ್ರಿಯವಾದ ನಾಮ ಶ್ರೀ ರಾಮ ಜೈ ರಾಮ ಜೈ ಜೈ ರಾಮ್. ನಾನು ಮಾಡುತ್ತೇನೆ. ನಾಮ ಜಪ ಮಾಡುತ್ತಲೇ ಇರಬೇಕು. ಎಷ್ಟು ಅಂದರೆ ಮಜ್ಜಿಗೆ ಕಡೆದು ಕಡೆದು ಬೆಣ್ಣೆ ಬರುವ ತನಕ ಒಮ್ಮೆ ಬೆಣ್ಣೆ ಮೇಲೆ ಬಂದರೆ ಪರಮಾತ್ಮನ ದಯೆ ನಮ್ಮ ಮೇಲೆ ಆಯಿತು. ಸ್ವಾಮಿ ನೀವು ಹೇಳಿದ ಹಾಗೆ ನಾಳೆಯ ದಿನ ನೋಡಿದವರು ಯಾರು. ನಾಳೆ ಮಾಡುವ ಕೆಲಸ ಇಂದೆ ಮಾಡುವ. ನಾನು ನಿಮ್ಮ ಪ್ರತೀ ಒಂದು ಪ್ರವಚನ ಕೇಳುತ್ತೇನೆ. ನಿಮ್ಮ ಬಾಯಿಂದ ಕೇಳುವ ಭಾಗವತ ಕೇಳುತ ಹೋದರೆ ನಮ್ಮನ್ನೆ ನಾವು ಮರೆಯುತ್ತೇವೆ. ತುಂಬಾ ಸಂತೋಷ ವಾಯಿತು.ಧನ್ಯವಾದಗಳು.