ನಿಮ್ಮ ವಿಶ್ವಾಸವೇ ನಿಮ್ಮನ್ನು ಗುಣಪಡಿಸುತ್ತದೆ.
ನಮ್ಮ ಸ್ಥಾಪಕ ಪಿತಾಮಹರಾದ ಡಾ. ಕೆ. ಭುಜಂಗ ಶೆಟ್ಟಿಯವರು, ಈ ನಂಬಿಕೆಯನ್ನೇ ಮೂಲಮಂತ್ರವನ್ನಾಗಿಸಿದ್ದು, ನಾರಾಯಣ ನೇತ್ರಾಲಯದಲ್ಲಿ ನಮ್ಮೆಲ್ಲ ಕಾರ್ಯಗಳಿಗೂ ಇದು ಸ್ಪೂರ್ತಿವಾಕ್ಯವಾಗಿದೆ. ನೀವು ನಮ್ಮನ್ನಗಲಿ ಒಂದು ವರ್ಷ ಕಳೆದಿದೆ ಆದರೆ ನಿಮ್ಮ ಅಚಲವಾದ ನಂಬಿಕೆ ಮತ್ತು ಈ ಸಂಸ್ಥೆಗೆ ನೀವಿತ್ತ ಬಲವಾದ ಅಡಿಪಾಯದಿಂದ ನೀವು ನಮ್ಮ ಮನಸ್ಸುಗಳಲ್ಲಿ ಚಿರಸ್ಥಾಯಿಯಾಗಿದ್ದೀರಿ.
ವಿಶ್ವಾಸವೇ ಗುಣಪಡಿಸುತ್ತದೆ ಎಂಬ ನಿಮ್ಮ ಪರಂಪರೆಯನ್ನು ಮುಂದುವರಿಸುತ್ತಾ, ನಾವು ನಿಮ್ಮನ್ನು ಅತ್ಯಂತ ಪ್ರೀತಿ ಮತ್ತು ಗೌರವದಿಂದ ಕಾಣುತ್ತೇವೆ. ನಿಮ್ಮ ಮಾರ್ಗದರ್ಶನದಲ್ಲೇ ಮುಂದುವರೆಯುತ್ತಾ ಅಸಂಖ್ಯಾತ ಜನರ ಜೀವನದಲ್ಲಿ ಬದಲಾವಣೆ ತರುವ ನಿರಂತರ ಪ್ರಯತ್ನ ಮಾಡುತ್ತೇವೆ
17 май 2024