ಕುಜನು (ಮಂಗಳನು) ಈ ಸಂವತ್ಸರದ ಅಧಿಪತಿ ಇರುವುದರಿಂದ ನಮಗೆ ಯಾವ ರೀತಿ ಫಲ ಬರುವುದು ಎಂದು ತಿಳಿಸುತ್ತೇನೆ
ರಾಜ ಕಾಲಸ್ಯಕಾರಕಹ ಎಂದು ಶಾಸ್ತ್ರದಲ್ಲಿ ಇರುವುದರಿಂದ ರಾಜ ಹೇಗೆ ಇರುವನು ಆ ರೀತಿ ನಮಗೆ ಫಲ ಇರುವುದು.
ಮಂಗಳನು ಪಾಪಗ್ರಹ ಆಗಿರುವನು.
ಆದ್ದರಿಂದ ಈ ಸಂವತ್ಸರದಲ್ಲಿ ರಾಜರುಗಳೆಲ್ಲ ಕಾಮ ಪೀಡಿತರು ಮತ್ತು ಕಲಹ ಯುದ್ಧ ಗಳಲ್ಲಿ ನಿರತರು ಆಗಿರುವರು.
ಈ ಸಂವತ್ಸರದಲ್ಲಿ ಮಳೆಯೂ ಮಾಧ್ಯಮ ರೀತಿಯಲ್ಲಿ ಇರುವುದು.
ಮಂಗಳನು (ಕುಜನೂ) ಭೂಮಿಪುತ್ರನಾಗಿರುವುದರಿಂದ ಆಹಾರ ಧಾನ್ಯಗಳು ಹೆಚ್ಚಾಗಿ ಬೆಳೆಯುವ ಸಾಧ್ಯತೆ ಇದೆ.
||ಶ್ರೀ ಕೃಷ್ಣಾರ್ಪಣಮಸ್ತು||
24 мар 2024