ಮಂಗಳೂರು: ಕರಾವಳಿಯಲ್ಲಿ ಬಿಪರ್ ಜಾಯ್ ಚಂಡಮಾರುತದ ಪ್ರಭಾವ ಹಿನ್ನಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬೆಳಗ್ಗಿನಿಂದಲೇ ಮಳೆಯಾಗುತ್ತಿದೆ.
ಅರಬ್ಬೀ ಸಮುದ್ರ ಪ್ರಕ್ಷುಬ್ಧಗೊಂಡಿದ್ದು, ರಕ್ಕಸ ಗಾತ್ರದ ಅಲೆಗಳು ದಡಕ್ಕೆ ಅಪ್ಪಳಿಸುತ್ತಿವೆ. ಸಮುದ್ರ ತೀರಕ್ಕೆ ಜನರು ಹೋಗದಂತೆ ಜಿಲ್ಲಾಡಳಿತವು ಎಚ್ಚರಿಕೆ ನೀಡಿದೆ. ಆದರೂ ಕಡಲ ತೀರದಲ್ಲಿ ಪ್ರವಾಸಿಗರ ಹುಚ್ಚಾಟ ಹೆಚ್ಚಾಗಿದೆ.
ಕಡಲ ಅಬ್ಬರದ ಜೊತೆ ಫೋಟೋಗಳಿಗೆ ಫೋಸ್ ಕೊಡುತ್ತಿದ್ದ ಯುವತಿಯರ ಮೇಲೆ ದೊಡ್ಡ ಅಲೆಗಳು ಅಪ್ಪಳಿಸಿದವು. ಅಲೆಯ ಅಬ್ಬರಕ್ಕೆ ಯುವತಿಯರು ಕೆಲ ಸಮಯ ತಬ್ಬಿಬ್ಬಾದರು. ಕೊನೆಗೆ ಯುವತಿಯರಿಗೆ ದಡದಿಂದ ಜಾಗ ಖಾಲಿ ಮಾಡುವಂತೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.ಮುಂದಿನ 48 ಗಂಟೆಗಳ ಕಾಲ ಗಾಳಿಯ ವೇಗ ಹೆಚ್ಚುವ ಸಾಧ್ಯತೆ ಇದ್ದು, ಗಂಟೆಗೆ 40-50 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ. ದಕ್ಷಿಣ ಕನ್ನಡ ಜಿಲ್ಲಾಡಳಿತವು ಪರಿಸ್ಥಿತಿಯನ್ನು ಎದುರಿಸಲು ಸಹಾಯವಾಣಿ ತೆರೆದಿದೆ.
Rains lash parts of MangaluruIMD has advised fishermen not to venture into the sea till June 12
The Karnataka State Natural Disaster Monitoring Centre (KSNDMC) has predicted rain coupled with strong winds in Dakshina Kannada, Kodagu, Kolar, Udupi, and Uttara Kannada.
#mangalore #rain #beach
Our Website : Vijaykarnataka.com
Facebook: / vijaykarnataka
Twitter: / vijaykarnataka
10 июн 2023